ಬೆಂಬಲಿಗರು

ಸೋಮವಾರ, ಮಾರ್ಚ್ 16, 2026

ಸಕ್ಕರೆ ಕಾಯಿಲೆಯ ರೋಗ ಲಕ್ಷಣಗಳು

 ಆಂಗ್ಲ ಭಾಷೆಯಲ್ಲಿ ಮೂರು ಮುಖ್ಯ 'P' ಗಳು Polyuria (ಹೆಚ್ಚು ಮೂತ್ರ ಶಂಕೆ ),Polydipsia (ಅರದ ದಾಹ )Polyphagia (ತಣಿಯದ ಹಸಿವು ) ಮಧು ಮೇಹದ ಮುಖ್ಯ ಲಕ್ಷಗಳು ಎಂದು ವರ್ಣಿಸುತ್ತಾರೆ . 

ಅತೀ ಮೂತ್ರ ಮತ್ತು ದಾಹ ಏಕೆ ?

ಮೂತ್ರ ಪಿಂಡಗಳು ಅನಪೇಕ್ಷಿತ ವಸ್ತುಗಳನ್ನು ಫಿಲ್ಟರ್ ಮಾಡಿ ಹೊರ ಹಾಕುವಾಗ ಜತೆಗೆ ಹೋದ  ಗ್ಲುಕೊಸನ್ನು ಪುನಃ  ವಾಪಸು ಹೀರಿಕೊಳ್ಳುತ್ತವೆ . ಆದರೆ ಇದಕ್ಕೆ ಒಂದು ಪರಿಮಿತಿ ಇದೆ . ರಕ್ತದ ಗ್ಲುಕೊಸ ಪ್ರಮಾಣ 180 mg /dl  ಗಿಂತ ಜಾಸ್ತಿ ಇದ್ದರೆ ಅದು ಮೂತ್ರದಲ್ಲಿ ವಿಸರ್ಜನೆ ಆಗಿ ಹೋಗುತ್ತದೆ . ಸರ್ಪದಲ್ಲಿ ಯಾಗ ದಲ್ಲಿ  ತಕ್ಷಕನ ಜತೆ ಇಂದ್ರನು ಬಂದಂತೆ glucose ಜತೆ ನೀರೂ ಹೋಗುತ್ತದೆ . ಇದರಿಂದ ಉಂಟಾದ ನಿರ್ಜಲತೆ ಮತ್ತು ರಕ್ತದಲ್ಲಿ ಏರಿದ ಸಕ್ಕರೆ ಪ್ರಮಾಣ  ಇವೆರಡು ಸೇರಿ ರಕ್ತದ ಸಾಂದ್ರತೆ ಯನ್ನು ಏರಿಸುತ್ತವೆ . ನಮ್ಮ ಮೇದುಳಿನಲ್ಲಿ ದಾಹದ ಕೇಂದ್ರ ಎಂದು ಇದೆ . ರಕ್ತದ  ಸಾಂದ್ರತೆ ಏರಿದೊಡನೆ ಅದು ನೀರು ಕುಡಿಯಲು ಪ್ರೇರೇಪಿಸುತ್ತದೆ . ಅದೇ ಬಾಯಾರಿಕೆ . 

ತಣಿಯದ ಹಸಿವು 

ಕವಿಯೊಬ್ಬ ಸಮುದ್ರದ ನಡುವೆ  "water water everywhere nor any drop to drink' ಎಂದು ಹೇಳಿದಂತೆ ಮಧುಮೇಹ ದಲ್ಲಿ ಇನ್ಸುಲಿನ್ ಕೊರತೆ ಮತ್ತು ಪ್ರತಿರೋಧ ದಿಂದ ರಕ್ತದಲ್ಲಿ ಯಥೇಚ್ಛ ಸಕ್ಕರೆ ಇದ್ದರೂ ಜೀವಕೋಶ ಗಳಿಗೆ ಪ್ರವೇಶ  ಇಲ್ಲದ ಕಾರಣ ,ಮೇದುಳಿನಲ್ಲಿ ಇರುವ ಹಸಿವಿನ ಕೇಂದ್ರ ನಮ್ಮನ್ನು ಹೆಚ್ಚು ಹೆಚ್ಚು  ಆಹಾರ ಸೇವಿಸಲು ಪ್ರೇರೇಪಿಸುವುದು .

ಇವಲ್ಲದೆ ಇನ್ನೂ ಕೆಲವು ರೋಗ ಲಕ್ಷಣಗಳು ಇವೆ . 

ಶರೀರ ಬಚ್ಚುವುದು ಅಥವಾ ತೂಕ ಇಳಿಕೆ . 

ಜೀವಕೋಶಗಳಿಗೆ ಗ್ಲುಕೊಸ  ಸರಬರಾಜು ಆಗದ ಕಾರಣ ಶಕ್ತಿಯ ಉರುವಲು ಆಗಿ ಅನ್ಯ ಮಾರ್ಗಗಳನ್ನು ಹುಡುಕ ಬೇಕಾಗುತ್ತದೆ .(ಈಗಿನ ಎಲ್ ಪಿ ಜಿ ಸಮಸ್ಯೆ ಯಂತೆ ). ಅದಕ್ಕಾಗಿ ಶರೀರ  ಶೇಖರಿತ ಕೊಬ್ಬು ಮತ್ತು ಮಾಂಸ ಖಂಡಗಳನ್ನು ಜೀರ್ಣಿಸಿ ಶಕ್ತಿ ಉತ್ಪಾದನೆಗೆ ಪ್ರಯತ್ನಿಸುವುದು . ಇದರಿಂದ ಮತ್ತು ಮೇಲೆ ವಿವರಿಸಿದ ನಿರ್ಜಲತೆ ಯೂ ಸೇರಿ ಶರೀರ ಬಡವಾಗುವುದು . 

ಜನನಾಂಗಗಳ ಫಂಗಸ್ ಸೋಂಕು , ಗುಣವಾಗದ ಗಾಯಗಳು (ರೋಗ ನಿರೋಧಕ ಶಕ್ತಿ ಕುಂದುವಿಕೆ ಯಿಂದ )ದೃಷ್ಟಿ ಮಂಜು ಕೂಡಾ ಮಧು ಮೇಹದ ಆರಂಭ ಸೂಚನೆ ಇರ ಬಹುದು .

