ಬೆಂಬಲಿಗರು

ಮಂಗಳವಾರ, ಮಾರ್ಚ್ 25, 2025

                                     


 

 ಹಿಂದಿನ ಮದ್ರಾಸ್ ಅಥವಾ ಈಗಿನ ಚೆನ್ನೈ ಯನ್ನು ವೈದ್ಯ ಕೀಯ  ಕ್ಷೇತ್ರದ ಕಾಶಿ ಎನ್ನ ಬಹುದು.ದಕ್ಷಿಣ ಭಾರತದಲ್ಲಿ ಬ್ರಿಟಿಷರ ಆಢಳಿತಾತ್ಮಕ ಕೇಂದ್ರ ಆಗಿದ್ದ ಕಾರಣ ಅಲ್ಲಿ ವೈದ್ಯಕೀಯ ಕಾಲೇಜು ಇತ್ಯಾದಿ ಬಹಳ ಹಿಂದೆಯೇ ಸ್ಥಾಪನೆ ಆಗಿದ್ದವು   . ಟ್ರೋಪಿಕಲ್ ಸ್ಪ್ರೂ ,ಮದ್ರಾಸ್ ಮೋಟಾರ್ ನ್ಯೂರೋನ್ ಡಿಸೀಸ್ ,ಲೀಷ್ಮೆ ನಿಯಾ  ಮುಂತಾದ ಹಲವು ಕಾಯಿಲೆಗಳ ದಾರಿ ತೋರುವ ಅಧ್ಯಯನ ಇಲ್ಲಿಯೇ ಆಗಿತ್ತು . ದಂತ ಕತೆ ಗಳಾದ ವೈದ್ಯಕೀಯ ಶಿಕ್ಷಕ ರಾದ ಡಾ ತಿರುವೆಂಗಡಂ (ಫಿಸಿಷಿಯನ್ ).ಡಾ ಏನ್ ಮದನಗೋಪಾಲನ್ (ಗ್ಯಾಸ್ಟ್ರೋ ಎಂಟೆರೊಲೊಜಿ),ಡಾ ಸೇತುರಾಮನ್ (ಹೆಮಟೊಲೊಜಿ ),ಡಾ ಎ   ಎಸ ತಂಬೈಯ್ಯ (ಡರ್ಮಟಾಲಜಿ ),ಡಾ ರಾಮ ಮೂರ್ತಿ (ನೂರೋ ಸರ್ಜರಿ ),ಡಾ ರಂಗ ಭಾಷ್ಯಮ್ (ಗ್ಯಾಸ್ಟ್ರೋ ಎಂಟೆರೋ ಸರ್ಜರಿ ) ಕೆಲವು ಹೆಸರುಗಳು . 

ಇವರಲ್ಲಿ ತಿರುವೆಂಗಡಂ ಬಿಟ್ಟರೆ ಉಳಿದವರು  ಹೊಸ ವಿಭಾಗಗಳಿಗೆ ಅಡಿಪಾಯ ಹಾಕಿ ಕಟ್ಟಿ ಬೆಳೆಸಿದವರು . ನಮ್ಮ ದೇಶದಲ್ಲಿ ಸ್ನಾತಕೋತ್ತರ ಕಲಿಕೆಗೆ ಅವಕಾಶ ಇಲ್ಲದ ವಿಷಯಗಳ ಅಧ್ಯಯನ ವನ್ನು ವಿದೇಶ (ಮುಖ್ಯವಾಗಿ ಇಂಗ್ಲೆಂಡ್ )ಮಾಡಿ ಪುನಃ ತಾಯಿ ನಾಡಿಗೆ ಬಂದು ಇಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿದವರು . 

ಡಾ ಎ  ಎಸ ತಂಬಯ್ಯ  ಇಂಗ್ಲೆಂಡ್ ದೇಶದಲ್ಲಿ ಚರ್ಮ ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ  ವಿಶೇಷ ಅಧ್ಯಯನ ಮಾಡಿ ಮದ್ರಾಸ್ ಮೆಡಿಕಲ್ ಕಾಲೇಜು ವಿಭಾಗ ಆರಂಬಿಸಿದವರು . ಅವರ ಅಧ್ಯಾಪನ ರೀತಿ ಬಲು ಆಕರ್ಷಕ ವಾಗಿದ್ದು ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಗ ವಿದ್ಯಾರ್ಥಿಗಳಲ್ಲಿ ಅಷ್ಟು ಜನಪ್ರಿಯವಾಗಿ ಇಲ್ಲದಿದ್ದ ಡರ್ಮಟಾಲಜಿ ಅಧ್ಯಯನ ಕ್ಕೆ ಬರುವಂತೆ ಮಾಡಿತು .ಅವರು ಸೇವೆಯಿಂದ ನಿವೃತ್ತರಾದ ಮೇಲೂ ನಿರಂತರ ಕಲಿಕಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದು ಚೆನ್ನೈ ಯಲ್ಲಿ  ನನಗೂ ಅವರ  ಪಾಂಡಿತ್ಯ ಭರಿತ ಉಪನ್ಯಾಸ ಕೇಳುವ ಅವಕಾಶ ಸಿಕ್ಕಿತ್ತು . 

