ಬೆಂಬಲಿಗರು

ಮಂಗಳವಾರ, ಅಕ್ಟೋಬರ್ 6, 2020

ಕೈಗುಣ

ವೈದ್ಯರಿಗೆ ಕೆಲವೊಮ್ಮೆ  ಸುಮ್ಮನೆ ಶ್ರೇಯಸ್ ಲಭಿಸಿದರೆ  ಕೆಲವೊಮ್ಮೆ ಟೀಕೆ ಬೈಗುಳು .ಮನೆಗೆ  ಬಂದ ಸೊಸೆಯ ಕಾಲ್ಗುಣದಂತೆ .

 ಒಂದು ಉದಾಹರಣೆ ಕೊಡುವೆನು .ಡೆಂಗೀ ಕಾಯಿಲೆ ಸೀಸನ್ ನಲ್ಲಿ  ಜ್ವರ ಮೈ ಕೈ ನೋವು ಎಂದು ಬಂದವರಿಗೆ  ನಾವು ರಕ್ತ ಪರೀಕ್ಷೆ ಮಾಡಿಸುತ್ತೇವೆ .ಪಾಸಿಟಿವ್ ಇದ್ದರೆ  ಜ್ವರದ ಮಾತ್ರೆ ಪಾರಸಿಟಮಾಲ್  ಕೊಡುತ್ತೇವೆ .ವಾಂತಿ ,ತೀವ್ರ  ನಿಶ್ಶಕ್ತಿ ಇದ್ದರೆ ಗ್ಲುಕೋಸ್  ಡ್ರಿಪ್ ಕೊಡುತ್ತೇವೆ .ಯಾಕೆಂದರೆ  ಈ ಕಾಯಿಲೆಗೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ ಮತ್ತು ಬಹುತೇಕ ತಾನೇ ಗುಣ ಹೊಂದುವ ರೋಗ .ನಾನು ರೋಗಿಗಳಿಗೆ ಇದನ್ನು ವಿವರಿಸಿ ಹೇಳುವೆನು.ಮತ್ತು ಇದಕ್ಕೆ ಔಷಧಿ ಇಲ್ಲಾ ಎಂಬುದನ್ನೂ ಒತ್ತಿ ತಿಳಿಸುವೆನು .ಆದರೂ ಗುಣ ಹೊಂದಿದ ಕೆಲವರು ನನ್ನಲ್ಲಿ ಈ ರೋಗಕ್ಕೆ ವಿಶೇಷ ಔಷಧಿ ಇದೆ ಎಂದು ತಮ್ಮ ಬಂಧುಗಳನ್ನೂ ಕರೆದು ಕೊಂಡು ಬರುವರು .ಇದರಿಂದ ನನಗೆ ಭಾರೀ ಮುಜುಗರ ಆಗುವುದು .

 ಇದೇ ಕೆಲವೊಮ್ಮೆ ಅಪರೂಪದ ಕಾಯಿಲೆಗಳನ್ನು ಕಷ್ಟ ಪಟ್ಟು  ಕಂಡು ಹಿಡಿದು ಅದಕ್ಕೆ ಶೀಘ್ರ ಪರಿಹಾರ ಇಲ್ಲ ಎಂದೋ  ಕಷ್ಟವೆಂದೋ ಹೇಳಿದರೆ  ನಮ್ಮನ್ನು ಮನಸ್ಸಲ್ಲೇ ಬೈದು ಬೇರೆ ವೈದ್ಯರಲ್ಲಿ ಹೋಗುವರು .

ರೋಗಿಗಳ ರೋಗ  ವಿವರಗಳನ್ನು ಶಾಂತವಾಗಿ ಕೇಳುವುದು ಮತ್ತು ಶಾಸ್ಟ್ರೀಯ ಪರೀಕ್ಷೆ ಮುಖ್ಯ .ವೈಜ್ನಾನಿಕ ವಿಶ್ಲೇಷಣೆ  ಮತ್ತು ಚಿಕಿತ್ಸೆಯೇ ಮುಖ್ಯ ಹೊರತು  ಕೈಗುಣ  ಗೌಣ .

ತನ್ನಿಂದ ತಾನೇ ವಾಸಿ ಆಗುವ  ರೋಗ , ವೈಜ್ನಾನಿಕ ಪರೀಕ್ಷೆಗೆ ಒಳ ಪಡದ ತನ್ನ ಔಷಧಿ ಯಿಂದ ಗುಣ ಆಯಿತು ಎಂದು ಹೇಳಿ ಕೊಳ್ಳುವುದು ಆತ್ಮ ವಂಚನೆ

ಹೆಪಟೈಟಿಎಸ್ ಸಿ

 

  Sweden Nobel Medicine                                      ಈ  ವರ್ಷದ  ವೈದ್ಯಕೀಯ ಸಂಶೋಧನೆ ಗೆ  ಇರುವ  ನೋಬೆಲ್  ಪ್ರೈಜ್  ಹಾರ್ವೆಅಲ್ಟರ್,ಮೈಕೆಲ್ಹ್ ಹ್ಯೂಟನ್ ಮತ್ತು ಚಾರ್ಲ್ಸ್ ರೈಸ್ ಅವರಿಗೆ ಸಂದಿದೆ. ಪಿತ್ತ ಜನಕಾಂಗ ಅಥವಾ  ಲಿವರ್ ನ  ಸೋಂಕು ಉಂಟು ಮಾಡುವ  ಹೆಪಟೈಟೀಸ್ ಸಿ  ಎಂಬ ರೋಗಾಣುವನ್ನು ಕಂಡು ಹಿಡಿದ ಮಹತ್ವದ  ಸಾಧನೆ ಅವರದು . ಲಿವರ್ ನ  ಸೋಂಕು  ಸಾಮಾನ್ಯವಾಗಿ  ವೈರಸ್ ಗಳಿಂದ  ಬರುವುದು .ಅದರಲ್ಲಿ ಹೆಪಟೈಟೀಸ್ ಎ  ಮತ್ತು  ಇ  ನೀರು ಮತ್ತು ಆಹಾರದ ಮೂಲಕ ಹರಡುವಂತಹವು  ಮತ್ತು  ದೂರಗಾಮಿ  ದುಷ್ಪರಿಣಾಮ  ಉಂಟು ಮಾಡುವಂತಹವಲ್ಲ . ಆದರೆ  ಹೆಪಟೈ ಟೀಸ್  ಬಿ ಮತ್ತು ಸಿ ರಕ್ತ  ಮತ್ತು ಲೈಂಗಿಕ  ಸಂಪರ್ಕದ  ಮೂಲಕ ಹರಡುವಂತಹವು .ಮತ್ತು  ಒಮ್ಮೆ  ಕಾಯಿಲೆ ಶಮನ ಗೊಂಡರೂ  ಒಳಗೊಳಗೇ  ಲಿವರನ್ನು  ನಾಶ ಗೊಳಿಸುವ  ಶಕ್ತಿ ಇರುವಂತಹ  ವೈರಸ್ ಗಳು .

  ಈ ವೈರಸ್ ನ   ಗುರುತಿಸುವಿಕೆ ಯಿಂದ   ಅದರ ಹಾವಳಿ ತಡೆ ಗಟ್ಟಲು  ಸಹಾಯ ಆಗಿದೆ .ಮುಖ್ಯವಾಗಿ  ರೋಗಿಗೆ ರಕ್ತ ಕೊಡುವಾಗ  ಮೊದಲೇ  ದಾನಿಯ ರಕ್ತ ಪರೀಕ್ಷೆ

ಮಾಡಿ   ಕೊಡುವುದರಿಂದ   ನಮ್ಮ ಅರಿವಿಗೆ  ಬಾರದೇ ರೋಗ ಹರಡುವುದು  ತಪ್ಪುವುದು . ಬಿ ಮತ್ತು ಸಿ ವೈರಸ್  ಲಿವರ್ ನ ಸೋಂಕು ಮಾತ್ರ ಅಲ್ಲದೆ  ಸಿರೋಸಿಸ್

ಮತ್ತು  ಕಾನ್ಸರ್  ಎಂಬ  ಗಂಭೀರ  ಕಾಯಿಲೆ ಉಂಟು ಮಾಡ ಬಲ್ಲವು .

