ಬೆಂಬಲಿಗರು

ಭಾನುವಾರ, ಮೇ 5, 2024

ಚಿಣ್ಣರೊಂದಿಗೆ ಸ್ವಲ್ಪ ಹೊತ್ತು 



 ಯುವ  ಉದ್ಯಮ ಶೀಲ  ದಂಪತಿಗಳಾದ ಗಣೇಶ್  ಮತ್ತು  ಪ್ರಫುಲ್ಲ  ಹಲವು ವರ್ಷಗಳಿಂದ  ನನಗೆ ಪರಿಚಿತರು ;ನಮ್ಮ ಆಸ್ಪತ್ರೆಯ ಸಮೀಪ ತರಬೇತಿ ಸಂಸ್ಥೆ ಯೊಂದನ್ನು ನಡೆಸುತ್ತಿದ್ದು  ನನ್ನ ಮೇಲೆ ಅಭಿಮಾನ ಇಟ್ಟುಕೊಂಡವರು . ದಿವಸಗಳ ಹಿಂದೆ ತಮ್ಮ ಸಂಸ್ಥೆ ನಡೆಸುತ್ತಿರುವ ಮಕ್ಕಳ  ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕ್ಕೆ ಅತಿಥಿ ಗಳಾಗಿ ಬರಬೇಕು ಎಂದು ಕೇಳಿ ಕೊಂಡಾಗ ಈಗಿನ ಗೊಂದಲ ಮತ್ತು  ಬಿಸಿಲು ಎರಡರಿಂದ ಸ್ವಲ್ಪ ವಿರಾಮ ವಾಗಲಿ ಎಂದು ಒಪ್ಪಿಕೊಂಡೆನು . ನಿರಾಸೆ ಆಗಲಿಲ್ಲ 

ನಮ್ಮ ಬಾಲ್ಯದಲ್ಲಿ ಸಮ್ಮರ್ ಕ್ಯಾಂಪ್ ಅಜ್ಜನ ಮನೆಯಲ್ಲಿ . ಅಲ್ಲಿ ಅಜ್ಜಿ ,ಮಾವ ಅತ್ತೆ ,ಅವರ ಮಕ್ಕಳ ಜತೆ . ಸ್ವಂತ ಮನೆಯೇತರ ವಾತಾವರಣ ಕ್ಕೆ ಹೊಂದಿಕೊಳ್ಳುವುದು ,ತೋಟ ,ಗುಡ್ಡೆ ಅಲೆಯುವುದು ,ತನ್ಮೂಲಕ ಸಹಜ ಕಲಿಕೆಯೂ ಆಗುವುದು . ನಮ್ಮ ಭಾವಂದಿರೊಂದಿಗೆ ಅವರ ತರಗತಿಗಳಿಗೆ ಅತಿಥಿ ವಿದ್ಯಾರ್ಥಿ ಯಾಗಿ ಹೋಗಿದ್ದೂ ಇದೆ . ಕೇರಳದಲ್ಲಿ ಓಣಂ ಗೆ ಹೆಚ್ಚು ರಜೆ ಇದ್ದುದರಿಂದ ನಮ್ಮ ರಜಾ ದಿನಗಳಲ್ಲಿ ಅವರಿಗೆ ಶಾಲೆ ಇರುತ್ತಿತ್ತು . ಸ್ವಂತ ಮನೆಯ ಮಕ್ಕಳಿಗೆ ಇರುವ ಕಟ್ಟು ನಿಟ್ಟಿನ ನಿಯಮಗಳು  ಅತಿಥಿಗಳಾದ ನಮಗೆ ಕಡಿಮೆ ಅನ್ವಯ ಅಲ್ಲದೆ  ಅತಿಥಿಗಳು ಇರುವಾಗ ಮನೆ ಮಕ್ಕಳಿಗೆ ಪೆಟ್ಟು ಬೀಳುತ್ತಿದುದು ಕಡಿಮೆ . ಅಜ್ಜನ ಮನೆಯಲ್ಲಿ ಇದ್ದ ಕತೆ ಪುಸ್ತಕಗಳನ್ನು ಓದುವುದು ;ಜತೆಗೆ ನಮ್ಮ ಭಾವಂದಿರ  ಪಠ್ಯ ಪುಸ್ತಕಗಳು .. ಇಂತಹ ಸಹಜ ಶಿಬಿರಗಳು ಮಕ್ಕಳು  ಸಮಾಜ ಜೀವಿಗಳಾಗಲು ಸಹಾಯ ಎಂದು ನನ್ನ ಅನಿಸಿಕೆ . 

ಆದರೆ ಈಗ ಅಂತಹ ದೀರ್ಘ ಕಾಲದ ಅಜ್ಜಿ ಮನೆ ವಾಸ ಕಾಣೆಯಾಗಿದೆ .ಮಕ್ಕಳು ಸುಮ್ಮನೆ ಬಿಟ್ಟರೆ ಮೊಬೈಲ್ ಟಿವಿ ರಾಗುತ್ತಾರೆ .ದಿನವಿಡೀ ಆಟವಾಡಲೂ ಆಗುವುದಿಲ್ಲ . ಅದಕ್ಕೆಂದು ಬೇಸಗೆ ಶಿಬಿರಗಳನ್ನು ಏರ್ಪಡಿಸುವರು . ಇಂತಹ ಶಿಬಿರಕ್ಕೇ ಮೊನ್ನೆ ಹೋದುದು . ಈಗಿನ ಮಕ್ಕಳು ಮೇಲ್ನೋಟಕ್ಕೆ ನಾವು ಬಾಲ್ಯದಲ್ಲಿ ಇದ್ದುದಕ್ಕಿಂತ ಬಹಳ ಚೂಟಿ ಯಾಗಿರುವುದಲ್ಲದೆ  ,ಸಂಕೋಚ ,ಅತಿ ನಾಚಿಕೆ ಇಲ್ಲ . ನೀವೆಲ್ಲಾ ದೊಡ್ಡ ವರಾಗಿ ಏನು ಆಗ ಬಯಸುತ್ತೀರಿ ಎಂದುದಕ್ಕೆ ಡಾಕ್ಟರ್ ಎಂದು ಒಬ್ಬರೂ ಹೇಳಲಿಲ್ಲ . ಒಬ್ಬಳು ಹುಡುಗಿ ನನಗೆ ಆರ್ಟಿಸ್ಟ್ ಆಗಬೇಕು ಎಂದಳು  

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