ಬೆಂಬಲಿಗರು

ಬುಧವಾರ, ಜನವರಿ 8, 2014

ನಮ್ಮ ಶಾಲೆ ಯಲ್ಲಿ ಶತ ಸಂಭ್ರಮ

ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಕನ್ಯಾನ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಆಯಿತು.ಈಗ ಅದರ ಹೆಸರು


ದ ಕ ಜಿಲ್ಲಾ ಪರಿಷದ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ. ನಮ್ಮ ಮನೆಯಿಂದ ಎರಡುವರೆ ಮೈಲು ದೂರ . ಆಗ ಶಾಲೆಯಲ್ಲಿ


ವಿದ್ಯುತ್ ಸಂಪರ್ಕ ,ನಳ್ಳಿ ನೀರು ಮತ್ತು ಶೌಚಾಲಯ ಇರಲಿಲ್ಲ .ಅದು ದೊಡ್ಡ ಕೊರತೆಯೆಂದು ಆಗ ಅನಿಸುತ್ತಿರಲಿಲ್ಲ.


ತಮ್ಮ ವೃತ್ತಿಯನ್ನು ಪ್ರೀತಿಸುತ್ತಿದ್ದ ಅಧ್ಯಾಪಕ ಗಣ ಇತ್ತು.


ಈ ವರ್ಷ ಶಾಲೆ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ .ಅದರ ಉದ್ಘಾಟನಾ ಕಾರ್ಯಕ್ರಮ  ೬.೧.೨೦೧೪ ರಂದು

ನೆರವೇರಿತು.ಮಕ್ಕಳು ಉತ್ಸಾಹದಲ್ಲಿದ್ದರು. ಮೊದಲಾಗಿ ಬ್ಯಾಂಡ್ ವಾದ್ಯಗಳೊಡನೆ ಊರ ಬೀದಿಗಳಲ್ಲಿ  ಮೆರವಣಿಗೆ ,ಪುಟಾಣಿ

ಮಕ್ಕಳೊಡನೆ ಹೆಜ್ಜೆ ಹಾಕುವಾಗ ನಮ್ಮ ಬಾಲ್ಯದ ನೆನಪುಗಳು ಬಂದುವು..

                                             


                                                                        
                                                                   

                                                      
          ನನ್ನ ಪುಣ್ಯ .ನನ್ನ ಇಬ್ಬರು ಅಧ್ಯಾಪಕರು ಕಾರ್ಯಕ್ರಮಕ್ಕೆ ಬಂದಿದ್ದರು .ಶ್ರೀ ಜನಾರ್ಧನ ಶೆಟ್ಟಿ ಮತ್ತು  ಅರ್ಪಿಣಿ

ಕೊರಗಪ್ಪ ರೈ.ರಾಷ್ಟ್ರಕವಿ  ದಿ ಶಿವರುದ್ರಪ್ಪನವರು ತಮ್ಮ ಗುರು ಕುವೆಂಪು ಬಗ್ಗೆ ಬರೆದ ಕವನ ನೆನಪಾಯಿತು

                          
ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ, ಗುಟ್ಟುಗಳ!
ಎಷ್ಟೊಂದು ಕೀಲಿ ಕೈಗಳನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನು ತೆರೆದಿದ್ದೀರಿ ನನ್ನೊಳಗೆ;
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ,
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ
ನನ್ನ ಸುತ್ತ
ಪಟ ಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸಹುಟ್ಟುಗಳ ಹಾಕುತ್ತ.



                 ಹಾಗೆಯೇ ಕುವೆಂಪು ಪಂಜೆ ಮಂಗೇಶರಾಯರ ಬಗ್ಗೆ  'ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ ಕಚ್ಚಿದರೆ

 ಕಬ್ಬಾಗಿ ಹಿಂಡಿದರೆ ಜೇನಾಗಿ  ನಿಮ್ಮುತ್ತಮಿಕೆಯ   ಮೆರೆದಿರಯ್ಯ ' ಎಂದು ಬರೆದ ಸಾಲುಗಳು ನೆನಪಾದುವು 
   
                             


                                  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