   ಈ  ತಂಡವು 1982 ರಿಂದ  1999 ರ ಅವಿರತ ಶ್ರಮ ದಿಂದ  ವೈರಸ್ ನ ರೂಪರೇಷೆ  ಕಂಡು ಹಿಡಿದರು . ವೈರಸ್  ಎ ಮತ್ತು ಬಿ ಯನ್ನು ಮೊದಲೇ ಗುರುತಿಸಿದ್ದರು .ಆದುದರಿಂದ  ಎ ಮತ್ತು ಬಿ ವೈರಸ್  ಪರೀಕ್ಷೆಯಲ್ಲಿ ಸಿಗದೇ  ಉಳಿದ ಲಿವರ್ ನ ಸೋಂಕುಗಳನ್ನು  ನೋನ್ ಎ ನೋನ್ ಬಿ ಎಂದು  ಕರೆಯಲಾಗುತ್ತಿತ್ತು .ಬಿ ಮತ್ತು ಎ ವೈರಸ್ ಗೆ   ವ್ಯಾಕ್ಸಿನ್ ಕಂಡು ಹಿಡಿದಿರುವರು .ಆದರೆ  ಸಿ ವೈರಸ್ ಗೆ  ಇನ್ನೂ ಆಗಿಲ್ಲ .ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ  ದಶಕಗಳ ಹಿಂದೆ ಕಂಡು ಹಿಡಿಯಲ್ಪಟ್ಟ   ವೈರಸ್ ಗೆ ಇನ್ನೂ  ವ್ಯಾಕ್ಸಿನ್ ತಯಾರಿಸಲು ಆಗಿಲ್ಲ .ಮೊನ್ನೆ ಮೊನ್ನೆ ಗುರುತಿಸಲ್ಪಟ್ಟ  ಕೋವಿಡ್ 19 ಗೆ  ವ್ಯಾಕ್ಸಿನ್ ಆಗಿಲ್ಲ ಎಂದು ನಾವು ಚಡಪಡಿಸುತ್ತಿದ್ದೇವೆ .

ಇಂದು  ರಕ್ತದಾನಿಗಳ ರಕ್ತದಲ್ಲಿ  ಎಚ್ ಐ ವಿ , ಹೆಪಟೈಟೀಸ್ ಬಿ ಮತ್ತು ಸಿ ಇದೆಯೇ ಎಂದು ಪರೀಕ್ಷೆ ಮಾಡಿ ಇಲ್ಲವೆಂದರೆ ಮಾತ್ರ ತೆಗೆದು ಕೊಳ್ಳುವರು .ಇದರಿಂದ ಖರ್ಚು ಸ್ವಲ್ಪ ಬೀಳುವುದು  .ಆದರೆ  ಅದರ ಲಾಭ ಮಾತ್ರ ಎಷ್ಟೆಂದು ಹೇಳಬೇಕಿಲ್ಲ .ವರುಷಗಳ ಹಿಂದೆ  ನೇರವಾಗಿ ರಕ್ತ ಸಂಗ್ರಹಿಸಿ  ಗ್ರೂಪ್  ಮ್ಯಾಚ್ ಆದರೆ ರಕ್ತ ಕೊಡುತ್ತಿದ್ದೆವು .ಅದರಿಂದ ಅರಿವಿಲ್ಲದೆ ಎಸ್ಟೋ ಮಂದಿಗೆ  ರೋಗ ಪ್ರಸಾರ ಆಗಿರ ಬಹುದು .ಆಸ್ಪತ್ರೆಯಲ್ಲಿ  ಶಸ್ತ್ರ ಚಿಕಿತ್ಸೆ ಗೆ  ಮೊದಲು  ಈ ವೈರಸ್ ಗಳ  ಟೆಸ್ಟ್           ಕ ಡ್ಡಾಯ .ಯಾಕೆಂದರೆ  ವೈದ್ಯರು ಮತ್ತು ಸಿಬ್ಬಂದಿ  ಹೆಚ್ಚು  ಎಚ್ಚರಿಕೆ  ತೆಗೆದುಕೊಳ್ಳುವರು .ಕೆಲವು ಕಡೆ  ಇವು ಪಾಸಿಟಿವ್ ಇರುವವರಿಗೆ  ಬೇರೆ  ಓಪರೇಷನ್  ಥಿಯೇಟರ್  ಇವೆ.

 ಹೆಪಾಟಿಕ್  ಎಂದರೆ ಲಿವರ್ ಗೆ ಸಂಬಂದಿಸಿದಂತಹುದು  ಎಂದು ಅರ್ಥ .ಲಿವರ್ ನ ಸೋಂಕಿಗೆ  ಹೆಪಟೈಟೀಸ್ ಎನ್ನುವರು .ಲಿವರ್ ನ ಸೋಂಕು ಗೆ  ಬಹಳಷ್ಟು ಕಾರಣ ಈ ವೈರಸ್ ಗಳು .ವಾಡಿಕೆಯಲ್ಲಿ  ಜಾಂಡಿಸ್ ಅಥವಾ ಮಂಜ ಪಿತ್ತ  ಎಂದು ಕರೆಯುವುದು ಇದನ್ನೇ . ಲಿವರ್ ನ  ಸೋಂಕು   ಮಲೇರಿಯಾ ದಂತ  ಪರೋಪಜೀವಿ ,ಇಲಿ ಜ್ವರ ಉಂಟು ಮಾಡುವ  ಬ್ಯಾಕ್ಟೀರಿಯಾ  ಗಳಿಂದಲೂ  ಬರ ಬಹುದು .ಆದುದರಿಂದ  ಎಲ್ಲಾ  ಹೆಪಟೈಟೀಸ್  ವೈರಸ್ ಜನ್ಯ ಅಲ್ಲ .ಮದ್ಯ ಪಾನ  ,ಕೆಲವು ಔಷಧಿಗಳೂ  ಹೆಪಟೈಟೀಸ್  ಉಂಟು ಮಾಡ ಬಲ್ಲುವು .

ವೈರಸ್ ಕಾಯಿಲೆಗಳು  ಬಹುತೇಕ ತನ್ನಿಂದ ತಾನೇ  ಉಪಶಮನ ಹೊಂದುವುವು .ಈ ಸಮಯದಲ್ಲಿ  ಕೆಲವರು ತಮಗೆ ಹಳ್ಳಿ ಮದ್ದು ,ಆಯುರ್ವೇದ ,ಇಂಗ್ಲಿಷ್ ಔಷಧಿ ಯಿಂದ  ಗುಣವಾಯಿತು ಎಂದು ಕೊಳ್ಳುವರು .ಆದರೆ ವಾಸ್ತವ ಬೇರೆ . ಹೆಪಟೈಟಿಸ್ ಸಿ  ರೋಗಕ್ಕೆ ಔಷಧಿ ಇದೆ.

 ಜಾಂಡಿಸ್ ಒಂದು ರೋಗ ಲಕ್ಷಣ ಮಾತ್ರ . ಅದಕ್ಕೆ ಲಿವರಿನ ಸೋಂಕು ಸಾಮಾನ್ಯ ಕಾರಣ ಆದರೆ  ,ಕೆಂಪು ರಕ್ತ ಕಣಗಳ  ಹೆಚ್ಚಿದ ನಾಶ ,ಲಿವರಿಂದ ಕರುಳಿಗೆ  ಸಂಪರ್ಕಿಸುವ ನಾಳದ ಸೋಂಕು ,ಕಲ್ಲು  ಅಥವಾ ಗಡ್ಡೆ ಯಿಂದ ಹಳದಿ ಕಾಮಾಲೆ ಬರ ಬಹುದು .ಆದುದರಿಂದ  ಕಾಮಾಲೆ ಗೆ ಹಳ್ಳಿ ಮದ್ದು ಸಾಕು ಎಂದು ಕುಳಿತು ಕೊಳ್ಳ ಬಾರದು .