 

ಶುಕ್ರವಾರ, ಮಾರ್ಚ್ 13, 2026

ಶಕ್ತಿ ಚಕ್ರ

 ಶಕ್ತಿಯ ಮೂಲ ಸೂರ್ಯ . ಅವನ  ಕಿರಣಗಳ ಮೂಲಕ ಶಕ್ತಿ  ಸಸ್ಯ ರಾಶಿಯ ಮೇಲೆ ಬಿದ್ದು ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಯುವುದು .ಈ  ಮೂಲಕ ಕಾರ್ಬನ್ ಡೈಆಕ್ಸೈಡ್ ಮತ್ತು ನೀರನ್ನು ಸೇರಿಸಿ ಶಕ್ತಿ ಸಂಚಯಿತ ಪಿಷ್ಟ ಅಥವಾ ಕಾರ್ಬೋ ಹೈಡ್ರೇಟು ಉತ್ಪಾದನೆ . 

ನಮ್ಮ ಆಹಾರದಲ್ಲಿ ಸೇವನೆ ಆದ ಪಿಷ್ಟ ಕರುಳಿನಲ್ಲಿ ಪಚನ ಗೊಂಡು ಗ್ಲುಕೋಸ್ ಆಗಿ ಮಾರ್ಪಟ್ಟು ರಕ್ತ ಸೇರುವುದು . ಗ್ಲುಕೋಸ್ ಜೀವಕೋಶಗಳ ಪ್ರವೇಶ ಮಾಡಲು ಬೀಗ ತೆಗೆದು  ಅನುವು ಮಾಡಿ ಕೊಡುವುದು ಇನ್ಸುಲಿನ್ . ಶರೀರದ ನಖ ಶಿಖಾಂತ ಜೀವ ಶ್ವಾಸ ಮೂಲಕ ಸರಬರಾಜಾದ ಆಮ್ಲಜಕವನ್ನು ಉರುವಲಾಗಲಿ ಉಪಯೋಗಿಸಿ  ಕೋಶಗಳಲ್ಲಿ ರಾಸಾಯನಿಕ ಕ್ರಿಯೆ ಮೂಲಕ ಗ್ಲುಕೋಸ್ ಒಡೆಯಲ್ಪಟ್ಟು ಕಾರ್ಬನ್ ಡೈಆಕ್ಸೈಡ್ ,ನೀರು ಮತ್ತು ಶಕ್ತಿ ಬಿಡುಗಡೆ ಆಗುವುದು . ಕಾರ್ಬನ್ ಡೈಆಕ್ಸೈಡ್ ಉಸಿರಿನ ಮೂಲಕ ,ನೀರು ಮೂತ್ರ ಮತ್ತು ಉಸಿರಿನ ಮೂಲಕ ಹೊರ ಹಾಕಲ್ಪಟ್ಟರೆ ಶಕ್ತಿ ಅಂಗೋಪಾಂಗಗಳ ಕಾರ್ಯ ನಿರ್ವಹಣೆಗೆ ವ್ಯಯ ಆಗುವುದು .

ಇದು ಶಕ್ತಿಯ ಚಕ್ರ  

 PHOTOSYNTHESIS | Photosynthesis process ...

 Cellular Respiration | PPT

ಇನ್ಸುಲಿನ್ ಮತ್ತು ಗ್ಲುಕಾಗನ್: ದೇಹದ ಶಕ್ತಿಯ ಸಮತೋಲನದ ರಕ್ಷಕರು

ಪರಿಚಯ

ನಮ್ಮ ದೇಹದಲ್ಲಿ ಶಕ್ತಿಯ ಮೂಲವಾದ ಗ್ಲೂಕೋಸ್ ಅನ್ನು ನಿಯಂತ್ರಿಸುವಲ್ಲಿ ಎರಡು ಪ್ರಮುಖ ಹಾರ್ಮೋನ್‌ಗಳು — ಇನ್ಸುಲಿನ್ ಮತ್ತು ಗ್ಲುಕಾಗನ್ — ಅತ್ಯಂತ ಮುಖ್ಯ ಪಾತ್ರ ವಹಿಸುತ್ತವೆ. ಇವು ಎರಡೂ ಮೇದೋಜೀರಕ ಗ್ರಂಥಿ (Pancreas) ಯಿಂದ ಉತ್ಪತ್ತಿಯಾಗುತ್ತವೆ ಮತ್ತು ಪರಸ್ಪರ ವಿರುದ್ಧ ಕಾರ್ಯನಿರ್ವಹಿಸುತ್ತವೆ.


ಇನ್ಸುಲಿನ್

  • ಉತ್ಪತ್ತಿ: ಮೇದೋಜೀರಕ ಗ್ರಂಥಿ ಯ (ಪ್ಯಾಂಕ್ರಿಯಾಸ್) ಬೀಟಾ ಕೋಶಗಳು (Beta cells)

  • ಮುಖ್ಯ ಕಾರ್ಯ:

    • ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾದಾಗ ಅದನ್ನು ಕಡಿಮೆ ಮಾಡುವುದು

    • ಗ್ಲೂಕೋಸ್ ಅನ್ನು ಕೋಶಗಳೊಳಗೆ ಸೇರಿಸಿ ಶಕ್ತಿಯಾಗಿ ಬಳಸಲು ಸಹಾಯ ಮಾಡುವುದು

    • ಹೆಚ್ಚುವರಿ ಗ್ಲೂಕೋಸ್ ಅನ್ನು ಗ್ಲೈಕೋಜನ್ ರೂಪದಲ್ಲಿ ಯಕೃತ್ (Liver) ಮತ್ತು ಸ್ನಾಯುಗಳಲ್ಲಿ ಸಂಗ್ರಹಿಸುವುದು

  • ಮಹತ್ವ: ಇನ್ಸುಲಿನ್ ಇಲ್ಲದೆ ದೇಹದ ಕೋಶಗಳು ಗ್ಲೂಕೋಸ್ ಅನ್ನು ಬಳಸಲು ಸಾಧ್ಯವಿಲ್ಲ. ಇದರಿಂದ ಡಯಾಬಿಟಿಸ್ ಮೆಲ್ಲಿಟಸ್ ಎಂಬ ರೋಗ ಉಂಟಾಗುತ್ತದೆ.