ಡಾ ತಂಬಯ್ಯ ಅವರ ದಾರಿಯಲ್ಲಿ ನಡೆದು ಬಂದ ಚರ್ಮ ರೋಗ ತಜ್ಞ ಪ್ರಾಧ್ಯಾಪಕ ಡಾ ಪ್ಯಾಟ್ರಿಕ್ ಯೇಸುದಿಯನ್ . ಮದ್ರಾಸ್ ಮೆಡಿಕಲ್ ಕಾಲೇಜು ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ  ಕಿಲ್ಪಾಕ್ ನಲ್ಲಿ  ಕ್ಲಿನಿಕ್ ನಡೆಸುತ್ತಿದ್ದು  ,ಚಿತ್ರ ನಟನಟಿಯರು ,ರಾಜಕಾರಿಣಿಗಳು ಸೇರಿ ದಂತೆ  ಬಹು ಬೇಡಿಕೆಯ ವೈದ್ಯರು. ಆರ್ ಕೆ ಲಕ್ಷ್ಮಣ್ ನ ಕಾಮನ್ ಮ್ಯಾನ್ ನ ವ್ಯಕ್ತಿತ್ವ . ವೈದ್ಯಕೀಯ ಅಲ್ಲದೆ ಇತರ ಸಾಹಿತ್ಯವನ್ನೂ ಚೆನ್ನಾಗಿ ಓದಿ ಕೊಂಡಿದ್ದ ಇವರ ಭಾಷಣಗಳಲ್ಲಿ  ಅವುಗಳಿಂದ ಆಯ್ದ ನುಡಿ ಮುತ್ತುಗಳು ಸಹಜವಾಗಿ ಪುಂಖಾನುಪುಂಖವಾಗಿ ಬಂದು ಕೇಳುಗರ ಕಿವಿ ಮತ್ತು ಮನಕ್ಕೆ ಹಿತವಾಗಿರುತ್ತಿತ್ತು . ಚರ್ಮ ರೋಗ ನಿಧಾನದಲ್ಲಿ ನೋಡುವಿಕೆಗೆ ಆದ್ಯತೆ .ಹಲವು  ಅಪರೂಪದ ಕಾಯಿಲೆಗಳೂ ಸೇರಿ ಚರ್ಮ ರೋಗಗಳ  ಛಾಯಾಚಿತ್ರ ಗಳ  ಸ್ಲೈಡ್ ಗಳ  ಅಮೂಲ್ಯ ಸಂಗ್ರಹ ಅವರ ಬಳಿ ಇತ್ತು .ಆಗಿನ್ನೂ ಪವರ್ ಪಾಯಿಂಟ್ ಬಂದಿರಲಿಲ್ಲ . ಚರ್ಮ ರೋಗ ತಜ್ಞ ಕ್ಕಿಂತ ಹೆಚ್ಚಾಗಿ ಅವರು ಒಬ್ಬ ಪರಿಣತ ಫಿಸಿಷಿಯನ್ ಆಗಿದ್ದರು . ಒಳ ರೋಗಗಳು  ಚರ್ಮದಲ್ಲಿ  ಹಲ ರೂಪದಲ್ಲಿ ಪ್ರಕಟವಾಗುವದು ಸಾಮಾನ್ಯ; ಡಾ ಪ್ಯಾಟ್ರಿಕ್ ಅವುಗಳ ಜಾಡು ಹಿಡಿಯುವುದರಲ್ಲಿ ನಿಸ್ಸೀಮರು . 

ನಾನು ಪೆರಂಬೂರು ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ ನಮ್ಮ ವಿಭಾಗ ಮುಖ್ಯಸ್ಥ ರಾಗಿದ್ದ  ಡಾ ಜಿ ಸಿ ರಾಜು ರವರು ನನ್ನ ಬಳಿ ಡಾ ಪ್ಯಾಟ್ರಿಕ್ ನಮ್ಮ ಆಸ್ಪತ್ರೆಗೆ ವಾರಕ್ಕೊಮ್ಮೆ ಕ್ಲಾಸ್ ತೆಗೆದು ಕೊಳ್ಳಲು ಬರಬಹುದೋ ಎಂದು ವಿಚಾರಿಸುವಂತೆ ಕೇಳಿದರು .ನಾನು ಅವರ ಕ್ಲಿನಿಕ್ ಗೆ ಹೋಗಿ ವಿನಂತಿಸಲು ತಮಗೆ ಪಾಠ ಮಾಡುವುದು ಇಷ್ಟ ವಾದರೂ ಸಮಯಾವಕಾಶ ಕಷ್ಟ ಎಂದು ಮೊದಲು ನಿರಾಕರಿಸಿದರೂ ನಾನು ಛಲ ಬಿಡದ ತ್ರಿವಿಕ್ರಮನಂತೆ  ಕ್ಲಿನಿಕ್ ಗೆ ಪುನಃ ಪುನಃ ಎಡತಾಕಿ ಅವರನ್ನು ಒಪ್ಪಿಸಿದೆ . ಸ್ಲೈಡ್ ಸಹಿತವಾದ ಅವರ ಕ್ಲಾಸ್ ವರ್ತ್  ಗೋಲ್ಡ್ ಅನ್ನುತ್ತಾರಲ್ಲ ಹಾಗೆ . ಪ್ಯಾಥಾಲಜಿ ,ಬಯೋ ಕೆಮಿಸ್ಟ್ರಿ ,ಮೆಡಿಸಿನ್  ಎಲ್ಲಾ ಕರತಾ ಮಲಕ  . 