ನಾನು ಹಿಂದಿನ ಬ್ಲೋಗ್ನಲ್ಲಿ ಬರೆದಂತೆ  ಜಾಂಡಿಸ್ ಎಂಬುದು  ಕೆಂಪು ರಕ್ತ ಕಣಗಳ ಉತ್ತರ ಕಾಂಡ .ವಿವರಕ್ಕೆ  ಹಿಂದಿನ ಲೇಖನ ಗಳನ್ನು ನೋಡಿರಿ



ಭಾನುವಾರ, ಅಕ್ಟೋಬರ್ 4, 2020

ಬಿ ಎಂ ರೋಹಿಣಿಯವರ ಜೀವನ ಕಥನ ಮತ್ತು ಸಮೀಪದಲ್ಲಿ ಓದಿದ ಜೀವನ ಚರಿತ್ರೆಗಳು

ನಾನು ಇತ್ತೀಚೆಗೆ ಓದಿದ ಆತ್ಮ ಚರಿತ್ರೆಗಳು 

                                          

 

  ಇಂಗ್ಲೀಷ್  ಭಾಷೆಯಲ್ಲಿ  ಲಾಸ್ಟ್ ಬಟ್ ನೋಟ್ ದ ಲೀಸ್ಟ್ ಎನ್ನುವಂತೆ ಕೊನೆಗೆ ಓದಿ ಮುಗಿಸಿದ್ದು  ಬಿ ಎಂ ರೋಹಿಣಿ ಯವರ  ನಾಗಂದಿಗೆಯೊಳಗಿಂದ  ಎಂಬ  ಹೆಸರಿನ  ಆತ್ಮ ಚರಿತ್ರೆ .ಇದು ನಾನು ಬಹುವಾಗಿ ಮೆಚ್ಚಿದ ಕೃತಿ ಎಂದು ಯಾವುದೇ ಸಂಕೋಚ ಇಲ್ಲದೆ ಹೇಳುತ್ತೇನೆ .ಇವರ ಬರಹದ ಭಾಷೆ ,ತಮ್ಮನ್ನೆ ಕಾಲ ಕಾಲಕ್ಕೆ  ಮುಕ್ತ ಮನಸ್ಸಿನಿಂದ   ವಿಮರ್ಶಿಸಿ  ಕೊಂಡು  ,ತಮ್ಮ ತಂದೆಯನ್ನೂ ಸೇರಿ ಯಾವ ರೀತಿ ಒಂದು ವ್ಯಕ್ತಿಯು ಏಕ ಕಾಲಕ್ಕೆ ನಾವೆಂದುಕೊಳ್ಳುವ  ಒಳ್ಳೆಯತನ ಮತ್ತು ಕೆಟ್ಟುದನ್ನು ಒಳಗೊಂಡು ಇರುವನು ಎಂದು ಬರೆದ ರೀತಿ ಬಹಳ ಮೆಚ್ಚಿಗೆ ಆಯಿತು .

     ಸಾಮಾನ್ಯ ಕುಟುಂಬದಲ್ಲಿ ಹೆಣ್ಣು ಮಗಳಾಗಿ ಜನಿಸಿ ಕುಟುಂಬದ ಆರ್ಥಿಕ ಜವಾಬ್ದಾರಿ ತಾಯಿಯೊಡನೆ ಹೊತ್ತುಕೊಂಡೇ  ಕಲಿತು ಅಧ್ಯಾಪಿಕೆ ಆಗಿ ತನ್ನ ಕೆಲಸವನ್ನು ಪ್ರೀತಿಸಿ ,ಸಾಹಿತ್ಯ  ,ಸಮಾಜ ಸೇವೆ ,ಸಂಶೋಧನೆ ಯಲ್ಲಿ ತೊಡಗಿಸಿ ಕೊಂಡ  ಕತೆ ಎಲ್ಲರೂ ಒದ ಬೇಕು .

ಈ  ಪುಸ್ತಕದಿಂದ  ಕೆಲವು ವಾಕ್ಯಗಳನ್ನು ಉದ್ದರಿಸುತ್ತೇನೆ .

'ಸಮಾಜದೊಂದಿಗೆ ಗಟ್ಟಿಯಾದ  ಭಾಂಧವ್ಯವನ್ನು  ಬೆಳೆಸಿಕೊಂಡು ನಾನು ಕಂಡ ಸತ್ಯ ವೇನೆಂದರೆ ನಮ್ಮ  ಸುತ್ತಮುತ್ತಲೂ  ಸಮಾಜವೇ ಕಟ್ಟಿದ ಗೋಡೆಗಳನ್ನಾದರೂ  ಸುಲಭದಲ್ಲಿ  ಕೆಡವ ಬಹುದು.ಆದರೆ ,ನಮ್ಮ ಮನಸ್ಸಿನಲ್ಲಿ  ನಾವೇ ಕಟ್ಟಿಕೊಂಡ ಗೋಡೆಗಳನ್ನು ಅಲ್ಲಾಡಿಸುವುದು ಬಿಡಿ ,ಮುಟ್ಟಲಿಕ್ಕೂ ಸಾಧ್ಯವಿಲ್ಲ '

'ಸಾವಿನ್ನು ಯಾರೂ ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ .ಆದರೆ ಸಾವಿನ ಭಯದಿಂದ ತಪ್ಪಿಸಿ ಕೊಳ್ಳುವವರು ವಿರಳ '

'ಬಾಲ್ಯವೆಂಬುದು ಸ್ಪಂಜಿನಂತೆ ಸಂಪರ್ಕಕ್ಕೆ ಬಂದುದೆಲ್ಲವನ್ನೂ ಹೀರಿಕೊಳ್ಳುತ್ತದೆ .ನೆನಪುಗಳೋ  ಕೊಂಕ್ರೀಟ್ ನಂತೆ ಗಟ್ಟಿಯಾಗಿ ಕೂತಿರುತ್ತವೆ '

'ಯಾಕೆಂದರೆ ಅವರ ಮುಂದೆ ನಿಂತು ಮಾತಾಡಲು ಯಾರಿಗೂ 'ಬ್ಯಾಟರಿ'ಇರಲಿಲ್ಲ '

'ವೃತ್ತಿಗೆ  ಸೇರಿದ ಆರಂಭದಲ್ಲಿ ಎಲ್ಲರಿಗೂ  ಸೋಡಾ ಬಾಟ್ಲಿ ಸ್ಪಿರಿಟ್ ಇರುತ್ತದೆ '

'ಮಕ್ಕಳು ಚಿಕ್ಕವರೆಂಬ ತಾತ್ಸಾರ ಸಲ್ಲದೆಂಬ ಪಾಠವನ್ನು ನನ್ನ ಮಕ್ಕಳೇ ನನಗೆ ಕಲಿಸಿ ಕೊಟ್ಟರು .ನಾನು ಕಲಿಸಿದ್ದಕಿಂತ  ಹೆಚ್ಚು ಅವರಿಂದ ನಾನು ಕಲಿತಿದ್ದೇನೆ .'

'ಹೇ  ಯಾರಿಗೂ ಗುರುಗಳಾಗಲು ಸಾಧ್ಯವಿಲ್ಲ ,ನಮ್ಮೊಳಗಿನ ಅಂತರಾತ್ಮಕ್ಕಿಂತ ಮಿಗಿಲಾದ ಗುರುಗಳಿಲ್ಲ .'

'ಓದು ಬರಹಗಳು ಎಲ್ಲಾ ಮನುಷ್ಯರನ್ನು ಸಹೃದಯವಂತರನ್ನಾಗಿ ಮಾಡಲು ಸಾಧ್ಯವಿಲ್ಲ ವೆಂಬುದನ್ನು ಉದಾಹರಣೆ ಸಹಿತ ವಿವರಿಸುವ ಚಿಂತನಾ ಶೈಲಿಗೆ ನಾನು ಬೆರಗಾಗಿ ಕಿವಿಯಾಗುತ್ತಿದ್ದೆ .'

'ತೀರಿಸುವ ಸಾಲವನ್ನು ಕ್ರಮೇಣ ವರ್ಷಗಳ ಬಳಿಕ ತೀರಿಸಿದೆ.ತೀರಿಸಲಾರದ ಮಮತೆಯ ಋಣಭಾರ ವನ್ನು ಈ ಜನ್ಮದಲ್ಲಂತೂ ಕೆಳಗಿಳಿಸಲಾರೆ .'

'ದೇವರನ್ನು ಸೃಷ್ಟಿಸಿದ ನಾವೇ ಅವನನ್ನು ದೇವಾಲಯದೊಳಗೆ ಬಂಧಿಸಿ ಆಯಾ ಧರ್ಮ ಪಂಥದ ಅವರಣದೊಳಗೆ ಬಂಧಿತರಾಗಿದ್ದೇವೆ .'

