ಬೆಂಬಲಿಗರು

ಸೋಮವಾರ, ಜುಲೈ 29, 2013

ಕಾರ್ಡಿಯೋ ಮಯೋಪತಿ

ಕಾರ್ಡಿಯೋ ಎಂದರೆ ಹೃದಯ ,ಮಯೋಪತಿ ಎಂದರೆ ಮಾಂಸ ಖಂಡಗಳ ಕಾಯಿಲೆ.


ಕೆಲವೊಮ್ಮೆ ಆರೋಗ್ಯವಂತ ಕ್ರೀಡಾಳುಗಳು ಮೈದಾನದಲ್ಲಿ  ಹಟಾತ್ ಹೃದಯ ಸ್ತಂಭನ ಆಗಿ ಸಾಯುವುದನ್ನ್ನು ಕೇಳಿದ್ದೇವೆ.


ಇದಕ್ಕೆ ಒಂದು ಪ್ರಮುಖ ಕಾರಣ ಈ ಕಾಯಿಲೆ.ಕೆಲವರಿಗೆ  ಹುಟ್ಟಿದಾರಭ್ಯ  ಹೃದಯದ ಮಾಂಸ ಖಂಡ ಗಳು  ವಾಡಿಕೆಗಿಂತ


ಹೆಚ್ಚು ದಪ್ಪವಾಗಿರುತ್ತವೆ .ಇದನ್ನು  ಹೈಪರ್ ಟ್ರೋಪಿಕ್   ಕಾರ್ಡಿಯೋ ಮಯೋಪಥಿ ಎಂದು ಕರೆಯುತ್ತಾರೆ.ಇಂಥವರಲ್ಲಿ


ಕೆಲವೊಮ್ಮ್ಮೆ ಹೃದಯ ಸಾಮಾನ್ಯವಾದ ಸಂಕುಚನ ವಿಕಸನಕ್ಕೆ ಬದಲಾಗಿ ಯದ್ವಾ ತದ್ವಾ ಕಂಪಿಸುತ್ತದೆ .(ventricular


fibrillation)ಇದರಿಂದ   ರಕ್ತದ ಒತ್ತಡ ಕುಸಿದು ಮೆದುಳಿಗೆ ರಕ್ತ ಸರಬರಾಜು ನಿಂತು ವ್ಯಕ್ತಿ ಸಾವನಪ್ಪುತ್ತಾನೆ.


              ಇದು  ಹೃದಯದ ರಕ್ತನಾಳಗಳು ಬ್ಲಾಕ್ ಆಗಿ ಸಂಭವಿಸುವ  ಸಾಮಾನ್ಯ ಹೃದಯಾಘಾತ ವಲ್ಲ.ಇಲ್ಲಿ ಮಾಂಸ


ಖಂಡಗಳ  ಹುಟ್ಟು ವೈಕಲ್ಯದಿಂದಾಗಿ  ಹೃದಯದ  ಎಲೆಕ್ಟ್ರಿಕ್ ವ್ಯವಸ್ತೆ  ಏರುಪೇರಾಗಿ ಸಂಭವಿಸುವ೦ತಹುದು.


ಇಂತಹ ರೋಗವನ್ನು ಆರಂಭದಲ್ಲಿ  ಕಂಡು ಹಿಡಿದರೆ  ಈ ತರಹದ  ತೊಂದರೆ (ventricular fibrillation) ಬರದಂತೆ

ತಡೆಗಟ್ಟುವ  ಮಾತ್ರೆಗಳನ್ನು ವೈದ್ಯರು ಕೊಡುತ್ತಾರೆ

ಹೃದಯದ ಸ್ಕ್ಯಾನ್  ಎಕೋ ಕಾರ್ಡಿಯೋ ಗ್ರಫಿ  ಮೂಲಕ ಈ ರೋಗವನ್ನು ಪತ್ತೆ ಹಚ್ಚ ಬಹುದು.




                                                        ನಾರ್ಮಲ್ ಹೃದಯ          ಮಾಂಸ ಖಂಡಗಳು ದಪ್ಪನೆ ಇರುವ ಹೃದಯ
.



                   

                                                

ಶನಿವಾರ, ಜುಲೈ 27, 2013

ಬಳಪ ಒರೆಸುವ ಬಟ್ಟೆ


            slate

ಹಲಗೆಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ

ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ|
ಬಳಸಿಬರೆಯಲು ಕಂಠಪತ್ರದ

ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ||

ಮುಂಜಾನೆ ವಾಕಿಂಗ್ ಹೋಗುವಾಗ ಸ್ಲೇಟು ನ ಒಂದು ತುಂಡು ಸಿಕ್ಕಿತು.ಒಡನೆ ನೆನಪಿಗೆ ಬಂದುದು ಕುಮಾರ ವ್ಯಾಸನ ಪದ್ಯ .ಹಲಗೆ