ಮೊನ್ನೆ ಇಂಟರ್ನೆಟ್ ನಲ್ಲಿ ಜಾಲಾಡುವಾಗ ಅವರ ಭಾಷಣಗಳ ಸಂಗ್ರಹವೊಂದನ್ನು  "All I should say to my young friends"ಎಂಬ ಶೀರ್ಷಿಕೆಯಲ್ಲಿ ಅವರ ವಿದ್ಯಾರ್ಥಿ ಡಾ ಮುರುಗಸುಂದರಂ ಪ್ರಕಟಿಸಿದ್ದಾರೆ ಎಂದು ತಿಳಿದು ಅದನ್ನು ತರಿಸಿ ಓದುತ್ತಿದ್ದೇನೆ . ಹಿಂದೆ ಅವರ ಉಪನ್ಯಾಸಗಳನ್ನು ಕೇಳಿದ ನೆನಪು ಮತ್ತೆ ಆಯಿತು . ಅವರ ಗುರು ಪ್ರೊ ತಂಬಯ್ಯ  ಆಗಾಗ ಉದ್ಧರಿಸುತ್ತಿದ್ದ  ಫ್ರಾನ್ಸಿಸ್ ಬೇಕನ್ ನ 'Reading makes a full man,Writing an exact man ,Conversation a ready man "ಉಲ್ಲೇಖ ಮಾಡಿ ವೈದ್ಯರಿಗೆ  ಓದುಬರೆಯುವಿಕೆ ಮತ್ತು ಸಂವಹನ ದ  ಪ್ರಾಮುಖ್ಯತೆ ಒತ್ತಿ ಹೇಳಿದ್ದಾರೆ .                                ಇದರಲ್ಲಿ ನಾನು ಕಂಡಂತೆ ಇತ್ತೀಚಿನ ದಿನಗಳಲ್ಲಿ ವೈದ್ಯ ವೈದ್ಯ ರ ನಡುವೆ ನೇರ ಸಂವಹನ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ .ಒಬ್ಬ ರೋಗಿಯನ್ನು ಹಲವು ಸ್ಪೆಷಲಿಸ್ಟ್ ಗಳು ನೋಡುತ್ತಿದ್ದರೂ ಒಟ್ಟಾಗಿ ರೋಗಿಯ ಬಗ್ಗೆ ಕೂಡಿ ಚರ್ಚಿಸುವುದು ಕಡಿಮೆ ಆಗಿರುವುದು ದುರ್ದೈವ

ಸೋಮವಾರ, ಮಾರ್ಚ್ 24, 2025

ಅಗಲಿದ ಮಹಾ ಚೇತನ


 ಹಿರಿಯ ಚೇತನ ಬಲ್ನಾಡು ಸುಬ್ಬಣ್ಣ ಭಟ್ ಅವರು ನಿಧನರಾದ ವಾರ್ತೆ ಬಂದಿದೆ . ಸಾತ್ವಿಕ ಸಜ್ಜನ ಎಂಬ ಶಬ್ದಗಳಿಗೆ ಅನ್ವರ್ಥರಾಗಿ ಬಾಳಿ ಬದುಕಿದವರು . ಸರ್ವೇ ಜನಾ ಸುಖಿನೋಭವಂತು ಎಂದು ಸರ್ವರಿಗೂ ಉಳಿತನ್ನು ಬಯಸಿದವರು . 

ಒಳ್ಳೆಯ ಹಾಸ್ಯ ಪ್ರಜ್ಞೆ ಇವರ ವೈಶಿಷ್ಟ್ಯ . ಇಂದ್ರ ಧನುಷ್ ,ವಿನೋದ ಇತ್ಯಾದಿ ಪತ್ರಿಕೆಗಳಿಗೆ ಬರೆಯುತ್ತಿದ್ದ ಇವರ ಸುಬ್ಬಣ್ಣನ ತ್ರಿಪದಿಗಳು ಓದುಗರ ಮೆಚ್ಚುಗೆ ಪಡೆದಿದ್ದವು . ಬಹಳ ಮಂದಿಗೆ ತಿಳಿದಿರದ  ಇವರ ಇನ್ನೊಂದು ಆಸಕ್ತಿ ಸಂಖ್ಯಾ ವಿಜ್ಞಾನ .

ನನ್ನಂತಹ ಕಿರಿಯರನ್ನು ಕೂಡಾ ಗುರುತಿಸಿ ಹರಸಿದವರು . ಇವರ ನೆನಪಿಗೆ ನೂರು ನಮನ 

ಶುಕ್ರವಾರ, ಫೆಬ್ರವರಿ 28, 2025

 ಸುಧೀರ್ಘ  ಪ್ರಾಮಾಣಿಕ ಸೇವೆಯ ನಂತರ ಶ್ರೀಮತಿ ಲೀಲಾವತಿ (ಲೀಲಕ್ಕ ) ಇಂದು ಸ್ವಯಮ್ ನಿವೃತ್ತಿ ಪಡೆಯುತ್ತಿದ್ದಾರೆ . ಪುತ್ತೂರಿನ  ಮಾತೆ ಡಾ ಗೌರಿ ಪೈ ಅವರ ಗಿರಿಜಾ ಕ್ಲಿನಿಕ್ ನಲ್ಲಿ ನರ್ಸಿಂಗ್ ಸಹಾಯಕರಾಗಿ ತರಬೇತು ಗೊಂಡು ಆ ಆಸ್ಪತ್ರೆಯಲ್ಲಿ ದಶಕಗಳ ಸೇವೆ ಸಲ್ಲಿಸಿ  ನಂತರ ನಮ್ಮ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ  ನಿರ್ವಹಣೆಯಲ್ಲಿ ಸಹಾಯಕಿ ಯಾಗಿದ್ದ ಇವರು ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಅಚ್ಚು ಮೆಚ್ಚು . 