'ನಮ್ಮ ಬದುಕಿನ ರಹಸ್ಯವಿರುವುದು ಇಲ್ಲೇ .ಮುಂದೆ ಎಂದಾದರೂ ಸುಖ ನೆಮ್ಮದಿ ಸಿಗಬಹುದು ಎಂಬ ನಂಬಿಕೆಯಿಂದಲೇ ನಮ್ಮ ನೋವು ,ಕಷ್ಟಗಳೆಲ್ಲ ಸ್ವಲ್ಪ ಶಮನವಾಗುತ್ತದೆ .ನಾಳೆಯ ಬಗ್ಗೆ ನಮಗಿರುವ ನಿರೀಕ್ಷೆಯೇ  ಇಂದಿನ ಕೆಲವು ಕೊರತೆಗಳಿಗೆ ಪರಿಹಾರ ನೀಡುತ್ತದೆ '

'ಮದುವೆಯ ವಯಸ್ಸು ಅಂದರೆ ಹದಿಹರಯ .ಅದು ದಾಟಿದ ಕೂಡಲೇ ಮದುವೆಯ ಬಗ್ಗೆ ನಮಗಿಂತ ಹೆಚ್ಚು ಆಸಕ್ತಿ ಉಳಿದವರಿಗೆ ಅಂದರೆ ನಮ್ಮ ಸುತ್ತ ಮುತ್ತಲಿನವರಿಗೆ ಇರುತ್ತದೆ .

'ವಿವಾಹವೆಂಬ ವ್ಯವಸ್ಥೆ ಒಂದು ಸಿನಿಮಾ ಥಿಯೇಟರ್ ನಂತೆ ಎನ್ನುತ್ತಾರೆ .ಒಳಗಿದ್ದವರಿಗೆ ಹೊರಗೆ ಬರುವ ಕಾತುರ ,ಹೊರಗಿದ್ದವರಿಗೆ ಒಳಗೆ ಹೋಗುವ ಆತುರ ' '

'ದೇವರಲ್ಲಿ ಅದು ಕೊಡು ಇದು ಕೊಡು ಎಂದು ಕೇಳುವಾಗ ಒಂದು ವೇಳೆ ದೇವರೇ ಪ್ರತ್ಯಕ್ಷನಾಗಿ ನಾನು ಕೊಟ್ಟ ಬುದ್ದಿಯನ್ನು ಏನು ಮಾಡಿದೆ ಎಂದು ಕೇಳಿದರೆ ಏನು ಹೇಳುತ್ತೀರಿ ಎಂದು ಕೇಳಿದೆ '

ಮಕ್ಕಳು ಉಪದೇಶವನ್ನು ಕಣ್ಣಿನಿಂದ ಕೇಳುತ್ತಾರೆಂಬ ಸತ್ಯ ಗೊತ್ತಾಯಿತು .'

'ಅತ್ತೆ ಸೊಸೆಯ ವೈಮನಸ್ಸು ಅಧಿಕಾರ ಹಸ್ತಾಂತರದ ಎಡವಟ್ಟುಗಳೆ ಆಗಿವೆ'

    ಇವು ಎಲ್ಲಾ ಅನುಭವದಿಂದ  ಬಂದ ಮಾತುಗಳು ,ಎಲ್ಲಿಂದಲೂ ಕಾಪಿ ಮಾಡಿದ್ದಲ್ಲ ಎಂಬುದು  ಮೇಲ್ನೋಟಕ್ಕೆ ಓದುಗರಿಗೆ ಅರಿವಾಗುತ್ತದೆ .

ಇನ್ನೊಂದು ವಿಷಿಷ್ಟ ಪದಉಪಯೋಗಿಸುತ್ತಾರೆ .ಗುಡ್ ಗರ್ಲ್ ಸಿನ್ಡ್ರೋಮ್ .ನಮ್ಮ ಅಂತರಾತ್ಮ ಸರಿಯಲ್ಲ  ಬೇಡ ಎಂದರೂ ಸಮಾಜದಲ್ಲಿ ಒಳ್ಳೆಯ ಮುಖ ತೋರಲು ನಾವು ಕೆಲ ನಿರ್ಧಾರ ತೆಗೆದುಕೊಳ್ಳುವುದು ,ಮತ್ತು ಅದರಿಂದ ಹೆಚ್ಚು ಬಾರಿ ಸೋಲುವುದು ಅಥವಾ ಮೋಸ ಹೋಗುವುದು .


ವೈದ್ಯನಾಗಿ ಒಂದೇ ಒಂದು ತಪ್ಪು ಕಂಡುದು . ಪಾಂಕ್ರಿಯಸ್ ನ ಕಲ್ಲು ಕುಡುಕರಲ್ಲಿ ಕಾಣುವುದು ಎಂದು ಬರೆದಿದ್ದಾರೆ .ಇದು  ಇತರಲ್ಲೂ ಸಾಮಾನ್ಯ .ಮರಗೆಣಸು ಸೇವನೆ ಕಾರಣ ಎಂಬ ಒಂದು ಪ್ರತೀತಿ ಇತ್ತು .

ಒಳ್ಳೆಯ ಓದು ಇಷ್ಟ ಪಡುವವರು ಕೊಂಡು ಓದಿರಿ

 

1                       

 ಲಾ ಅಂಡ್ ಆರ್ಡರ್  ನಮ್ಮ ರಾಜ್ಯದ  ಪೋಲೀಸು ಮಹಾ ನಿರ್ದೇಶಕರಾಗಿ ನಿವೃತ್ತರಾದ  ಮತ್ತು ಕಳೆದ ವಾರ ನಿಧನ ರಾದ ಎ ಪಿ ದುರೈ ಅವರ ಆತ್ಮ ಚರಿತ್ರೆ .ಪ್ರಾರಮಾಣಿಕ ಅಧಿಕಾರಿಯಾಗಿ  ,ನಿಜ ಅರ್ಥದಲ್ಲಿ ಸರ್ವ ಧರ್ಮ ಸಮನ್ವ ತೆ ಜೀವನದಲ್ಲಿ ಅಳವಡಿಸಿ ಕೊಂಡು ಬಾಳಿದವರು .ತಮ್ಮ ಪ್ರಾಮಾಣಿಕತೆ ಯಿಂದ  ಕೆಲವು ಸಂಕಷ್ಟಕ್ಕೆ ಒಳ ಗಾದರೂ  ಎಲ್ಲವನ್ನೂ  ಫಿಲೋಸೋಫಿಕಲ್  ಆಗಿ ತೆಗೆದು ಕೊಂಡವರು.

2     

                       


ಇದು  ನಮ್ಮ ರಾಜ್ಯದ  ಅರಣ್ಯ ಮಹಾ ಸಂರಕ್ಷಣ ಅಧಿಕಾರಿ ಆಗಿದ್ದ  ಶ್ರೀ ಶ್ಯಾಮ ಸುಂದರ್  ಅವರ ಆತ್ಮ ಚರಿತ್ರೆ .ಅವರು ಶಿವರಾಮ ಕಾರಂತರ ಸೋದರ ಅಳಿಯ ಮತ್ತು  ಅವರ ಪತ್ನಿ ಲೇಖಕ ತಂತ್ರಜ್ನ  ಪೇಜಾವರ ಸದಾಶಿವ  ರಾಯರ ಮಗಳು .

ಮದ್ರಾಸ್ ಪ್ರಾಂತ್ಯದಲ್ಲಿ  ಕೆಲಸಕ್ಕೆ ಸೇರಿದ ಇವರು ರಾಜ್ಯ ಪುನರ್ ವಿಂಗಡಣೆ ಕಾಲಕ್ಕೆ  ಆಗಿನ ಮೈಸೂರು ಮತ್ತು ಆಮೇಲೆ ಕರ್ನಾಟಕ ರಾಜ್ಯದ ಸೇವೆ ಯಲ್ಲಿ  ಇಲಾಖೆಯ ಅತ್ಯುನ್ನತ ಹುದ್ದೆ ಪಡೆದರು .ಸ್ವಾತಂತ್ರ್ಯದ ತರುಣದಲ್ಲಿ  ಇನ್ನೂ  ಪ್ರಾಮಾಣಿಕತೆ ಮತ್ತು  ದೇಶಭಕ್ತಿ  ಉಳಿದಿದ್ದ ಕಾಲದಿಂದ ಹಿಡಿದು  ನಂತರದ  ಮಲಿನೀಕರಣ ಕೊಂಡ ರಾಜಕಾರಣ ಎರಡೂ ನೋಡಿದವರು .ಇವರೂ ತಮ್ಮ ಪ್ರಾಮಾಣಿಕತೆಯಿಂದ  ಕೊಂಚ  ಸಮಸ್ಯೆ ಎದುರಿಸಿದವರು .ಮನೆಯಲ್ಲಿ ಊಟಕ್ಕೆ ಧಾನ್ಯ ಕೊರತೆ ಯಾದ ಪ್ರಸಂಗ ,ಮನೆ ಕಟುವಾಗ ಎದುರಿಸಿದ ಬವಣೆ ಇದಕ್ಕೆ ಉದಾಹರಣೆ .