ಬಳಪವ ಹಿಡಿಯದೊಂದಗ್ಗಳಿಕೆ .ಸ್ಲೇಟು ಕಡ್ಡಿ ,ಪುಸ್ತಕ ಇಲ್ಲದೆ  ಮಹಾ ಕಾವ್ಯ ರಚಿಸಿದ  ಆತನನ್ನು ಮೆಚ್ಚಿದೆ.ಅವನ ಹೆಮ್ಮೆ  ಸಕಾರಣ

ವಾದುದು. ನಾವು ಚಿಕ್ಕಂದಿನಲ್ಲಿ ಒಯ್ಯುತ್ತಿದ್ದ ಸ್ಲೇಟು ನೆನಪಿಗೆ ಬಂತು. ಮೊದಲ ಎರಡು ತರಗತಿಗಳಲ್ಲಿ ಅದುವೇ ನಮ್ಮ ಬರಹದ

ಅಂಗಣ.ವರ್ಷದ ಕೊನೆಯಲ್ಲಿ ಬಳಪದ ಚೌಕಟ್ಟು ಹೋಗಿ ರೊಟ್ಟಿಯಾಕಾರ ತಳೆಯುತ್ತಿತ್ತು.

ಸ್ಲೇಟು ಇದ್ದಾರೆ ಆಯಿತೆ? ಅದನ್ನು ಒರಸಲು ಬಟ್ಟೆ ನೀರು ಬೇಕು. ಶ್ರೀನಿವಾಸ ಮೂರ್ತಿಯವರ ರಂಗಣ್ಣನ ಕನಸಿನ ದಿನಗಳ ಬೋರ್ಡ್

ಒರಸುವ ಬಟ್ಟೆ ನೆನಪಿಗೆ ಬಂತು. ನಾವು ಹಳೆ ಬಟ್ಟೆಯ ತುಂಡನ್ನು ಬಳಪ ಒರಸಲು ಒಯ್ಯುತ್ತಿದ್ದೆವು.ಹಲವೊಮ್ಮೆ ಅಂಗಿ ಚಡ್ಡಿಗೆ

ಒರಸುತ್ತಿದ್ದೆವು .ಹುಡುಗಿಯರು ಲಂಗದ ಬಟ್ಟೆಗೆ .

                                           child slate

ಬಟ್ಟೆ ಒದ್ದೆ ಮಾಡಲು ನೀರು ಬೇಕಲ್ಲ. ತಮ್ಮ ತಮ್ಮ ಲಾಲಾರಸವೆ ದ್ರವ.ಮಳೆಗಾಲದಲ್ಲಿ ಚಾವಣಿಯಿಂದ ಬೀಳುತ್ತಿದ್ದ ನೀರು.ಶಾಲೆಗೆ

ಹೋಗುವ ದಾರಿಯಲ್ಲಿ ನೀರು ಕಡ್ಡಿ ಎಂಬ ಸಣ್ಣ ಸಣ್ಣ ಸಸಿಗಳು ಸಿಗುತ್ತಿದ್ದವು. ಇವುಗಳ ಕಾಂಡದಿಂದ ಶುಧ್ಧವಾದ ನೀರು ಒಸರುತ್ತಿತ್ತು.

ಇವುಗಳನ್ನು ಕಟ್ಟು ಮಾಡಿ  ಒಯ್ಯುತ್ತಿದ್ದೆವು. ಉಕ್ತ ಲೇಖನ ,ಕಾಪಿ   ತಪ್ಪು ಬರೆದಾಗ ಅಧ್ಯಾಪಕರ  ಬೆತ್ತದಿಂದ  ಎರಡು ಬಿದ್ದಾಗ

ಬಂದ   ಕಣ್ಣೀರೇ   ಬಳಪವನ್ನು ಒದ್ದೆ ಮಾಡಿ ಕೊಡುತ್ತಿತ್ತು.

ಬಳಪ ದ ಕಡ್ಡಿ  ,ಅಂದರ ತುಂಡುಗಳು ,ಕೆಲವೊಮ್ಮೆ ಕೊಳ್ಳುತ್ತಿದ್ದ ಬಣ್ಣದ ಕಡ್ಡಿಗಳೂ ನೆನಪಾದವು .ಬಳಪ ಚೀಲ ಗಳನ್ನ ಹೆಗಲಿಗೆ

ಹಾಕಿ  ಅಕ್ಕನ ಕೈ ಹಿಡಿದು ನಡೆಯುತ್ತಿದ್ದ  ದಿನಗಳು.

ಈಗ  ಕಾಲ  ಒಂದು  ಪೂರ್ಣ ಸುತ್ತು ಹಾಕಿದೆ.ಈಗಿನ ಮಕ್ಕಳಿಗೂ ಹಲಗೆ ಬಳಪವ ಹಿಡಿಯದೆ ಕಲಿಯುವ ಅಗ್ಗಳಿಕೆ.ಕಂಪ್ಯೂಟರ್

ಟಚ್ ಸ್ಕ್ರೀನ್ ನಲ್ಲಿಯೇ  ಬರೆಯುವ ದಿನಗಳಲ್ಲವೇ ?
                            child compuert
ಮೇಲಿನ ಚಿತ್ರಗಳ  ಮೂಲಗಳಿಗೆ ಆಭಾರಿ