ಗ್ಲುಕಾಗನ್

  • ಉತ್ಪತ್ತಿ: ಮೇದೋಜೀರಕ ಗ್ರಂಥಿ ಯ (ಪ್ಯಾಂಕ್ರಿಯಾಸ್) ಆಲ್ಫಾ ಕೋಶಗಳು (Alpha cells)

  • ಮುಖ್ಯ ಕಾರ್ಯ:

    • ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾದಾಗ ಅದನ್ನು ಹೆಚ್ಚಿಸುವುದು

    • ಯಕೃತ್‌ನಲ್ಲಿ ಸಂಗ್ರಹವಾಗಿರುವ ಗ್ಲೈಕೋಜನ್ ಅನ್ನು ಪುನಃ ಗ್ಲೂಕೋಸ್ ಆಗಿ ವಿಭಜಿಸಿ ರಕ್ತಕ್ಕೆ ಬಿಡುಗಡೆ ಮಾಡುವುದು

    • ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವುದು, ವಿಶೇಷವಾಗಿ ಉಪವಾಸದ ಸಮಯದಲ್ಲಿ

  • ಮಹತ್ವ: ಗ್ಲುಕಾಗನ್ ಇಲ್ಲದೆ ದೇಹವು ಉಪವಾಸ ಅಥವಾ ಹಸಿವಿನ ಸಮಯದಲ್ಲಿ ಶಕ್ತಿಯನ್ನು ಪಡೆಯಲು ಸಾಧ್ಯವಿಲ್ಲ.


ಇನ್ಸುಲಿನ್ ಮತ್ತು ಗ್ಲುಕಾಗನ್ ನಡುವಿನ ಸಮತೋಲನ

  • ಇನ್ಸುಲಿನ್: ಗ್ಲೂಕೋಸ್ ಕಡಿಮೆ ಮಾಡುವುದು

  • ಗ್ಲುಕಾಗನ್: ಗ್ಲೂಕೋಸ್ ಹೆಚ್ಚಿಸುವುದು

  • ಇವು ಎರಡೂ ಸೇರಿ ದೇಹದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿ ಇಡುತ್ತವೆ.

  • ಈ ಸಮತೋಲನವೇ ದೇಹದ ಶಕ್ತಿಯ ನಿರ್ವಹಣೆಗೆ ಅತ್ಯಂತ ಅಗತ್ಯ.


ಸಮಾರೋಪ ನೈಜ ಪ್ರಜಾಪ್ರಭತ್ವ ದಲ್ಲಿ ಚೆಕ್ಸ್ ಅಂಡ್ ಬ್ಯಾಲೆನ್ಸ್ ಆಗಿ ನ್ಯಾಯಾಂಗ ,ಪತ್ರಿಕೆಗಳು ವಿರೋಧ ಪಕ್ಷಗಳು ಇರುವಂತೆ ಇನ್ಸುಲಿನ್ ಗೆ ಗ್ಲುಕಾಗನ್ .

ಇನ್ಸುಲಿನ್ ಮತ್ತು ಗ್ಲುಕಾಗನ್ — ಇವು ದೇಹದ ಶಕ್ತಿಯ ರಕ್ಷಕರು. ಇನ್ಸುಲಿನ್ ಗ್ಲೂಕೋಸ್ ಅನ್ನು ಕಡಿಮೆ ಮಾಡಿ ಸಂಗ್ರಹಿಸುತ್ತದೆ, ಗ್ಲುಕಾಗನ್ ಅದನ್ನು ಹೆಚ್ಚಿಸಿ ಬಿಡುಗಡೆ ಮಾಡುತ್ತದೆ. ಇವುಗಳ ಸಮತೋಲನವೇ ಆರೋಗ್ಯಕರ ಜೀವನಕ್ಕೆ ಮೂಲಭೂತ ಅಂಶ.



ಶುಕ್ರವಾರ, ಫೆಬ್ರವರಿ 20, 2026

ಹಿರಿಯರಲ್ಲಿ ಬೀಳುವಿಕೆ ಮತ್ತು ಮೂಳೆ ಮುರಿತ

Our aim should be not only adding years to life but also adding life to years

  

೬೦ ವರ್ಷ ಮೇಲ್ಪಟ್ಟವರ ಪೈಕಿ  ೩೦% ಮಂದಿ ಬೀಳುತ್ತಾರೆ ,ಮತ್ತು ೧೦% ಮಂದಿಗೆ ಮೂಳೆ ಮುರಿತ ಉಂಟಾಗುವುದು . ಹಿರಿಯ ನಾಗರಿಕರಲ್ಲಿ ಇದು  ಗಂಭೀರ ಸಮಸ್ಯೆ . ಒಮ್ಮೆ ಬಿದ್ದವರಿಗೆ ಮತ್ತೆ  ಬಿದ್ದು ಬಿಡುವ ಭಯ ಅಡರಿ ಬಿಟ್ಟು  ಅದೇ ಒಂದು ಕಾಯಿಲೆ ಆಗುತ್ತದೆ .

 ಹಿರಿಯರಲ್ಲಿ ಬೀಳುವಿಕೆಗೆ ಹಲವು ಕಾರಣಗಳು ಇವೆ . ಕೆಲವನ್ನು ಪರಿಶೀಲಿಸುವಾ .

೧ . ಮಾಂಸ ಖಂಡಗಳ ದೌರ್ಬಲ್ಯ . ವಯಸ್ಸು ಆದಂತೆ ಮಾಂಸ ಖಂಡಗಳ  ಶಕ್ತಿ   ಕುಂದುವುದು . ಗಂಡಸರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಹೆಂಗಸರಲ್ಲಿ ಈಸ್ಟ್ರೋಜನ್ ಕಡಿಮೆ ಯಾಗುವುದು ಒಂದು ಕಾರಣ . ಸರಿಯಾದ ವ್ಯಾಯಾಮ ಇಲ್ಲದೆ ಇರುವುದೂ ಒಂದು ಕಾರಣ .ಹಿಂದೆ ನೆಲದಲ್ಲಿ ಕುಳಿತು ಕೊಳ್ಳುವ (ಊಟಕ್ಕೆ ಸೇರಿ)ಪದ್ಧತಿ ಇತ್ತು .ಇದರಿಂದ ಕುಳಿತು ಏಳುವುದು ಸಹಜ ವ್ಯಾಯಾಮ ಆಗುತ್ತಿತ್ತು .ಈಗ ಮಂಚ  .ಕುರ್ಚಿ ಸೋಫಾ  ಇತ್ಯಾದಿ ಬಂದ ಮೇಲೆ ಸೊಂಟ ಮತ್ತು ತೊಡೆಯ ಮಾಂಸ ಖಂಡಗಳು ವ್ಯಾಯಾಮ ಇಲ್ಲದೆ ಬೇಗ ಸೊರಗುತ್ತವೆ . ಬರೀ ನಡೆಯುವಿಕೆ  ಅಥವಾ ವಾಕಿಂಗ್ ಇದಕ್ಕೆ ಸಾಲುವುದಿಲ್ಲ .ಆದುದರಿಂದ ಇದಕ್ಕೆಂದೇ ಕೆಲವು ವ್ಯಾಯಾಮ ಗಳನ್ನು  ರೂಢಿಸಿ ಕೊಳ್ಳಬೇಕಾಗುತ್ತದೆ .(ಉದಾ Tai chi ಯಂತಹ ).ಮಾಂಸ ಖಂಡಗಳ ಆರೋಗ್ಯಕ್ಕೆ ಒಳ್ಳೆಯ ಸಸಾರ ಜನಕ ಯುಕ್ತ ಆಹಾರದ ಪ್ರಾಮುಖ್ಯತೆ ಇದ್ದೇ ಇದೆ .