3   

                             


ಇದು    ಕನ್ನಡದ ಪ್ರಸಿದ್ದ  ಲೇಖಕ ಮತ್ತು ಸ್ವಯಂ ಸೇವಕ  ಪುರುಷೋತಮ ಬಿಳಿಮಲೆ ಅವರ  ಆತ್ಮ ಚರಿತ್ರೆ .ದಕ್ಷಿಣ ಕನ್ನಡ ದ  ಒಂದು ಕುಗ್ರಾಮದಲ್ಲಿ ಜನಿಸಿ ಮುಂದೆ ಸುಳ್ಯ ನೆಹರು ಕಾಲೇಜ್ ,ಮಂಗಳೂರು ವಿಶ್ವವಿದ್ಯಾಲಯ ,ಹಂಪೆ ಕನ್ನಡ ಯುನಿವರ್ಸಿಟಿ , ಮತ್ತು  ಡೆಲ್ಲಿಯ  ಜೆ ಎನ್ ಯು ವರೆಗಿನ  ಹೋರಾಟದ ಬದುಕಿನ ಚಿತ್ರಣ ಇದೆ .

     

 


ಕಳಚಿದ ಮಹಾ ಜ್ನಾನ ವೃಕ್ಷ

                                     

 

                                                        


ಕಳೆದ ವಾರ ನನ್ನ ಪ್ರಾಥಮಿಕ ಶಾಲೆಯ ಅಧ್ಯಾಪಕರ ಬಗ್ಗೆ ಬರೆದಿದ್ದೆ .ಇಂದು ನನ್ನ ವೈದ್ಯ ಶಾಸ್ತ್ರದ  ಮಹಾಗುರು  ಡಾ ತಿರುವೆಂಗಡನ್ ಅವರ ಬಗ್ಗೆ ಬರೆಯ ಬೇಕಾಗಿದೆ .ನಿನ್ನೆ ತಾನೇ ಅವರು  ತೀರಿ ಕೊಂಡ ವಾರ್ತೆ ಬಂದಿದೆ .ಅವರ ಬಗ್ಗೆ ಬಹಳ ಹಿಂದೆ  ಇಂಗ್ಲೀಷ್ ನಲ್ಲಿ ಒಂದು ಬ್ಲಾಗ್ ಬರೆದಿದ್ದೆ .

ಇವರು  ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ  ವೈದ್ಯ ಶಾಸ್ತ್ರ  ಪ್ರಾಧ್ಯಾಪಕ ರಾಗಿ  ಬಹಳ ಪ್ರಸಿದ್ದ ರಾಗಿ  ಒಂದು ದಂತ ಕಥೆಯೇ ಆಗಿದ್ದರು .ಅವರ  ಬೆಡ್ ಸೈಡ್  ಪಾಟ ಗಳಿಗೆ  ವಿದ್ಯಾರ್ಥಿಗಳು  ಇರುವೆ ಗಳಂತೆ  ಮುತ್ತುತ್ತಿದ್ದರು .ರೋಗಿಯ  ಸಮಸ್ಯೆ ಗಳ  ವಿವರ ಶೇಖರಿಸುತ್ತಿದ್ದ  ವಿಧಾನ  ,ಕ್ರಮ ಬದ್ದವಾಗಿ  ರೋಗಿಯನ್ನು  ಪರೀಕ್ಷೆ  ಮಾಡುತ್ತಿದ್ದ ಪರಿ  ಬಹಳ ಪ್ರಸಿದ್ದ ಆಗಿತ್ತು .ರೋಗದ ಇತಿಹಾಸ ಮತ್ತು ಪರೀಕ್ಷೆ ಯಲ್ಲಿಯೇ  ಬಹುತೇಕ  ಡಯಾಗ್ನೋಸಿಸ್ ಮಾಡುತ್ತಿದ್ದರು. ಸದ್ಯ ಅಮೆರಿಕದಲ್ಲಿ ಇರುವ ಖ್ಯಾತ ಲೇಖಕ ವೈದ್ಯ ಅಬ್ರಹಾಂ ವರ್ಗೀಸ್ ಸೇರಿ  ಚೆನ್ನೈ ನ  ಮತ್ತು ದಕ್ಷಿಣ ಭಾರತದ  ಘಟಾನುಘಟಿ  ವೈದ್ಯರು ಹಲವಾರು  ಅವರ ಶಿಷ್ಯರು ,ಅವರನ್ನು  ಪೊಫೆಸರ್  ರ  ಪ್ರೊಫೆಸರ್  ಎಂದು ಕರೆಯುತ್ತಿದ್ದರು .

  ಸರಕಾರಿ  ಸೇವೆಯಿಂದ ನಿವೃತ್ತಿ  ಆದಮೇಲೂ  ಅವರ  ಅಧ್ಯಾಪನ ಪ್ರೇಮ ಅವರನ್ನು ಬಿಡಲಿಲ್ಲ  .ರೈಲ್ವೇ ಆಸ್ಪತ್ರೆ ಪೆರಂಬೂರ್ ಮತ್ತು  ಕೆ ಜೆ ಆಸ್ಪತ್ರೆಯಲ್ಲಿ ಅವರು ವೈದ್ಯ ವಿದ್ಯಾರ್ಥಿಗಳಿಗೆ  ಯಾವುದೇ ಆರ್ಥಿಕ ಪ್ರತಿಫಲ ತೆಗೆದು ಕೊಳ್ಳದೆ ಪಾಠ ಮಾಡಲು ಬರುತ್ತಿದ್ದರು .ಅವರ ಮನೆ ಟಿ ನಗರ .ಪೆರಂಬೂರ್ ಮತ್ತೊಂದು ತುದಿ .ತಪ್ಪದೇ ಬರುವರು .ನಾನೂ ಅವರ ವಿದ್ಯಾರ್ಥಿ .ಮದ್ರಾಸ್ ನ  ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು  ಬರುತ್ತಿದ್ದರು .ಅವರದು ಮೆಲು  ದ್ವನಿ ,ಆದರೆ  ಸ್ಪಷ್ಟ .ಹಾಸ್ಯ ಪ್ರಜ್ನೆ ಯೂ ಇತ್ತು .ರೋಗಿಯೊಡನೆ  ವಿವರ ಸಂಗ್ರಹಿಸುವ ಪರಿ ಮತ್ತು  ಪರೀಕ್ಷಾ ವಿಧಾನ ಅವರದೇ ಛಾಪು .ನೆನಪು ಶಕ್ತಿ ಅಗಾಧ .ಈ ವಾರ ಚರ್ಚಿಸಿದ  ರೋಗಿಯ ಬಗ್ಗೆ ಮುಂದಿನ ವಾರ ರೋಗ ಸ್ಥಿತಿ ,ಎಕ್ಸ್ ರೇ ರಕ್ತ ಪರೀಕ್ಷೆ ,ಸ್ಕ್ಯಾನ್ ಫಲಿತಾಂಶ ಕೇಳುವರು .ತಮ್ಮ ಪೂರ್ವ ಭಾವೀ ರೋಗ ನಿಧಾನ ಸರಿಯೇ ಎಂದು ಖಚಿತ ಪಡಿಸುವರು .ಅದು ಬಹುತೇಕ ಸರಿ ಇರುತ್ತಿತ್ತು .ಇಲ್ಲದಿದ್ದರೆ  ಚಡಪಡಿಸುವರು ,ಯಾವುದು ತಮ್ಮ ಪರೀಕ್ಷೆಯಲ್ಲಿ ತಪ್ಪಿತು ಎಂದು ? 

 ಸದಾ ಅಧ್ಯಯನ ನಿರತರು .ಯಾವುದೋ ಒಂದು ವೈದ್ಯಕೀಯ ಲೇಖನ ಅಥವಾ ಹೊಸತಾಗಿ ಬಂದ  ಔಷಧಿ ಬಗ್ಗೆ  ನಮಗೆ ಓದಲು ಸೂಚಿಸುವರು ಮತ್ತು ಇನ್ನೊಂದು ದಿನ ಅದರ ಬಗ್ಗೆ ಚರ್ಚಿಸ ಹೇಳುವರು .