   ಸದಾ ನಗುಮುಖ ,ತಾಳ್ಮೆ ಮತ್ತು ಸಹಾನುಭೂತಿ ಇವರ ಜನಪ್ರಿಯತೆಯ ಗುಟ್ಟು . ತಮ್ಮಿಂದ ಅಥವಾ ತಮ್ಮ ಬಳಗದಿಂದ ಸಣ್ಣ ಲೋಪವಾದರೂ ಅದನ್ನು ಸಮರ್ಥಿಸ ಹೋಗದೆ  ಕ್ಷಮೆ ಕೇಳುವ ದೊಡ್ಡ ಮನಸು ಇವರದು . ರೋಗಿಗಳ ಸಂಬಂಧಿಕರು ಇವರನ್ನು ತಮ್ಮ ಆಪ್ತ ಬಳಗದವರು ಎಂದು ಪ್ರೀತಿಯಿಂದ ಗುರುತಿಸುವರು .ಗಿರಿಜಾ ಕ್ಲಿನಿಕ್ ನಲ್ಲಿ ಹುಟ್ಟಿ ಈಗ ನಮ್ಮಲ್ಲಿ ಹೆರಿಗೆಗೆ ಬರುವ ಮಹಿಳೆಯರ ಅಮ್ಮ ಅಜ್ಜಿ ಗೆ ಇವರು ಪರಿಚಿತರು . 

 ಆಸ್ಪತ್ರೆ ಸ್ವಾಗತ ಕಾರಿಣಿಯವರಲ್ಲಿ ಹಿರಿಯರಾದ ಇವರು ಮುಂಜಾನೆ ಬಂದೊಡನೆ ಕ್ರಿಕೆಟ್ ಕ್ಯಾಪ್ಟನ್ ನಂತೆ  ಓ ಪಿ ಡಿ  ಸುತ್ತ ಕಣ್ಣು ಹಾಯಿಸಿ  ಎಲ್ಲಿ ಎಲ್ಲಿ ಯಾವ ಫೀಲ್ಡರ್ ಆದೀತು ಎಂದು ಸಹೋದ್ಯೋಗಿಗಳ ಜೊತೆ ಚರ್ಚಿಸಿ ನಿರ್ಧರಿಸುವರು . ವೀಲ್ ಚೇರ್ ಇತ್ಯಾದಿ ಅವಶ್ಯ ವಿರುವವರಿಗೆ ಅದರ ವ್ಯವಸ್ಥೆ ಮಾಡುವರು . ತುರ್ತು ಇಸಿಜಿ ಇತ್ಯಾದಿ ಬೇಕಾದಲ್ಲಿ ತಾವೇ ಮಾಡಿ ತೋರಿಸುವರು . 

ಇಂತಹ ಮಾನವೀಯತೆ ಮೂರ್ತಿವೆತ್ತ ,ಪ್ರಾಮಾಣಿಕ ಲೀಲಕ್ಕ ಬಿಟ್ಟು ಹೋಗುವುದು ನಿಜಾರ್ಥದಲ್ಲಿ ತುಂಬಲಾರದ ನಷ್ಟ . ಅವರು ಮಾಡಿದ ಸೇವೆ ನಿಜಾರ್ಥದಲ್ಲಿ ದೇವರ ಸೇವೆ  ಮುಂದಿನ ದಿನಗಳು ಅರೋಗ್ಯ ಸುಖ ಶಾಂತಿಯಿಂದ ಇರಲಿ 



 








 

ಸೋಮವಾರ, ಡಿಸೆಂಬರ್ 16, 2024


ನಿನ್ನೆ ಮುಂಜಾನೆ ಪುತ್ತೂರಿನ ವಿವಿದೋದ್ಧೇಶ ತರಬೇತಿ ಸಂಸ್ಥೆ  ಐ ಅರ ಸಿ ಎಂ ಡಿ  ಯ ಆಶ್ರಯದಲ್ಲಿ ಅಬಾಕಸ್ ಸ್ಪರ್ಧೆಯಲ್ಲಿ ಬಾ ಜಯಶಾಲಿಯಾದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ . ಈ ಸಂಸ್ಥೆಯನ್ನು ನಡೆಸುವವರು ಉತ್ಸಾಹಿ ಯುವ ದಂಪತಿಗಳಾದ ಪ್ರಫುಲ್ಲ ಮತ್ತು ಗಣೇಶ್ . ಹೆಚ್ಚಾಗಿ ನನಗೆ ಸಂಬಂಧ ಪಡದ ಸಭೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತೇನೆ . ಆದರೆ ಈ ದಂಪತಿಗಳು ದಶಕದಿಂದ ನನ್ನ ಆತ್ಮೀಯ ವಲಯದಲ್ಲಿ ಇರುವ ಕಾರಣ ಕೇಳಿದ ಒಡನೇ ಒಪ್ಪಿಕೊಂಡೆ . 