೨. ಹಿರಿಯರಲ್ಲಿ ಸಮತೋಲ ಮತ್ತು ರಕ್ಷಣಾತ್ಮಕ  ಕ್ರಿಯೆಗಳು ಕುಂಠಿತ ವಾಗಿರುವುದು 

೩ ದೃಷ್ಟಿ  ಮಾಂದ್ಯ 

೪  ನರಗಳ ದೌರ್ಬಲ್ಯದಿಂದ ಕೆಲವರಲ್ಲಿ  ಕುಳಿತು ಕೊಳ್ಳುವಾಗ ಅಥವಾ ನಿಲ್ಲುವಾಗ  ರಕ್ತದ ಒತ್ತಡ ಹಠಾತ್ ಕಡಿಮೆ ಯಾಗಿ ಮೆದುಳಿಗ ಸಾಕಷ್ಟು ರಕ್ತ ಹೋಗದೆ ಬೀಳುವುದೂ ಇದೆ . ಇದನ್ನು postural hypotension  ಎನ್ನುವರು .

೫  ಸಂಧಿ ಸವೆತ .ಮುಖ್ಯವಾಗಿ ಸೊಂಟ ಮತ್ತು ಮೊಣಕಾಲು . 

೬  ನಿದ್ದೆ ಮಾತ್ರೆ ಸೇವನೆಯಿಂದ ಆಗುವ ಅಮಲು ,ಮದ್ಯ ಪಾನ 

೭ ಹೃದಯ ಸಂಬಂದಿ ಕಾಯಿಲೆಗಳು ,ಬಡಿತದ ಏರು ಪೇರು 

೮ ರಕ್ತದಲ್ಲಿ ಸೋಡಿಯಂ ,ಪೊಯಸ್ಸಿಯಂ ಇತ್ಯಾದಿಗಳ ಕೊರತೆ 

೯  ಮೂತ್ರ ಹಿಡಿದು ಕೊಳ್ಳಲು ಆಗದೇ ಇರುವುದರಿಂದ ಶಂಕೆಗೆ ಓಡುವುದು .

೧೦ ಪಾಲಿ ಫಾರ್ಮಸಿ ಅಥವಾ ಹಲ ಔಷಧಿಗಳ ಸೇವನೆ  

ಇತ್ಯಾದಿ ಬೀಳಲು ಕಾರಣಗಳು ಆದರೆ   ಸುಲಭವಾಗಿ  ಮುರಿತ ಉಂಟಾಗಲು ಎಲುಬು ಟೊಳ್ಳಾಗುವುದು ಕಾರಣ .ವಯಸ್ಸು ಆದಂತೆ ಸ್ತ್ರೀಯರಲ್ಲಿ  ಈಸ್ಟ್ರೋಜೆನ್ ಮತ್ತು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕೊರತೆ ಮುಖ್ಯ ಕಾರಣ . ಎಲುಬು ಸಾಂದ್ರತೆಗೆ ಕ್ಯಾಲ್ಸಿಯಂ ಮುಖ್ಯ ಮತ್ತು ಅದು ರಕ್ತ ಮೂಲಕ ಮೂಳೆ  ಸೇರಲು ವಿಟಮಿನ್ ಡಿ.ಇವೆರಡರ ಕೊರತೆ ಎಲುಬುಗಳನ್ನು  ಶಕ್ತಿ ಹೀನ ಮಾಡಿದರೆ    ವ್ಯಾಯಾಮದ ಕೊರತೆ ,ಕೆಲವು ಔಷಧಿಗಳು ,ಧೂಮ ಪಾನ ಇತ್ಯಾದಿ ಪೂರಕ ಅಂಶಗಳು .

 

 

 

  

 

ಬುಧವಾರ, ಫೆಬ್ರವರಿ 18, 2026

ಹಿರಿಯರ ಆರೋಗ್ಯ

 ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಲೇವರೇ |
ಔಷಧಂ ಜಾನ್ಹವೀ ತೋಯಂ ವೈದ್ಯೋ ನಾರಾಯಣೋ ಹರಿಃ 

ಆ ಗಾಗ ಕೇಳಿ ಬರುವ ಶ್ಲೋಕ .  ರೋಗ ಗ್ರಸ್ತ ವಾಗಿ ಜರ್ಜರಿತ  ಶರೀರ ಜರ್ಜರಿತ ವಾದಾಗ ದೇವರೇ ವೈದ್ಯ ,ಗಂಗಾ ಜಲವೇ ದಿವ್ಯ ಔಷಧ .ಮನುಷ್ಯನಿಗೆ  ವಯಸ್ಸಾದಾಗ ಶರೀರ ಶಿಥಿಲ ವಾಗಿ ರೋಗಗಳು ಹುಡುಕಿ ಕೊಂಡು ಬರುತ್ತವೆ .

ವಿನಾ ದೈನ್ಯೇನ ಜೀವಿತಂ ಅನಾಯಸೇನ ಮರಣಂ ಎಂಬ  ಮಂತ್ರ ಎಲ್ಲರಿಗೂ ಅಪ್ಯಾಯಮಾನವಾಗಿ ತೋರುವುದು .

ಆದುದರಿಂದ ಅನಾರೋಗ್ಯ ದೂರ ಇಡುವ ಕೆಲವು ಮಾರ್ಗೋಪಾಯ ಗಳನ್ನು  ಗಮನಿಸುವ .

ಇದರಲ್ಲಿ ಸುಲಭ (?)ಸಾಧ್ಯ  ಸರಿಯಾದ ಸಮತೋಲ ಆಹಾರ ಸೇವನೆ .