ರೋಗಿಯನ್ನು ಇಡಿಯಾಗಿ  ನೋಡಿರಿ ,ಬಿಡಿ ಬಿಡಿ ಯಾಗಿ ಅಲ್ಲ ಎನ್ನುವುದು ಅವರ ಉಪದೇಶ .ಎಂದರೆ ತಲೆ ನೋವು ಎಂದು ಬಂದವನ ಕಾಲು ಕೂಡ ಪರೀಕ್ಷಿಸದೆ ಬಿಡ ಬಾರದು .

ಅವರು ರಾಷ್ಟ್ರಪತಿ  ವೆಂಕಟರಾಮನ್ ಅವರ ಗೌರವ ವೈದ್ಯರಾಗಿ ಇದ್ದರು .ಪದ್ಮಶ್ರೀ , ಬಿಸಿ ರಾಯ್ ಅವಾರ್ಡ್  ವಿಜೇತರು .ಕ್ರಿಕೆಟ್ ಮತ್ತು ಶಾಸ್ಟ್ರೀಯ ಸಂಗೀತ ದಲ್ಲಿ  ಆಸಕ್ತಿ .

ನಾನು  ಅವರ ಜತೆ ಕೆಲವು ದಿನ ಕಾರಿನಲ್ಲಿ ಪಯಣಿಸಿದ್ದೇನೆ .ಆಗಲೂ ಅವರು ನಾವು ಚರ್ಚಿಸಿದ ರೋಗಿಯ ಬಗ್ಗೆಯೋ ಸಂಗೀತ ದ  ಬಗ್ಗೆಯೋ ವಿವರಿಸುವರು .ವಿನಮ್ರತೆ ಅವರಿಗೆ ಸಹಜ ವಾಗಿತ್ತು .

ಕಲಿಸುವುದು  ಕಲಿಯಲು ಅತ್ಯುತ್ತಮ ಮಾರ್ಗ ಎಂದು ಹೇಳುತ್ತಿದ್ದರು ,ಟೀಚಿಂಗ್ ಈಸ್ ಬೆಸ್ಟ್ ವೇ ಆಫ್ ಲರ್ನಿಂಗ್ .ನಮಗೆ ತಿಳಿದ ಹೊಸ ಜ್ನಾನವನ್ನು ಇನ್ನೊಬ್ಬರಿಗೆ ತಿಳಿಸಿ ಹೇಳುವಾಗ ನಾವು ಅರಿವಿಲ್ಲದೆಯೇ ನಮ್ಮ ಜ್ನಾನವನ್ನು ಹೆಚ್ಚ್ಕಿಸಿ ಕೊಳ್ಳುತ್ತೇವೆ '

 ನನಗೆ ಅವರಿಂದ ಒಂದು  ಸರ್ಟಿಫಿಕೇಟ್  ಬೇಕಿತ್ತು .ಅವರು ಒಂದು ಖಾಲಿ ಹಾಳೆಯಲ್ಲಿ ಬರೆದು ಕೊಡುವರು .ಅದನ್ನು  ನಮ್ಮ ಡಿಪಾರ್ಟ್ಮೆಂಟ್ ನ ಬಾಲು ಟೈಪ್ ಮಾಡಿ ಕೊಡುವರು .ಅದನ್ನು ಪುನಃ ಓದಿ ಕೆಲವು ತಿದ್ದು ಪಡಿ ಮಾಡುವರು.ಆಮೇಲೆ  ಅವರ  ಲೆಟರ್ ಹೆಡ್  ಕಾಗದ ದಲ್ಲಿ  ಟೈಪ್  ಮಾಡಿಸುವರು ಮತ್ತು ಸಹಿ ಹಾಕುವರು .ಅದನ್ನು  ಕೊಳ್ಳಲು ಅವರ ಮನೆಗೆ  ಹೋಗಿದ್ದೆ .ಸಣ್ಣವನಾದ ನನಗೆ ಕುಡಿಯಲು  ಜ್ಯೂಸ್ ಮಾಡಿಸಿ ಕೊಡಿಸಿ ಬಾಗಿಲ ವರೆಗೆ ಬಂದು ಬೀಳ್ಕೊಡುವರು .

ಪ್ರೊಫೆಸ್ಸರ್  ಕೆ ವಿ ಟಿ ಎಂದೇ  ಪ್ರಸಿದ್ದರಾದ ಅವರ ನೆಪಪಿಗೆ  ವಂದನೆಗಳು

 https://youtu.be/JhcRy-DImvM

 https://youtu.be/O2foCZT4vdQ

ಭಾನುವಾರ, ಸೆಪ್ಟೆಂಬರ್ 27, 2020

ಶಿಷ್ಯ ಪ್ರೀತಿ

 

ಮೇಲಿನ  ಚಿತ್ರ ನನ್ನ  ಪ್ರಾಥಮಿಕ ಶಾಲೆ ಅಧ್ಯಾಪಕರಾಗಿದ್ದ  ಶ್ರೀ ಜನಾರ್ಧನ ಶೆಟ್ಟಿ  ಅವರದು .ನಿನ್ನೆ ತಾನೇ  ದೈವಾಧೀನ ರಾದ  ಸುದ್ದಿ ಇಂದಿನ ಪತ್ರಿಕೆಯಲ್ಲಿ  ಬಂದಿದೆ .ನಮ್ಮ ಬಾಲ್ಯದಲ್ಲಿ  ಅಧ್ಯಾಪಕರು ಅನೇಕರು  ಹೊಟ್ಟೆ ಪಾಡಿಗಾಗಿ  ಈ ಕೆಲಸಕ್ಕೆ ಬಂದವರು .ಆದರೆ ಬಹುತೇಕ ಹೆಚ್ಚಿನವರು ಪ್ರಮಾಣಿಕರು .ಅಧ್ಯಯನ ಶೀಲರೂ

ವೃತ್ತಿಯನ್ನು  ಗಂಭೀರವಾಗಿ  ತೆಗೆದು ಕೊಂಡವರು ಬೆರಳೆಣಿಕೆ ಯಲ್ಲಿ ಇದ್ದರು.ಅವರ ಪೈಕಿ  ಜನಾರ್ಧನ ಶೆಟ್ಟಿ  ಮಾಸ್ಟ್ರು ಒಬ್ಬರು .ಇವರು  ಓದಿ ಬಂದು ಪಾಠ ಮಾಡುವರು .ಸುಶ್ರಾವ್ಯ ವಾಗಿ  ಕವನ ವಾಚನ  ಮಾಡುತ್ತಿದ್ದರು.ಒಂದು ಸಾರಿ  ಕ್ಲಾಸ್ ಪರೀಕ್ಷೆಯಲ್ಲಿ  ನನಗೆ  50 ರಲ್ಲಿ  48 ಅಂಕ ಬಂದಿತ್ತು .ಒಂದು ಉತ್ತರ ತಪ್ಪು ಎಂದು  2 ಮಾರ್ಕ್ ಕಳೆದಿದ್ದರು .ಆದರೆ ನಾನು ನೋಡಿದಾಗ  ನನ್ನ ಉತ್ತರ  ಸರಿಯಿತ್ತು ,ಅವರ ಮಾದರಿ ಉತ್ತರ ತಪ್ಪಾಗಿತ್ತು .ನಾನು ಅಧ್ಯಾಪಕರ ಕೊಠಡಿ ಗೆ  ಹೋಗಿ ಇದನ್ನು ಅವರ ಗಮನಕ್ಕೆ ತಂದೆ .ಅವರು ಅದನ್ನು ಪರಿಶೀಲಿಸಿ ತಮ್ಮ ತಪ್ಪನ್ನು ಒಪ್ಪಿಕೊಂಡದ್ದಲ್ಲದೆ ಬಹಳ ಪ್ರೀತಿಯಿಂದ  ನನ್ನ ಕೈ ಹಿಡಿದು  ತನ್ನ ತಾಯಿಯ ಬಗ್ಗೆ ವಿಚಾರಿಸಿದರು .ತಾಯಿ ತಾನೇ ಮೊದಲ ಗುರು .