ನಮಗೆ ಅಬಾಕಸ್ ನಂತಹ ಬೌದ್ಧಿಕ ಮೌಲ್ಯ ವರ್ಧನೋಪಾಯ ಶಿಕ್ಷಣ ಇರಲಿಲ್ಲ .ತಾಯಿ ಯವರ ಮಾರ್ಗದರ್ಶನ ದಲ್ಲಿ  ಇಪ್ಪತ್ತು ಇಪ್ಪಾತ್ಲಿ   (೨೦X ೨೦)ವರೆಗೆ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲಿನ ವರೆಗೆ ಬಾಯಿಪಾಠ ಆಗಿದ್ದು ,ಈಗ ಕೂಡಾ ಕ್ಯಾಲ್ಕುಲೇಟರ್ ಇಲ್ಲದೇ ಸಣ್ಣ ಪುಟ್ಟ ಕೂಡು ಕಳೆ ಗುಣಿಸು ಮಾಡಬಲ್ಲೆ . ಕ್ಯಾಲ್ಕುಲೇಟರ್ ಈಗ ಸುದ್ದಿ ಮಾಡುತ್ತಿರುವ ಕೃತಕ ಬುದ್ಧಿಮತ್ತೆಯ  ಪ್ರಾಚೀನ ರೂಪ . ಕೃತಕ ಬುದ್ದಿಮತ್ತೆ  ಯ  ಮೇಲೆ ಪೂರ್ಣ ಅವಲಂಬಿಸಿದರೆ ನೈಸರ್ಗಿಕ ಬುದ್ದಿ ಕುಂಠಿತ ವಾಗ ಬಹುದು . 

ನಿನ್ನೆಯ ಸಭೆಯಲ್ಲಿ ಮದ್ರಾಸ್ ಐ ಐ ಟಿ ಯ ಶ್ರೀ ಸಾಯಿ ಗಣೇಶ್ ಮತ್ತು ಬೆಂಗಳೂರು ಜಿ ಕೆ ವಿ ಕೆ ಯ ಡಾ ಅಶೋಕ್ ಕುಮಾರ್ ಅವರ ಪರಿಚಯ ಆಯಿತು . ಈ ಯುವ ಪ್ರತಿಭಾವಂತರು ಪುಟ್ಟ ಮಕ್ಕಳಿಗೆ ಸ್ವಯಂ ಆಸಕ್ತಿಯಿಂದ  ಗಣಿತ ದಂತಹ ವಿಷಯ ಹೇಳಿಕೊಡುತ್ತದ್ದರು ಎಂದು ತಿಳಿಯಿತು .ಸಣ್ಣ ಮಕ್ಕಳಿಗೆ ಕಳಿಸುವುದು ಕಷ್ಟ ಮತ್ತು ತಾಳ್ಮೆ ಬೇಕು . ತಮ್ಮ ಆತ್ಮ ತೃಪ್ತಿಗಾಗಿ  ವಿದ್ಯರ್ಥಿಗಳನ್ನು ಹುಡುಕಿ ಕಲಿಸುವುದು ಮೆಚ್ಚ ಬೇಕಾದದ್ದು . 

ಶನಿವಾರ, ಡಿಸೆಂಬರ್ 14, 2024

 Dr Dhal Singh Chandel on X ...


ನನ್ನ ತಂಗಿ ಪದ್ಮಾವತಿ ಪುತ್ತೂರು ಪಾಂಗಾಳಾಯಿ ಯಲ್ಲಿ  ಹೊಸ ಮನೆ ನಿರ್ಮಿಸಿದ್ದು ತಿಂಗಳ ಹಿಂದೆ ಸರಳವಾಗಿ ಗೃಹ ಪ್ರವೇಶ ಮಾಡಿದ್ದರು . ಅಣ್ಣನಾದ ನನಗೂ ಆಹ್ವಾನವಿರಲಿಲ್ಲ ;ಅಂತ ನನಗೇನೂ ಬೇಸರವಿಲ್ಲ . ಒಂದನೆಯದಾಗಿ ಇದು ಎರಡನೇ ಮನೆ ಒಕ್ಕಲು .ಎರಡನೆಯದು ಗೃಹ ಪ್ರವೇಶದ  ಪ್ರಯುಕ್ತ ಕುಶಲ ಸಂಘದ ವಿಶೇಷ ಅಧಿವೇಶನ ,ಉಪಹಾರ ಸಹಿತ . ಪುತ್ತೂರಿನಲ್ಲಿ ನಗೆ ಪ್ರಿಯರ ಕೂಟ ಇದ್ದು ಅದರ ಪ್ರಧಾನ ಕಚೇರಿ  ,ಸರ್ವ ಜನಹಿತ ಸಂಘಟನೆಗಳಿಗೂ ಆಶ್ರಯ ತಾಣ ವಾದ  ಅನುರಾಗ ವಠಾರ (ಪುರಂಧರ ಭಟ್ ಮಾಳಿಗೆ  ಮನೆ ).ರಾಜೇಶ್ ಪ್ರೆಸ್  ರಘುನಾಥ ರಾಯರು ,ಸುಧಾಮ ಕೆದಿಲಾಯ ,ತುಳಸೀದಾಸ್ ,ಸುಬ್ರಹ್ಮಣ್ಯ ಶರ್ಮ ,ಶಂಕರಿ ಶರ್ಮ,ದತ್ತಾತ್ರೇಯ ರಾವ್  .ಅರ್ತಿಕಜೆ ದಂಪತಿಗಳು ,ರಮೇಶ ಬಾಬು ಇತ್ಯಾದಿ ಹಿರಿಯರು ಇದರಲ್ಲಿ ಇದ್ದಾರೆ . ನಕ್ಕು ಹಗುರಾಗುವ ವೇದಿಕೆ