 

ಹಿರಿಯರಿಗೆ  ಸಮತೋಲಿತ ಆಹಾರವು ಕಡಿಮೆ ಕ್ಯಾಲೊರಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರಬೇಕು.ನಮ್ಮಲ್ಲಿ ಬಹು ಮಂದಿ ಅಕ್ಕಿ ಗಂಜಿ ,ನೀರು ದೋಸೆ ,ಪುಂಡಿ ಇತ್ಯಾದಿ ಆರೋಗ್ಯಕರ ಆಹಾರ ಎಂದು ಹೇಳುತ್ತಾರೆ .ಆದರೆ ಅಕ್ಕಿಯಲ್ಲಿ ಸಕ್ಕರೆ ಅಥವಾ ಕ್ಯಾಲೋರಿ ಜಾಸ್ತಿ .  ಸ್ನಾಯುಗಳ ಸಂರಕ್ಷಣೆಗೆ ಹೆಚ್ಚಿನ ಪ್ರೋಟೀನ್, ಜೀರ್ಣಕ್ರಿಯೆಗೆ ನಾರು, ಹಾಗೂ ಎಲುಬುಗಳ ಆರೋಗ್ಯಕ್ಕಾಗಿ ಅಗತ್ಯವಾದ ವಿಟಮಿನ್ ಮತ್ತು ಖನಿಜಗಳ ಮೇಲೆ ಒತ್ತು ನೀಡಬೇಕು. ಮುಖ್ಯ ಅಂಶಗಳಲ್ಲಿ ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು, ಕಡಿಮೆ ಕೊಬ್ಬಿನ ಪ್ರೋಟೀನ್ (ಮೀನು, ಕೋಳಿ, ಬೀನ್ಸ್), ಮತ್ತು ಕಡಿಮೆ ಕೊಬ್ಬಿನ ಹಾಲು ಉತ್ಪನ್ನಗಳು ಸೇರಿವೆ.  ಕೊಬ್ಬು, ಉಪ್ಪು ಮತ್ತು ಸಕ್ಕರೆ ಬಳಕೆಯನ್ನು ಕಡಿಮೆ ಮಾಡಬೇಕು. ದೇಹದಲ್ಲಿ ನೀರಿನ ಸಮತೋಲನ ಕಾಪಾಡುವುದು ಅತ್ಯಂತ ಮುಖ್ಯ, ಹಾಗೆಯೇ ಮೃದುವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು.

 

ಪ್ರೋಟೀನ್: ಸ್ನಾಯುಗಳ ಭಾರವನ್ನು ಕಾಪಾಡಲು ಅಗತ್ಯ. ಕಡಿಮೆ ಕೊಬ್ಬಿನ ಮಾಂಸ, ಕೋಳಿ, ಮೊಟ್ಟೆ, ಮೀನು, ಬೀನ್ಸ್ ಮತ್ತು ಕಾಯಿ-ಬೀಜಗಳು ಉತ್ತಮ ಮೂಲಗಳು.ಅಕ್ಕಿ ಗೋಧಿ ಯಂತಹ ಏಕ ದಳ  ಧಾನ್ಯಗಳಿಗಿಂತ ಹೆಸರು ಕಡಲೆ ಉದ್ದು ಮುಂತಾದ ದ್ವಿದಳ ಧಾನ್ಯಗಳಲ್ಲಿ ಪ್ರೊಟೀನ್ ಅಥವಾ ಸಸಾರ ಜನಕ ಅಧಿಕ ಎಂಬುದನ್ನು ಗಮನಿಸ ಬೇಕು .

ಹಣ್ಣುಗಳು ಮತ್ತು ತರಕಾರಿಗಳು: ವಿವಿಧ ಬಣ್ಣಗಳ ಹಣ್ಣು ಮತ್ತು ತರಕಾರಿಗಳನ್ನು, ವಿಶೇಷವಾಗಿ ಹಸಿರು ಎಲೆ ತರಕಾರಿಗಳನ್ನು ಸೇವಿಸುವುದು ನಾರು ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಒದಗಿಸುತ್ತದೆ.

ಅಸಂಸ್ಕರಿತ ಇಡೀ ಧಾನ್ಯ ಗಳು .

ಹಾಲು ಉತ್ಪನ್ನಗಳು: ಕಡಿಮೆ ಕೊಬ್ಬಿನ ಹಾಲು, ಮೊಸರು  ಕ್ಯಾಲ್ಸಿಯಂ ಹಾಗೂ ವಿಟಮಿನ್ D ಒದಗಿಸಿ ಎಲುಬುಗಳ ಆರೋಗ್ಯವನ್ನು ಕಾಪಾಡುತ್ತವೆ.



ಆಹಾರ ಸಂಬಂಧಿತ ಸಲಹೆಗಳು ಮತ್ತು ಗಮನಿಸಬೇಕಾದ ವಿಷಯಗಳು

ನೀರಿನ ಸೇವನೆ: ವಯಸ್ಸಾದಂತೆ ದಾಹದ ಭಾವನೆ ಕಡಿಮೆಯಾಗಬಹುದು, ಆದ್ದರಿಂದ ದಿನಪೂರ್ತಿ ಸಾಕಷ್ಟು ದ್ರವಗಳನ್ನು ಕುಡಿಯಬೇಕು.

ಉಪ್ಪು ಮತ್ತು ಸಕ್ಕರೆ ಕಡಿಮೆ ಮಾಡುವುದು: ರುಚಿಗಾಗಿ ಉಪ್ಪಿನ ಬದಲು ಸೊಪ್ಪುಗಳು ಮತ್ತು ಮಸಾಲೆಗಳನ್ನು ಬಳಸಿ; ಸಕ್ಕರೆ ಮತ್ತು ಸಂಸ್ಕರಿಸಿದ  ಆಹಾರಗಳನ್ನು ತಪ್ಪಿಸಬೇಕು.ಉಪ್ಪಿನ ಕಾಯಿ ,ಉಪ್ಪಿನಲ್ಲಿ ಕಾಪಿಟ್ಟ ಹಲಸು ಮಾವು ಮೀನು  ಇತ್ಯಾದಿ ಯಲ್ಲಿ ಉಪ್ಪು ಸಾಂದ್ರೀಕೃತ ವಾಗಿರುತ್ತದೆ  ಎಂದು ಗಮನಿಸ ಬೇಕು  

ಚಿಕ್ಕ ಪ್ರಮಾಣದ, ಹೆಚ್ಚು ಬಾರಿ ಊಟ: 

 

 ಉಪವಾಸ 

 ನಿಯಮಿತವಾಗಿ  ಮಾಡುವ ಉಪವಾಸ ಆರೋಗ್ಯಕ್ಕೆ ಉತ್ತಮ ಎಂದು ಕಂಡು ಬಂದಿದೆ .ಇದು ಆಚೇ ಮನೆ ಸುಬ್ಬಮ್ಮನ ಉಪವಾಸ ದಂತೆ ಬರೀ ಅನ್ನ ಬಿಟ್ಟು ಉಳಿದನ್ನು ಸ್ವಾಹಾ ಮಾಡುವುದು ಆಗಿರ ಬಾರದು ಮತ್ತು ಉಪವಾಸ ಮುರಿದ ಮೇಲೆ ಅದನ್ನು ಹೆಚ್ಚಿನ ಆಹಾರ ಸೇವಿಸಿ ಸಮತೂಕ ಮಾಡಲು ಹೋಗ ಬಾರದು .