ನಾನು ವೈದ್ಯನಾಗಿ ಮಂಗಳೂರಿನ  ವೈದ್ಯಕೀಯ  ಕೋಲೇಜ್ ಒಂದರಲ್ಲಿ ಅಧ್ಯಾಪನ ವೃತ್ತಿ  ಕೈಗೊಂಡಿದ್ದೆ .ಒಂದು ದಿನ ಯಾವುದೋ ಕಾರ್ಯಕ್ರಮ ಕ್ಕೆ  ಹುಟ್ಟೂರಿಗೆ  ಹೋಗಿದ್ದವನು  ಕನ್ಯಾನ ಸಮೀಪ ಬಂದಿತಡ್ಕ  ರಸ್ತೆ ಬದಿಯಲ್ಲಿ  ವಾಸವಾಗಿದ್ದ  ಗುರುಗಳನ್ನು  ಕಂಡು ಬರೋಣ ಎಂದು ಮನೆಯ ಬಾಗಿಲು ತಟ್ಟಿದೆ .ಅವರು ಇರಲಿಲ್ಲ .ಅವರ ಮನೆಯವರು ನನ್ನನ್ನು ಪ್ರೀತಿಯಿಂದ  ಉಪಚರಿಸಿ ಕಳುಹಿಸಿದರು .

ಇದಾದ  ಕೆಲವು ದಿನಗಳಲ್ಲಿ  ವಯೋ ವೃದ್ದ ರಾದ  ಗುರುಗಳು  ಮಂಗಳೂರಿನ ನಮ್ಮ ಕೋಲೇಜ್ ಗೆ  ನನ್ನನ್ನು ಹುಡುಕಿ ಬಂದರು .ಕೈಯಲ್ಲಿ  ಒಂದು ಬಾಟಲ್ ಜೇನು ತುಪ್ಪ ಮತ್ತು  ಗೇರು ಬೀಜದ  ಕಟ್ಟು .ನಾನು ಅವರ ಮನೆಗೆ ಬಂದಾಗ ಅವರು ಇಲ್ಲದಿದ್ದುಕ್ಕೆ ತಾವೇ ನನ್ನನ್ನು ಹುಡುಕಿ ಕೊಂಡು ಬಂದುದಲ್ಲದೆ  ಕೈಯಲ್ಲಿ  ಉಡುಗೊರೆ .ನಾನು ಅವರಿಗೆ ನಮಸ್ಕರಿಸಿ  ,ಕುಶಲೋಪರಿ  ಮಾತನಾಡಿಸಿ  ಕಳುಹಿಸಿ ಕೊಟ್ಟೆ .ಎಂತಹ  ಶಿಷ್ಯ ಪ್ರೀತಿ ,ಎಂತಹ ಸಂಸ್ಕಾರ .ಆ ಮೇಲೆ ಒಂದೆರಡು ಬಾರಿ ಅವರ ದರ್ಶನ  ಆಗಿತ್ತು .

ಇಂದು ಅವರ ನಿಧನ ವಾರ್ತೆ ನೋಡಿದಾಗ  ಹಳೆಯ ನೆನಪುಗಳು ಬರುತ್ತಿವೆ .

  ಆಚಾರ್ಯ ದೇವೋ ಭಾವ ಎಂಬ ವಾಕ್ಯ ಅನ್ವರ್ಥ ಮಾಡಿದವರು .ಎಂದರೋ ಮಹಾನುಭಾವುಲುಅಂದರಿಕಿವಂದನಮುಲು  .

                         



                                    

                                                                                   

ಶನಿವಾರ, ಸೆಪ್ಟೆಂಬರ್ 26, 2020

ಡೆಂಗು ಜ್ವರವೂ ಕಿವಿ ಹಣ್ಣೂ

                                                   kiwi | Description, Nutrition, & Facts | Britannica 

 

ಕಿವಿ  ನ್ಯೂಜಿ ಲ್ಯಾಂಡ್  ದೇಶದ ಹಕ್ಕಿ . ಅಲ್ಲಿ ಬೆಳೆಯುವ  ಹಣ್ಣಿಗೂ ಅದೇ  ಹೆಸರು .ನಮ್ಮ ದೇಶಕ್ಕೆ ಬಹುತೇಕ  ನ್ಯೂಜಿಲಂಡ್ ,ಚಿಲಿ ಮತ್ತು ಇರಾನ್ ದೇಶದಿಂದ  ಆಮದು ಆಗುವುದು .ಆದುದರಿಂದ  ದುಬಾರಿ .

ಈ ಹಣ್ಣನ್ನು  ಡೆಂಗು ರೋಗಿಗಳ ಬಳಿ ಯಾವಾಗಲೂ ಕಾಣುವೆನು .ನಾವು ವೈದ್ಯರು  ಸಲಹೆ ಮಾಡದಿದ್ದರೂ 

ಸದ್ದಿಲ್ಲದೇ ಅವರ ಆಹಾರದಲ್ಲಿ ಸೇರಿ ಹೋಗುವುದು .ಡೆಂಗು ಜ್ವರ ಕ್ಕೆ  ಈ ಹಣ್ಣಿನಲ್ಲಿ ಔಷಧಿ ಏನೂ ಇಲ್ಲ .

ಕಾಯಿಲೆಯಲ್ಲಿ  ಪ್ಲಾಟೆಲೆಟ್ ಕಣಗಳು ಕಮ್ಮಿ ಆದರೆ  ಅದನ್ನು ವರ್ಧಿಸಲು  ಇದು ರಾಮ ಬಾಣ ಎಂದು  ಯಾರೋ 

ಹೇಳಿದ್ದು  ಈಗ ವೇದ ವಾಕ್ಯ ಆಗಿದೆ . ಈ ನಂಬಿಕೆಗೆ  ಯಾವುದೇ  ವೈಜ್ನಾನಿಕ ಆಧಾರ ಇಲ್ಲ .ಎಲ್ಲಾ  ಹಣ್ಣುಗಳಂತೆ 

ಆರೋಗ್ಯಕ್ಕೆ  ಒಳ್ಳೆಯದು ಅಷ್ಟೇ .

ತಮಾಷೆಯೆಂದರೆ  ಈ ಹಣ್ಣಿನ ಬಗ್ಗೆ  ಕೆಲವು  ಸಣ್ಣ ಸಂಶೋದನೆಗಳು  ಇದು ಪ್ಲಾಟೆಲೆಟ್  ಕ್ಷಮತೆಯ  ವಿರೋಧೀ

ಗುಣಗಳನ್ನು   ಹೊಂದಿದ್ದು  ಹೃದಯಾಘಾತ  ತಡೆಗಟ್ಟ ಬಹುದು ಎಂದು ಸೂಚನೆ ನೀಡಿವೆ . ನಿಮಗೆ ತಿಳಿದಂತೆ 

ಪ್ಲಾಟೆಲೆಟ್  ಕಣಗಳು  ರಕ್ತ ಸ್ತಂಭಕ  ಆಗಿದ್ದು  ರಕ್ತ  ಹಪ್ಪು ಗಟ್ಟಲು ಸಹಾಯ ಮಾಡುವವು .ಹೃದಯದ  ರಕ್ತ ನಾಳಗಳಲ್ಲಿ   ಕೊಲೆಸ್ಟ್ರಾಲ್  ಕುಳಿತು  ಪ್ಲಾಟೆಲೆಟ್ ಕಣಗಳನ್ನು  ಆಹ್ವಾನಿಸುತ್ತದೆ .ಅವು ಒಟ್ಟು ಸೇರಿ  ರಕ್ತ  ಹೆಪ್ಪು ಗಟ್ಟಿಸಿ   ರಕ್ತನಾಳ  ವನ್ನು  ಬಂದ್ ಮಾಡಿದಾಗ  ಹೃದಯಾಘಾತ  ಆಗುವುದು .ಇದನ್ನು ತಡೆ ಗಟ್ಟಲು  ಆಸ್ಪಿರಿನ್  ನಂತಹ    ಪ್ಲಾಟೆಲೆಟ್  ವಿರೋಧೀ  ಔಷಧ ಕೊಡುವರು.  ಅಂತಹದೇ  ಕೆಲಸ ಸಣ್ಣ ಪ್ರಮಾಣದಲ್ಲಿ  ಕಿವಿ ಹಣ್ಣು  ಮಾಡುವುದು  ಎಂಬ  ಸೂಚನೆ .ಹೃದ್ರೋಗಕ್ಕೆ  ಪ್ಲಾಟೆಲೆಟ್  ವಿರೋಧೀ  ಡೆಂಗು  ಕಾಯಿಲೆಯಲ್ಲಿ  ಅದರ  ಸ್ನೇಹಿ 

ಆಗುವುದು  ಹೇಗೆ ?ಇಲ್ಲಿಯೂ  ಸಲ್ಲುವುದು  ಅಲ್ಲಿಯೂ ಸಲ್ಲುವುದುಎಂದರೆ  ನಂಬುವುದು ಕಷ್ಟ .