ಈ ತಂಗಿ ಸಣ್ಣವಳಿರುವಾಗ ಜಡೆಗೆ ಸಿಕ್ಕಿಸುವ ಒಂದು ಐಟಂ ಬಂತು . ಎರಡು ಗೋಲಿಗಳನ್ನು ಒಂದು ಬ್ಯಾಂಡಿನಲ್ಲಿ ಕಟ್ಟಿ ಅದರ ನಡುವೆ ಜಡೆ . ಆಗೆಲ್ಲಾ ಶಾಲೆಗೆ ಹುಡುಗಿಯರು ಎರಡು ಜಡೆ ಹಾಕಿಕೊಂಡು ಹೋಗುವುದು . ಈ ವಸ್ತುವಿಗೆ ಲವ್ ಇನ್ ಟೋಕಿಯೋ ಎಂದು ಕರೆಯುತ್ತಿದ್ದರು . ಆ ಹೆಸರಿನ  ಸಿನಿಮಾ ನಾಯಕಿ ಅದನ್ನು ಹಾಕಿಕೊಂಡಿದ್ದ ಕಾರಣ ಇರಬೇಕು .ನನ್ನ ಅಕ್ಕ ತಂಗಿಯರ ಬಾಯಲ್ಲಿ ಅದು ಲವಿನ್ ಟಕಿ ಅದು ಹೃಸ್ವ ವಾಯಿತು . ಒಮ್ಮೆ ತಂದೆಯವರು ವಿಟ್ಲ ಪೇಟೆಗೆ ಹೋಗುವಾಗ ತಮಗೂ ಅದನ್ನು ತಂದು ಕೊಡುವಂತೆ ದುಂಬಾಲು ಬಿದ್ದರು . ತಂದೆಯವರು  ವಿಟ್ಲ ಪುತ್ತು  ಆಚಾರ್ರ ಫ್ಯಾನ್ಸಿ ಸ್ಟೋರಿಗೆ ತಲುಪುವಾಗ ಅದರ ಹೆಸರು ಟಂಗ್  ಟಕಿ ಎಂದು ಆಯಿತು .ಆದರೂ ಬೇಕಾದ ವಸ್ತು ತೊಂದರೆಯಿಲ್ಲದೇ ಬಂತು . 

ನಮ್ಮ ತಾಯಿ ತುಂಬಾ ಕಟ್ಟು ನಿಟ್ಟು . ಜೋಕ್ ಮಾಡಿಕೊಂಡು ಜೋರಾಗಿ ನಗುತ್ತಿದ್ದರೆ ,ಕಣ್ಣು ಅರಳಿಸಿ "ಎಂತ ಹೆದರಿಕೆ ಇಲ್ಲದ ನಗೆ "ಎಂದು ಗದರಿಸುವರು .ನನ್ನ ಮೇಲಂತೂ ಅವರಿಗೆ ಯಾವಾಗಲೂ ಅಪ ಧೈರ್ಯ .ಎಲ್ಲಿಗೆ ಹೋಗುವಾಗಲೂ ಬೆಗುಡು ಬೆಗುಡು ಮಾತನಾಡ (ಅಂದರೆ ಅತಿ ಹಾಸ್ಯ ಬೇಡ )..ಅವರು ಮನಸು ತೆರೆದು ನಕ್ಕದ್ದು ನಾನು ಕಂಡಂತೆ  ಬೆಂಗಳೂರಿಗೆ ವಾಲ್ವೊ ಬಸ್ ನ  ವಿಡಿಯೋ ದಲ್ಲಿ ಕಾಮನ ಬಿಲ್ಲು ಸಿನಿಮಾ ದಲ್ಲಿ ರಾಜಕುಮಾರ್ ಅಳುತ್ತಿರುವ ಮಗುವಿಗೆ ಸೀರೆ ಉಟ್ಟು ಬಾಟ್ಲಿ ಹಾಲು ಕುಡಿಸುವ ದೃಶ್ಯ ನೋಡಿ . ಹಾಗೆ ನಮ್ಮ ಹಾಸ್ಯ ಪ್ರಜ್ಞೆ ಸುಪ್ತಾವಸ್ಥೆ ಯಲ್ಲಿ ಇದ್ದು ಈಗ ಪ್ರದರ್ಶನ ಗೊಳ್ಳುತ್ತಿವೆ . ತಾಯಿಗೆ ನಾವು ಹತ್ತು ಮಕ್ಕಳು ,ನಮ್ಮನ್ನೆಲ್ಲಾ  ಒಂದು ದಾರಿಗೆ ತರಬೇಕಾದರೆ ಅವರು ಪಟ್ಟ ಪಾಡು ಊಹಿಸಿ ಕೊಳ್ಳಿ ..ಗಂಡು ಹುಡುಗರಿಗೆ ಬೆತ್ತದ ರುಚಿ ತೋರಿಸುತ್ತಿದ್ದರೂ ಹುಡುಗಿಯರು ಮದುವೆಯಾಗಿ ಹೋಗುವವವರು ಎಂದು ವಿನಾಯತಿ ಇತ್ತು

