ಬೆಂಬಲಿಗರು

ಬುಧವಾರ, ಅಕ್ಟೋಬರ್ 2, 2013

ಬೆಲ್ಟ್ ಏರಿಯ

ಬೆಲ್ಟ್ ಏರಿಯ  - ಈ ಶಬ್ದ ನೀವು ಕೇಳಿರಲಿಕ್ಕಿಲ್ಲ.೧೯೭೭ ನೇ ಇಸವಿ ಗೆ ಮೊದಲು ಅಂತರ್ ರಾಜ್ಯ ಆಹಾರ ಧಾನ್ಯ


ಸಾಗಣೆಗೆ ನಿರ್ಬಂಧ ಇತ್ತು .ಇದರ ಪ್ರಕಾರ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆಹಾರ ಧಾನ್ಯಗಳನ್ನು ಸರಕಾರದ


ಅನುಮತಿಯಿಲ್ಲದೆ ಸಾಗಿಸುವಂತೆ ಇಲ್ಲ. ಇದಕ್ಕಾಗಿ ಕೇರಳ ಗಡಿಗಿಂತ ಹತ್ತು ಹನ್ನೆರಡು ಮೈಲು ಈ ಕಡೆ ಮುಖ್ಯ ರಸ್ತೆಯಲ್ಲಿ

ತಪಾಸಣಾ ಗೇಟ್ ಹಾಕಿದ್ದರು .ಈ ಗೇಟ್ ನಿಂದ ಕೇರಳ ಗಡಿಯ ವರೆಗೆ ಇರುವ ಪ್ರದೇಶವನ್ನು  ಬೆಲ್ಟ್ಏರಿಯ ಎಂದು

ಕರೆಯುತ್ತಿದ್ದರು.ಕನ್ಯಾನ ,ಕರೋಪಾಡಿ ,ಅಳಿಕೆ ಗ್ರಾಮಗಳು ಇದರ ವ್ಯಾಪ್ತಿಯಲ್ಲಿ ಬರುತ್ತಿದ್ದವು .ವ್ಯಾವಹಾರಿಕವಾಗಿ ಇದು

ಬೇರೆ ರಾಜ್ಯದಂತೆ ಆಗಿತ್ತು .ಕೇಂದ್ರ ಭಾಗದಿಂದ ಬೆಲ್ಟ್ ಏರಿಯದೊಳಗೆ ಆಹಾರ ಧನ್ಯ ಸಾಗಣೆಗೆ ನಿಷೇಧ ಇತ್ತು .


ಸಮಾರಂಭಗಳಿಗೆ  ತಹಶೀಲ್ದಾರ್ ಅವರ ವಿಶೇಷ ಅನುಮತಿ (ಪರ್ಮಿಟ್ ) ಪಡೆದು ಧಾನ್ಯಗಳನ್ನು ಸಾಗಿಸ ಬೇಕಿತ್ತು .

                     ವಿಟ್ಲದ ಸಮೀಪ ಉಕ್ಕುಡ ದಲ್ಲಿ ಒಂದು ತಪಾಸಣಾ ಗೇಟ್ .ಇಲ್ಲಿ ಎಲ್ಲಾ ವಾಹನಗಳನ್ನು ನಿಲ್ಲಿಸಿ

ಚೆಕ್ ಮಾಡುತ್ತಿದ್ದರು .ಮೀನು ಮಾರುವ ಹೆಂಗಸರ ಬುಟ್ಟಿ,ಪ್ರಯಾಣಿಕರ ಚೀಲ ದೊಳಗೆ ಅಕ್ಕಿ ,ಅವಲಕ್ಕಿ ಇತ್ಯಾದಿ

ಇದೆಯೋ ಎಂದು ನೋಡುತ್ತಿದ್ದರು .

                                        ಬಹಳ ಮಂದಿ  ಕಾಡಿನ ದಾರಿಯ ಮೂಲಕ ತಲೆ ಹೊರೆಯಲ್ಲಿ ಅಕ್ಕಿಯನ್ನು ಕೇರಳಕ್ಕೆ

ಸಾಗಿಸಿ ಹಣ ಸಂಪಾದಿಸುತ್ತಿದ್ದರು .ಕೆಲವರು ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲಿಗೆ ಹೋದದ್ದೂ ಇದೆ .ಈ ಸಂಬಂಧ

ಅನೇಕ ಕೇಸುಗಳು ಇನ್ನೂ ಇತ್ಯರ್ಥವಾಗಿಲ್ಲವೆಂದು ಓದಿದ ನೆನಪು.ಸಂದರ್ಭಾನುಸಾರವಾಗಿ ಮನುಷ್ಯನು ಜೀವನ

ಮಾರ್ಗ ಕಂಡು ಹಿಡಿಯುತ್ತಾನೆ ಎಂಬುದಕ್ಕೆ ನಿದರ್ಶನ .

                       ಇದೇ ದೇಶದ ನಾಗರಿಕರಾಗಿ ಇದೇ ರಾಜ್ಯದ ಒಂದು  ಭಾಗವಾಗಿದ್ದೂ ಆಹಾರ ಧಾನ್ಯ ವನ್ನು ಕಳ್ಳರಂತೆ

ಸಾಗಿಸ ಬೇಕಾದ ದೌರ್ಭಾಗ್ಯ ಈ ಭಾಗ ದವರದು ಆಗಿತ್ತು .ಅರ್ಧ ಕಿಲೋ ಒಂದು ಕಿಲೋ ಅಕ್ಕಿಯನ್ನೂ ನಿರ್ದಾಕ್ಷಿಣ್ಯವಾಗಿ

ವಶ ಪಡಿಸಿ ಕೊಳ್ಳಲಾಗುತ್ತಿದ್ದ  ಆ ದೃಶ್ಯವನ್ನು ನೆನೆಸಿ ಕೊಂಡರೆ ಹೊಟ್ಟೆ ತೊಳಸಿದಂತೆ ಆಗುವುದು .

    ೧೯೭೭ರಲ್ಲಿ ಕೇಂದ್ರದಲ್ಲಿ ಜನತಾ ಸರಕಾರ ಬಂದಾಗ ಅಂತರ ರಾಜ್ಯ ಆಹಾರ ಸಾಗಾಟ ನಿರ್ಬಂಧ ತೆಗೆಯುವುದರೊಂದಿದೆ

ಈ ಗೇಟುಗಳೂ ಗತ ಕಾಲಕ್ಕೆ ಸೇರಿದವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