ಆದುದರಿಂದ ಡೆಂಗು ಜ್ವರಕ್ಕೆ  ದುಬಾರಿಯದ  ಕಿವಿ ಹಣ್ಣು ತಿನ್ನಬೇಕಿಲ್ಲ .ನಮ್ಮಲ್ಲೇ ಬೆಳೆಯುವ  ಹಣ್ಣು ಹಂಪಲು ಸಾಕು .ಆಧಾರ ರಹಿತ  ನಂಬಿಕೆ  ಬಹು ಬೇಗ  ಹಬ್ಬುತ್ತದೆ .ಆದರೆ  ಇದು ದುಬಾರಿ ನಂಬಿಕೆ.

ಶನಿವಾರ, ಸೆಪ್ಟೆಂಬರ್ 12, 2020

ಮಳೆಗಾಲದ ಬಗ್ಗೆ ಒಂದು ಪ್ರಬಂಧ

 ಮಳೆಗಾಲ  ಆರಂಭವಾಗುತ್ತಲೇ  ಕೊಡೆ  ಗೊರಬೆಗಳು ಹೊರ ಬರುತ್ತವೆ .ಇಂದಿನ ಕೊಡೆಗಳಂತೆ  ತರಾವಳಿ

ಗೊರಬೆಗಳನ್ನು ಮಾಡುವವರು ಹಳ್ಳಿಯಲ್ಲಿ ಇದ್ದರು.ಅವರಿಗೆ ಹಣವೇ ಆಗಬೇಕಿಲ್ಲ .ಹಲಸಿನ ಬೀಜವೊ 

ನೀರಡಿಕೆಯೋ ಕೊಟ್ಟರೆ ಆದೀತು .ಒಟ್ಟಿನಲ್ಲಿ ಆತ್ಮನಿರ್ಭರ  ಗ್ರಾಮಗಳು ಗೊರಬೆ ಬೆನ್ನು ಮತ್ತು ತಲೆಯ 

ಹಿಂಬಾಗ ಬೆಚ್ಚಗೆ ಇಟ್ಟೀತು.ಮುಂಬಾಗಕ್ಕೆ ವರುಣನ ಅಪ್ಪುಗೆ ಭಾಗ್ಯ .ಗಾಳಿ ಮಳೆಯಲ್ಲಿ ಕೊಡೆಯ ಅವಸ್ಥೆ

 ಇದಕ್ಕಿಂತಲೂ ಕಡೆ .

  ಉಳಿದ ಕಾಲಗಳಲ್ಲಿ ಅಡಿಕೆಯ ಹೊದಿಕೆ ಇದ್ದ ಮನೆಯ ಅಂಗಳ ಮಳೆಯ ಚಳಿಗೆ ಅಡಿಕೆ ಸೋಗೆಯ 

ಮರೆ ಹೋಗುತ್ತದೆ .ಉಳಿದೆಡೆ ಪಾಚಿ ಹಾಸು .ಕಾಲಿಟ್ಟರೆ ಜಾರುವುದು ಅದರ ಮೇಲೆ  ನಡೆದಾಡಲು 

ಅಡಿಕೆ ಮರದ ನೆಲ ಸೇತು .ಅಭ್ಯಾಸ ಇದ್ದವರಿಗೆ ಅದರ ಮೇಲಿನ ನಡಿಗೆ  ಸುಲಭ .ಇಲ್ಲದಿದ್ದವರು 

ಸರ್ಕಸ್ ಹಗ್ಗದ ಮೇಲೆ ನಡೆದಂತೆ ಆಗುವುದು .ವರ್ಷಕಾಲದ   ಉತ್ತರಾರ್ಧ ದಲ್ಲಿ  ಅಂಗಳ ತುಂಬಾ 

ತರಕಾರಿ ಬೆಳೆ.ಮುಳ್ಳು ಸೌತೆ ,ಪಡುವಲ,ಹೀರೆ ,ಬೆಂಡೆ. ಮತ್ತು ಅಲಸಂದೆ.

ನೆಂಟರು ಬರುವುದು ಕಡಿಮೆ .ರಾತ್ರಿ ಕಪ್ಪೆ ಜೀರುಂಡೆಗಳ ಹಿಮ್ಮೇಳದಲ್ಲಿ  ಮಳೆರಾಯನ ಜೋಗುಳಕ್ಕೆ 

ಸುಖ ನಿದ್ರೆ .

ಶಾಲೆಗೆ  ಹೋಗುವ  ಮಕ್ಕಳಿಗೆ  ಕಷ್ಟ  ಆದರೂ ಮಳೆ ಇಷ್ಟ .ಜೋರಾಗಿ ಮಳೆ ಬಂದರೆ ಶಾಲೆಗೆ ರಜೆ .

ಮಾಡಿನಿಂದ ಸುರಿವ ಜಲಧಾರೆಯಲ್ಲಿ ಕೈಕಾಲು,ಬುತ್ತಿಪಾತ್ರೆತೊಳೆಯಬಹುದು.ನೀರುಹುಡುಕಿ ಓಡ ಬೇಕಿಲ್ಲ ,

ಬಾವಿಯಿಂದ ಸೇದ ಬೇಕಿಲ್ಲ .ಶಾಲೆಯ ದಾರಿ ಗುಂಟ  ಹುಲುಸಾಗಿ ಬೆಳೆದಿರುವ ನೀರ ಕಡ್ಡಿ  ಸ್ಲೇಟು 

 ಒರೆಸಲು  ಸುಲಭ ಸಾಧನ .ಕಾಲ ಬೆರಳುಗಳ  ನಡುವೆ ನೀರ ಕಜ್ಜಿ .

 

ಮಳೆಗಾಲದಲ್ಲಿ ಅಜ್ಜ ಅಜ್ಜಿಯರಿಗೆ ಬೇಡಿಕೆ .ಸಮಯ ಹೋಗದಿರುವಾಗ ಕತೆ ಹೇಳಲು ,ತಮ್ಮ 

ಭಂಡಾರದಿಂದ ಹಲಸಿನ ಬೀಜ ,ಹಪ್ಪಳ ಇತ್ಯಾದಿ ಪಿಂಕಿಸಲು.

ಮಳೆಗಾಲಕ್ಕೆ ಬೇಕಾದ ಅಕ್ಕಿ ಬೇಳೆ ಇತ್ಯಾದಿ ಮೊದಲೇ ಶೇಖರಣೆ ಆಗಿರುತ್ತದೆ .ಅದರಂತೆ ಉರುವಲು 

ಸೌದೆ ,ತೆಂಗಿನ ಗರಿ ,.ಮಳೆಗಾಲಕ್ಕೆ ಪೂರ್ವ ತಯಾರಿ ಒಂದು ಹಬ್ಬ .ಕೆಲವೊಮ್ಮೆ  ಸಂಕಟ  ಮತ್ತು 

ಸವಾಲು .

ಶೇಖರ ಮಾಡಿದ ಉಪ್ಪಿನ ಕಾಯಿ ,ಹಲಸಿನ ಹಣ್ಣಿನ ಪೆರಟಿ ,ಮಾವಿನ ಮಾಂಬಳ  ಕಾಪಿಡಲು ಹಾರ 

ಸಾಹಸ .ಬೆಚ್ಚಗೆ  ಮುಚ್ಚಿ ಇಡಬೇಕು .ಆದರೂ ಬರುವುದು  ಕೆಲವೊಮ್ಮೆ  ಫಂಗಸ್ಸಿನ ಗಡ್ಡ ಮೀಸೆ .

ಬಟ್ಟೆ  ಒಣಗಿಸುವುದು ಹರ ಸಾಹಸ .ಬಾಳಂತಿ ಮಗು ಇದ್ದರೆ ಇನ್ನೂ ಕಷ್ಟ .ಬಚ್ಚಲು ಮನೆ  ಮತ್ತು 

ಅಡಿಗೆ  ಮನೆ , ಖಾಲಿ  ಓಲೆ ಮೇಲೆ ,ಬೆಚ್ಚನೆ ಹಂಡೆ ಮೇಲೆ  ಒಣಗಿಸಲ್ಪಟ್ಟ ಬಟ್ಟೆಗಳಿಗೆ ಹೊಗೆಯ ಸೆಂಟ್ .