ಭಾನುವಾರ, ಡಿಸೆಂಬರ್ 8, 2024

  ಪಾಸ್ ಫೈಲ್ 

ನಾವು ಪ್ರಾಥಮಿಕ ವಿದ್ಯಾಭ್ಯಾಸ ಮಾಡುವ ಸಮಯ; ದೊಡ್ಡ ರಜೆ ಕಳೆದು ತರಗತಿ ಆರಂಭವಾಗುವ ದಿನ ಈಗಿನಂತೆ ವಿದ್ಯಾರ್ಥಿಗಳನ್ನು  ಸ್ವಾಗತಿಸುವ ಪರಿಪಾಡಿ ಇರಲಿಲ್ಲ . ಕ್ಲಾಸ್ ಅಧ್ಯಾಪಕರು ಹಾಜರಿ ಪಟ್ಟಿಯಿಂದ ಹೆಸರು ಕೂಗಿ ಕರೆಯುವರು .ಅವರೆಲ್ಲಾ ಪಾಸ್ .ತಮ್ಮ ಸ್ಲೇಟು ಕಡ್ಡಿ ಸರಂಜಾಮು ಹೊತ್ತುಕೊಂಡು ಮೇಲಿನ ಕ್ಲಾಸ್ ಇರುವ ಕೊಠಡಿಗೆ ಹೋಗಬೇಕು . ಹೆಸರು ಕರೆಯದೇ ಇದ್ದವರು  ಫೈಲು . ಯಾರೆಲ್ಲ ಫೈಲು ಕೊನೆಗೇ ತಿಳಿಯುವುದು .ನಮ್ಮ ಮಿತ್ರರು ಪಾಸ್ ಆಗದಿದ್ದರೆ ಅವರ ಜತೆ ತಪ್ಪುವುದು ಎಂಬ ಬೇಸರ . ಆ ದಿನ ಕ್ಲಾಸ್ ಇಲ್ಲ . ಮರಳುವ ದಾರಿಯಲ್ಲಿ ಹೊಲಗದ್ದೆಯಲ್ಲಿ ಕೆಲಸ ಮಾಡುವವರು ಎಲ್ಯಣ್ಣೇರ್ ಪಾಸಾ ಎಂದು ಕೇಳುವರು . ಪಾಸಾಗಲಿ ಫೈಲು ಅಗಲೀ ಈಗಿನ ಹಾಗೆ ಹೊಗಳಿ ಏರಿಸುವ ಅಥವಾ ಹೀಗೆಳೆಯುವ ಪದ್ಧತಿ ಇರಲಿಲ್ಲ . ಫಲಿತಾಂಶ ದಿಂದ ಹತಾಶೆ ಗೊಂಡು ಆತ್ಮ ಹತ್ಯೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇತ್ತು .ಈಗಿನ ಸರಕಾರಿ ಶಾಲೆಗಳಂತೆ ಕಡ್ಡಾಯ  ಹೋಲ್ ಸೇಲ್ ಪಾಸ್ ಮಾಡುವ ಪದ್ಧತಿ ಇರಲಿಲ್ಲ . 

ಪಾಸ್ ಆದರೆ ಮೇಲ್ತರಗತಿಯಲ್ಲಿ ಇರುವ ನಮ್ಮ ಮಿತ್ರರ ಬಳಿ ಅವರ ಉಪಯೋಗಿಸಿದ ಟೆಕ್ಸ್ಟ್ ಬುಕ್ ಅರ್ಧ ಬೆಲೆಗೆ ಖರೀದಿಸುತ್ತಿದ್ದೆವು . ನಮ್ಮ ದುರಾದೃಷ್ಟಕ್ಕೆ ಕೆಲವೊಮ್ಮೆ ಪಠ್ಯ ಪುಸ್ತಕ ಬದಲಾಗುತ್ತಿದ್ದವು . ನಾನು ನನ್ನ ಸೀನಿಯರ್  ಮುದ್ಕುಂಜ ದಿವಾಕರ ಪ್ರಭುಗಳ ಬಳಿ  ಪುಸ್ತಕ ಕೊಳ್ಳುತ್ತಿದ್ದೆ .ಅವರು ಪಠ್ಯ ಪುಸ್ತಕಗಳನ್ನು ಚೆನ್ನಾಗಿ ಇಟ್ಟು ಕೊಳ್ಳುತ್ತಿದ್ದರು

ಹೈ ಸ್ಕೂಲ್ ನಲ್ಲಿ ಕೂಡಾ ಇದೇ ರೀತಿ ಇತ್ತು . ಎಸ ಎಸ ಎಲ್ ಸಿ ಪರೀಕ್ಷೆ ಫಲಿತಾಂಶ ನವಭಾರತ ದಿನ ಪತ್ರಿಕೆಯಲ್ಲಿ ಮೊದಲು ಪ್ರಕಟವಾಗುತ್ತಿತ್ತು .ಶಾಲೆಗೆ ಆಮೇಲೆ ಬರುತ್ತಿತ್ತು ಎಂದು ನೆನಪು . ಪೇಪರ್ ನಲ್ಲಿ ಮೊದಲು ಫಸ್ಟ್ ಕ್ಲಾಸ್ ನ ಅಡಿಯಲ್ಲಿ ,ಆಮೇಲೆ ಸೆಕೆಂಡ್ ಮತ್ತು ಥರ್ಡ್ ಕ್ಲಾಸ್ ಕೆಳಗೆ ನಮ್ಮ ನಂಬರ್ ಇದೆಯೇ ಎಂದು ಹುಡುಕುತ್ತಿದ್ದೆವು .