(ಮುಂದುವರಿಯುವುದು )

ಮಂಗಳವಾರ, ಫೆಬ್ರವರಿ 17, 2026

ಹಿರಿಯ ರ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

 ಸಮಾಜದಲ್ಲಿ ಹಿರಿಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು  ಅವರಿಗೆ  ಕೌಟಿಂಬಿಕ ಬೆಂಬಲ ಕಡಿಮೆ ಯಾಗುತ್ತಿರುವ ಈ ಕಾಲದಲ್ಲಿ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳ ಬೇಕಾದ ಜವಾಬ್ದಾರಿ ಅವರ ಮೇಲೆ ಇದೆ . 

ಇಂದಿನ ತಥಾಕಥಿತ ನಾಗರೀಕ ಸಮಾಜದ ಕಾಯಿಲೆಗಳಾದ ರಕ್ತದ ಒತ್ತಡ ,ಸಕ್ಕರೆ ಕಾಯಿಲೆ ,ಹೃದ್ರೋಗ ಗಳಲ್ಲದೆ ಹಿರಿಯ ನಾಗರಿಕರಲ್ಲಿ ಕಾಣಿಸಿ ಕೊಳ್ಳುವ ಮೂತ್ರ ಸಂಬಂದಿ  ಸಮಸ್ಯೆ ,ಬೀಳುವಿಕೆ ಮತ್ತು ಮೂಳೆ ಮುರಿತ , ಮಹಿಳೆಯರಲ್ಲಿ  ಋತುಬಂಧ ಸಮಸ್ಯೆಗಳು ಇವುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಗಾರ ವೊಂದನ್ನು  ೧.೩.೨೦೨೬ ನೇ ಭಾನುವಾರ ಪುತ್ತೂರಿನಲ್ಲಿ ಹಮ್ಮಿ ಕೊಳ್ಳಲಾಗಿದೆ . 

ಹಿರಿಯ ಮೂಳೆ ತಜ್ಞ ಡಾ ಭಾಸ್ಕರ್ ಅವರು ಹಿರಿಯರ ಮೂಳೆ ಮತ್ತು ಸಂಧಿ ವ್ಯಾಧಿಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ,ಹಿರಿಯ ಶಸ್ತ್ರ ಚಿಕಿತ್ಸಾ ವೈದ್ಯ ಡಾ ಗೋಪಿನಾಥ ಪೈ ಅವರು ಹಿರಿಯ  ಪುರುಷ ಮತ್ತು ಸ್ತ್ರೀಯರ ಮೂತ್ರ ಸಂಬಂದಿ ಸಮಸ್ಯೆಗಳ ಮೇಲೆ ಮತ್ತು ಜನಪ್ರಿಯ ಸ್ತ್ರೀ ರೋಗ ತಜ್ಞೆ ಡಾ ಶ್ರುತಿ ಅಲೆವೂರ್ ಋತುಬಂಧ(ಮುಟ್ಟು ನಿಲ್ಲುವಿಕೆ )ಸಂಬಂಧಿ ವಿಚಾರಗಳ ಬಗ್ಗೆ ಮಾತನಾಡುವರು . ಹಿರಿಯ ಫಿಸಿಯೋಥೆರಪಿಸ್ಟ್ ವಿನಯ ಪ್ರಸಾದ್ ಝಾ ಅವರು ಉಪಯುಕ್ತ ವ್ಯಾಯಾಮ ಗಳ  ಪ್ರಾತ್ಯಕ್ಷಿಕೆ ನೀಡುವರು . ಪ್ರಶ್ನೆ ಸಮಾಲೋಚನೆಗೆ ಅವಕಾಶ ಇದೆ . ಜತೆಗೆ ನಾನೂ ಇರುತ್ತೇನೆ .

ನಿಯಮಿತ  ಆಸನ ವ್ಯವಸ್ಥೆ ಇರುವುದರಿಂದ ದಯವಿಟ್ಟು ೨೬.೨.೨೦೨೬ ರ ಒಳಗೆ ನೋಂದಾಯಿಸಿ ಕೊಳ್ಳಬೇಕಾಗಿ ವಿನಂತಿ . ಇದು ಪೂರ್ಣ ಉಚಿತ . ಕಾರ್ಯಕ್ರಮ ನಂತರ ಊಟದ ವ್ಯವಸ್ಥೆ ಇದೆ .



ಬುಧವಾರ, ನವೆಂಬರ್ 5, 2025

ಈ ಪ್ರದೇಶ ಸಿಸಿ ಟಿವಿ ಕಣ್ಗಾಪಿನಲ್ಲಿದೆ

ಈ ಪ್ರದೇಶ ಸಿಸಿ ಟಿವಿ ಕಣ್ಗಾಪಿನಲ್ಲಿದೆ 

ಈಗ  ಶಾಲೆ ಕಾಲೇಜ್ ಆಸ್ಪತ್ರೆ ,ಸರಕಾರಿ ಕಚೇರಿ ಬ್ಯಾಂಕ್  ಎಲ್ಲೆಂದರಲ್ಲಿ ಕಂಡು ಬರುವ ಸೂಚನಾ ಫಲಕ . ತಮ್ಮಲ್ಲಿ ಬರುತ್ತಿರುವ ಅತಿಥಿ ,ಗ್ರಾಹಕರ ಲ್ಲಿ  ಕೆಲವರ ಮೇಲೆ ಅಪನಂಬಿಕೆ ಇರುವ ಸೂಚನೆ . ಸರ್ವಾನ್ತರ್ಯಾಮಿ  ಯಾದ ದೇವರನ್ನು ಪ್ರತಿಷ್ಠಿಸಿರುವ ದೇವಾಲಯ ಗಳಲ್ಲಿಯೂ ಇಂತಹ ಎಚ್ಚರಿಕೆ ಇರುವುದು ವಿಪರ್ಯಾಸ . ಗುರುಗಳು ಶಿಷ್ಯರಿಗೆ ತಲಾ ಒಂದು ಬಾಳೆಹಣ್ಣು ಕೊಟ್ಟು ದೇವರು ಇಲ್ಲದ ತಾಣದಲ್ಲಿ ತಿನ್ನಿರಿ ಎಂದು ಹೇಳಿದಾಗ ಎಲ್ಲರೂ ಹಣ್ಣು ಸಹಿತ ವಾಪಸು ಬಂದ ಕತೆ ಕೇಳಿದ್ದೇವೆ . 