ಶನಿವಾರ, ಡಿಸೆಂಬರ್ 7, 2024

ಯಾನ್ಲಾ ಈರ್ಲಾ ಸುಬ್ರಹ್ಮಣ್ಯದಾ ಜೋಡಿ 

ಇಂದು ಕುಕ್ಕೆ ಷಷ್ಟಿ . ಷಷ್ಟಿ ಸಮಯ ಸುಬ್ರಹ್ಮಣ್ಯದ ಬಳಿ ಕುಳ್ಕುಂದ ದಲ್ಲಿ ಜಾನುವಾರು ಸಂತೆ ನಡೆಯುತ್ತಿತ್ತು . ಘಟ್ಟದ ಮೇಲಿನಿಂದ ದನ ,ಎತ್ತು ,ಎಮ್ಮೆ ಮತ್ತು ಕೋಣಗಳನ್ನು ತಂದು ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿದ್ದು ನಮ್ಮ ಜಿಲ್ಲೆಯ ರೈತರು ತಮಗೆ ಬೇಕಾದ ರಾಸುಗಳನ್ನು ಖರೀದಿಸಿ ಒಯ್ಯುತ್ತಿದ್ದರು . ಜಾತ್ರೆಗಾಗಿ ಪಶುಗಳನ್ನು ಪೋಷಿಸಿ ದಷ್ಟ ಪುಷ್ಟ ರನ್ನಾಗಿಸುತ್ತಿದ್ದಲ್ಲದೆ , ಕೊಂಬು ಕಿವಿ,ಮೂಗಿಗೆ ಅಲಂಕಾರ ಮಾಡಿರುತ್ತಿದ್ದರು. ಕೋಣಗಳ ಮೈಯ್ಯಿಂದ ಕೂದಲು ತೆಗೆದು ಎಣ್ಣೆ ಹಚ್ಚಿ ಫಳ ಫಳ ಹೊಳೆಯುವಂತೆ ಮಾಡುತ್ತಿದ್ದರು.  ಬ್ಯೂಟಿ ಪಾರ್ಲರ್ ನಿಂದ ಹೊರ ಬಂದ ಪಶುಯಗಳಂತೆ .ಉಳುಮೆಗಾಗಿ ಎತ್ತು ಮತ್ತು ಕೋಣಗಳ ಜೋಡಿಯನ್ನು ಅವರೇ ಮಾಡಿ ತರುತ್ತಿದ್ದು ಆಯ್ಕೆ ಸುಲಭ . ಸುಬ್ರಹ್ಮಣ್ಯದ ಜೋಡಿ ಬಹಳ ಪ್ರಸಿದ್ದ .ಅದಕ್ಕೇ ಒಂದು ತುಳು ಚಲ ಚಿತ್ರದಲ್ಲಿ ಯಾನುಲಾ ಈರ್ಲಾ ಸುಬ್ರಹ್ಮಣ್ಯದಾ ಜೋಡಿ ಎಂಬ ಪ್ರೇಮ ಗೀತೆ ಇದೆ . 

         ಕುಳ್ಕುಂದ ಜಾತ್ರೆಗೆ ನಾನು ಬಾಲ್ಯದಲ್ಲಿ ತಂದೆಯವರ ಜೊತೆಗೆ ಹೋದ ನೆನಪು ಇದೆ . ಅಲ್ಲಿ ಗೋಣಿ ಚೀಲ ಹಾಸಿ ಕೊಂಡು , ಚಳಿಗೆ (ಷಷ್ಟಿ ಸಮಯ ಭಾರೀ ಚಳಿ ಇರುತ್ತಿತ್ತು )ಕಂಬಳಿ ಹೊದ್ದು ಚಹಾ ಹೀರುತ್ತಿರುವ ಘಟ್ಟದ ಮೇಲಿನ ಕನ್ನಡ ಮಾತನಾಡುವ ವ್ಯಾಪಾರಿಗಳು .ಅವರೊಡನೆ  ಚೌಕಾಸಿ ಮಾಡುತ್ತಿರುವ ಗಿರಾಕಿಗಳು .ಹಿಂದೆ ಖರೀದಿಸಿದ ಜಾನುವಾರುಗಳನ್ನು ರಸ್ತೆ ಗುಂಟ ನಡೆಸಿ ಕೊಂಡೇ ಮನೆಗೆ ಬರುತ್ತಿದ್ದು ,ಕಾಲಾಂತರ ದಲ್ಲಿ ಟೆಂಪೋ ಗಳು ಬಳಕೆಗೆ ಬಂದವು

ಜಾನುವಾರು ಗಳಲ್ಲದೆ , ವಿವಿಧ ವಿನ್ಯಾಸದ ಕಂಬಳಿಗಳು , ಪಶು ಅಲಂಕಾರ ಸಾಧನಗಳು ಕೂಡಾ ಜಾತ್ರೆಯಲ್ಲಿ ಸಿಗುತ್ತಿದ್ದವು .

ನಿನ್ನೆ ಫೇಸ್ ಬುಕ್ ನಲ್ಲಿ ಸಹೋದರಿ ಒಬ್ಬರು ಜಯಂತ ಕಾಯ್ಕಿಣಿ ಯವರನ್ನು ಉಲ್ಲೇಖಿಸಿ ,"ಹೇಳಿ ಮಾಡಿಸಿದ ಜೋಡಿ ಎಂದರೆ ಚಪ್ಪಲಿ ಮಾತ್ರ ,ಬೇರೆಲ್ಲಾ ಹೋದಣಿಕೆ ಮಾತ್ರ " ಎಂಬ ಮಾತನ್ನು ಷೇರ್ ಮಾಡಿದ್ದು  ಸತ್ಯ ಎನಿಸಿತು .