      ಮನೆಯಲ್ಲಿ ನಿಜಕ್ಕೂ ನಾಯಿ ಇಲ್ಲದಿದ್ದರೂ ಕಚ್ಚುವ ನಾಯಿ ಇದೆ ಎಂದು ಕೆಲವರು ಬೋರ್ಡ್ ಹಾಕಿ ಕೊಂಡು ಇರುತ್ತಾರೆ .;. ಕಳ್ಳರನ್ನು ಹೆದರಿಸಲು .  ಹಾಗೆಯೇ ಸಿಸಿಟಿವಿ  ಎಚ್ಚರಿಕೆ ಯೂ  ಇರುವ ಸಾಧ್ಯತೆ ಇದೆ . 

ಪರೀಕ್ಷಾ ಕೇಂದ್ರಗಳಲ್ಲಿ ಈಗ ಸಿಸಿಟಿವಿ ಕಡ್ಡಾಯ . ಆದರೂ ಕಾಪಿ ಹೊಡೆಯುವುದು ಕಡಿಮೆ ಆಗಿದೆ ಎಂದು ಎದೆ ತಟ್ಟಿ ಹೇಳುವುದು ಕಷ್ಟ . ನೀವು ಚಾಪೆಯ ಕೆಳಗೆ ನುಗ್ಗಿದರೆ ರಂಗೋಲಿ ಕೆಳಗೇ ಅಡಗುವವರು ಇದ್ದಾರೆ  ನೆಸೆ ಸಿಟಿ ಈಸ್ ಮದರ್ ಆಫ್ ಇನ್ವೆಂಷನ್ . 

ಸರಕಾರಿ ಕಚೇರಿಗಳಲ್ಲಿ ಇದರ ಅಳವಡಿಕೆಯಿಂದ ಲಂಚದ ಹಾವಳಿ ಕಡಿಮೆ ಆಗಿದೆಯೇ ,ಸಾರ್ವಜನಿಕರೇ ಹೇಳಬೇಕು . ಲಂಚವನ್ನು ಮಧ್ಯವರ್ತಿಗಳ ಮೂಲಕ ,ಕಾಪಿ ಕುಡಿಯುವಾ ಎಂದು ಪಕ್ಕದ ಹೋಟೆಲ್ ನಲ್ಲಿ ಮತ್ತು ಕೆಲವರು ಕಚೇರಿಯ ಶೌಚಾಲಯದಲ್ಲಿ (ಅಲ್ಲಿ ಸಿಸಿಟಿವಿ ಹಾಕುವಂತಿಲ್ಲ )ವಸೂಲು ಮಾಡುವರು ಎಂದು ಕೇಳಿದ್ದೇನೆ  . 

ಸಿಸಿಟಿವಿ ಸಹಾಯದಿಂದ ಅಪರಾಧಿಗಳನ್ನು ಪತ್ತೆ ಹಚ್ಚಿದ ವಾರ್ತೆ ಓದಿದ್ದೇವೆ . ಇತ್ತೀಚೆಗೆ ಕುಟುಂಬ ಕಲಹ ,ಆತ್ಮಹತ್ಯೆ ,ಕೊಲೆ ಇತ್ಯಾದಿ ಅಧಿಕ ಆಗುತ್ತಿರುವುದರಿಂದ  ಇನ್ನು ಎಲ್ಲಾ ಮನೆಗಳ ಒಳಗೂ ಸಿಸಿಟಿವಿ ಕಡ್ಡಾಯ ಮಾಡ ಬಹುದು . 

ಕೆಲವು ಶಾಲೆಗಳಲ್ಲಿ ಸಿಸಿಟಿವಿ  ಲಿಂಕ್ ಮತ್ತು ಪಾಸ್ವರ್ಡ್ ಹೆತ್ತವರಿಗೆ ಕೊಟ್ಟು  ಶಾಲೆಯಲ್ಲಿ ಚೆನ್ನಾಗಿ ಕಲಿಸುತ್ತಾರೆಯೋ ಇಲ್ಲವೋ ,ತಮ್ಮ ಮಕ್ಕಳು ತರಗತಿಗಳಲ್ಲಿ  ಆಸಕ್ತಿಯಿಂದ  ಕಲಿಯುವರೋ ಎಂದು ತತ್ಸಮಯ ಗಮನಿಸುವ ವ್ಯವಸ್ಥೆ ಮಾಡಿರುತ್ತಾರೆ ಎಂದು ಕೇಳಿದ್ದೇನೆ . 

ಅಪರಾಧ ಗಳನ್ನು  ತಿಳಿದೂ ತಿಳಿದೂ ಮಾಡಿ ದೇವಾಲಯಗಳಿಗೆ ದೊಡ್ಡ ಕಾಣಿಕೆ ಹಾಕಿ  ಲೇವಾದೇವಿ ಮಾಡುವ ಮಂದಿಗೆ ಸರ್ವನ್ತರ್ಯಾಮಿ ಯ  ಭಯ ಇಲ್ಲದಿದ್ದರೂ ಮಾನವ ನಿರ್ಮಿತ  ಸಿಸಿಟಿವಿ ಯ  ಹೆದರಿಕೆ ಸ್ವಲ್ಪ ಇರಬಹುದು . 

ಹಿಂದೆ ಮನೆ ಕಾವಲಿಗೆ ನಾಯಿ ಸಾಕುತ್ತಿದ್ದೆವು . ಅಪರಿಚಿತರು ಬಂದರೆ ಮಾತ್ರ ಅವು ಬೊಗಳುವವು . ಕತ್ತಲೆಯಲ್ಲಿ ಮನೆಯವರು ಬಂದಾಗಲೂ ಕೆಲವೊಮ್ಮೆ ಬೊಗಳಿದಾಗ "ನಾನಲ್ಲವೇ ನಾಯಿ ,ನೀನ್ಯಾಕೆ ಬೊಗಳುವೆ "ಎನ್ನುವುದು ಸಾಮಾನ್ಯ . ಇನ್ನು ಮನೆ ಮಂದಿಯ ಮುಖ ಚರ್ಯೆ ಯನ್ನು ಸಿಸಿಟಿವಿ ಯಲ್ಲಿ ದಾಖಲಿಸಿ ಅಪರಿಚಿತರು ಬಂದಾಗ ಸೈರನ್ ಮಾಡುವ ವ್ಯವಸ್ಥೆ ಬಂದರೆ  ಕಾವಲು ನಾಯಿ ಸಾಕಣೆ ನಿಲ್ಲ ಬಹುದು  

ಮಂಗಳವಾರ, ಸೆಪ್ಟೆಂಬರ್ 9, 2025

 DR. SULEKHA VARADARAJ ...                                                                               

ಡಾ ಸುಲೇಖಾ ವರದರಾಜ್ ಪುತ್ತೂರು ಇ ಎಸ ಐ  ವೈದ್ಯಾಧಿಕಾರಿ ಯಾಗಿ ಸುಧೀರ್ಘ ಸೇವೆ ಸಲ್ಲಿಸಿ  ಕೆಲ ತಿಂಗಳುಗಳ ಹಿಂದೆ ಸ್ವಯಂ ನಿವೃತ್ತಿ  ಹೊಂದಿದರು . ತಮ್ಮ ಪ್ರಾಮಾಣಿಕ ಸೇವೆಯಿಂದ ಜನಾನುರಾಗಿದ್ದವರು . ಮಕ್ಕಳ ತಜ್ಞೆ ,ಹದಿಹರೆಯದವರ ಮಾನಸಿಕ ಸಮಸ್ಯೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಇವರು ವೈದ್ಯಕೀಯ ಸಮ್ಮೇಳನಗಳಲ್ಲಿ ಬಹು ಬೇಡಿಕೆ ಯುಳ್ಳ ವೈದ್ಯೆ . ವೈದ್ಯರಲ್ಲಿ ಸಾಹಿತ್ಯ  ಸಂಗೀತ ಲಲಿತ ಕಲೆಯಲ್ಲಿ ಆಸಕ್ತಿ ಇರುವವವರು ಕಡಿಮೆ ,ಒಂದು ವೇಳೆ ಇದ್ದರೂ ಸಮಯ ಇರುವುದಿಲ್ಲ . ಆದರೆ ಸುಲೇಖಾ ಅವರ ಆಸಕ್ತಿ ಬಹುಮುಖ .. ಸರಿಯಾಗಿ ಅವರ ಪತಿ ಕನ್ನಡ ಪ್ರಾಧ್ಯಾಪಕ ,ಸಾಹಿತಿ ಮತ್ತು ಸಂಗೀತ ಪ್ರಿಯ . ಸರಕಾರಿ ಸೇವೆಯಿಂದ ನಿವೃತ್ತಿ ಪಡೆದ ಮೇಲೆ ತಮ್ಮ ಮನಸಿಗೆ ಹತ್ತಿರವಾದ ವಿಷಯಗಳ ಮೇಲೆ ಸಮಯ ವಿನಿಯೋಗಿಸುತ್ತಿರುವರು . 

ವರದರಾಜ್ ಚಂದ್ರಗಿರಿ  ಮೊನ್ನೆ ಮೊನ್ನೆ ಸೇವಾ ನಿವೃತ್ತಿ ಹೊಂದಿರುವರು .ಬೆಟ್ಟಂಪಾಡಿ ಸರಕಾರಿ ಕಾಲೇಜು ಪ್ರಿನ್ಸಿಪಾಲ್ ಅವರ ಸೇವೆಯ ಕೊನೆಯ ಹುದ್ದೆ . ಈ ಕಾಲೇಜು ಯಾವುದೇ ಖಾಸಗಿ ಸಂಸ್ಥೆಗೆ ಕಡಿಮೆ ಇಲ್ಲದಂತೆ ಮಾಡುವಲ್ಲಿ ಇವರ ಕೊಡುಗೆ ಅಮೂಲ್ಯ . ಇವರ ನೇತೃತ್ವದಲ್ಲಿ ನಡೆದ ವಿಚಾರ ಸಂಕಿರಣಗಳು ,ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅನೇಕ  .ನಾನೂ ಎರಡು ಕಾರ್ಯಕ್ರಮಗಳಿಗೆ ಹಾಜರಾಗಿ ಆನಂದ ಪಟ್ಟಿದ್ದೇನೆ . ಸ್ವಯಂ ಸಾಹಿತಿಯಾದ ಇವರು ಖ್ಯಾತ ಕತೆಗಾರ ದಿ  ವ್ಯಾಸ ಅವರ ಸಮೀಪ ಬಂಧು . ಪುತ್ತೂರು ತಾಲೂಕು  ಸಾಹಿತ್ಯ ಪರಿಷತ್ ನ ಮುಖ್ಯಸ್ಥನಾಗಿ ಹಲವು ಒಳ್ಳೆಯ ಕಾರ್ಯಕ್ರಮಗಳನ್ನು ಏರ್ಪಡಿಸಿದ ಗರಿಮೆ ಅವರದು .. ಕಾರ್ಕಳ ಕಾಲೇಜ್ ನಲ್ಲಿ ಇದ್ದಾಗ ಹಿರಿಯ ಸಂಘಟಕ ರಾಮಚಂದ್ರ ಅವರ ಜತೆಗೆ ಇವರು . ನನಗೆ ರಾಮಚಂದ್ರ ಅವರನ್ನು ಪರಿಚಯಿಸಿದವರೇ ಚಂದ್ರಗಿರಿ ಅವರು 

ಚಂದ್ರಗಿರಿ ದಂಪತಿಗಳ ಮನೆಯ ಹೆಸರು ಸಮರಸ . ಅನ್ವಯಾರ್ಥ ,ಸಾಹಿತ್ಯದಲ್ಲಿಯೂ ಬದುಕಿನಲ್ಲಿಯೂ  . ಇಬ್ಬರದೂ ಸರಳ ವ್ಯಕ್ತಿತ್ವ ,ನೇರ ನುಡಿ .  ಪುತ್ತೂರಿಗೆ ಬಂದು ನಾನು ಮತ್ತು ನನ್ನ ಕುಟುಂಬ ದ  ಸಂಪಾದನೆ ಎಂದರೆ ಇಂತಹವರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಸ್ನೇಹ . ಚಂದ್ರಗಿರಿ ದಂಪತಿಗಳಿಗೆ ಇಬ್ಬರು ಮಕ್ಕಳು . ಮಗ ಉದ್ಯೋಗದಲ್ಲಿ ಇದ್ದು ,ಮಗಳು ವಿದ್ಯಾರ್ಥಿ . 

                ಸರಕಾರಿ ಸೇವೆಯಿಂದ ನಿವೃತ್ತಿ ಪಡೆದ ಈ ದಂಪತಿಗಳು  ತಮ್ಮ  ಹೃದಯಕ್ಕೆ ಹತ್ತಿರವಾದ ಚಟುವಟಿಕೆಗಳಲ್ಲಿ ಪ್ರವೃತ್ತರಾಗಲಿ . ಆಯುರಾರೋಗ್ಯ ಸೌಖ್ಯ ಅವರಿಗಿರಲಿ .