ಗುರುವಾರ, ಜುಲೈ 25, 2013

ಎರಡು ಒಳ್ಳೆಯ ಕಾದಂಬರಿಗಳು


ಹಿಂದೆ ಓದಿದ ಎರಡು ಕಾದಂಬರಿಗಳು
              
            
.                                                                                   ಮೊದಲನೆಯದು  ಖ್ಯಾತ ಮಲಯಾಳಿ ಬರಹಗಾರ ಡಾ

ಪುನಥಿಲ್ ಕುಂಞಬ್ದುಲ್ಲಾ ಅವರ ಕಾದಂಬರಿ ಸ್ಮಾರಕ ಶಿಲೈ ಗಳ್ ಯಇಂಗ್ಲಿಷ್ ಅನುವಾದ ಮೆಮೋರಿಯಲ್ ಸ್ಟೋನ್ ಸ್

.ಮಲಬಾರಿನ

ದೊಡ್ಡ ಮುಸ್ಲಿಂ ಮತೆತನದ ಕತೆ.ಅರಕ್ಕಲ್ ತರವಾಡಿನ ಪುಕ್ಕೊಯ ತಂಗಳ್.ಇದರ ಕಥಾನಾಯಕ.ಘನತೆ ,ಪುರೋಗಾಮಿ

ನಡೆ ,ತ್ಯಾಗಶೀಲತೆ ,ವಿದ್ಯಾ ಪಕ್ಷಪಾತ ಮತ್ತು ದಾನ ಶೀಲತೆ ಒಂದು ಕಡೆಯಾದರೆ ತೀರದ ಲೈಂಗಿಕತೆ ಇನ್ನೊಂದು

ಕಡೆ.ಕೊನೆಗೆ

ಈ ದೌರ್ಬಲ್ಯವೇ ಮನೆತನದ ಅವನತಿಗೆ ಕಾರಣವಾಗುವ ದುರಂತ.ಇವುಗಳ ನಡುವೆ ಆ ಊರಿನ ಅನೇಕ ವಿದ್ಯಮಾನಗಳು

ವರ್ಣಮಯವಾಗಿ  ಮೂಡಿ ಬಂದಿವೆ.ಅನಾಥ ಮಗು ಕು೦ಞಾಲಿ ,ಮಗಳು ಪೂಕು೦ಞಿ,ಪತ್ನಿ ಅತ್ತಾಬಿ ಇತ್ಯಾದಿ ಮುಖ್ಯ

ಪಾತ್ರಗಳೊಡನೆ

ಶಾಲೆ ಅಧ್ಯಾಪಕರು ,ಮುಸ್ಲಿಯಾರ್ ಇತ್ಯಾದಿ ಗಳು ಲವಲವಿಕೆಯಿಂದ ಕೂಡಿದ್ದರೂ ಬರಹಗಾರ ಯಾವುದೇ

ಭಾವನಾತ್ಮಕತೆಯಿಂದ


ತನ್ನನ್ನು ದೂರ ಇಟ್ಟಿದ್ದಾನೆ.ಪುಸ್ತಕ ಕೆಳಗಿಟ್ಟಾಗ ಮುಗಿಯಿತೇ ಎಂದನಿಸುತ್ತದೆ.ಇವರ ಇನ್ನೊಂದು ಪ್ರಸಿದ್ಧ ಕೃತಿ ಮರುನ್ನು


ಕನ್ನಡದಲ್ಲಿ ಔಷಧಿ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.


                                   
                                   

                                                       
ಇನ್ನೊಂದು  ತಮಿಳು ಬರಹಾಗಾರ ತ್ಹೊಪ್ಪಿಲ್ ಮೊಹಮ್ಮದ್ ಮೀರಾನ್ ಅವರ ಕಾದಂಬರಿ   ಚೈವು ನಾರ್ಕಾಲಿ ಯ ಇಂಗ್ಲಿಷ್


ಅನುವಾದ

ದಿ ರೆಕ್ಲೈನಿಂಗ್ ಚೇರ್.ಕಾದಂಬರಿ ಮಳೆಯ ವರ್ಣನೆಯೊಂದಿಗೆ ಆರಂಭವಾಗುತ್ತದೆ.ಇಡೀ ಕಾದಂಬರಿ ಮತ್ತು  ಅದರ ಅನುವಾದ

ಹಿತವಾದ


ತಂಗಾಳಿಯಂತೆ ಇದೆ.ಕತೆ ಕನ್ಯಾಕುಮಾರಿ ನಾಗರಕೊಯಿಲ್ ಸರಹದ್ದಿನ ತಿರುವಾ೦ಕೂರ ಗೆ ಸೇರಿದ ಪ್ರದೇಶ.ಮಲಯಾಳ

,ತಮಿಳು


ಗಳ ಮಿಶ್ರಣ.ಕಥಾನಾಯಕ ಮುಸ್ತಾಫಾ ಕಣ್ಣು ದೊಡ್ಡ ತರವಾಡಿನ ಕೊನೆಯ ದುರಂತ ನಾಯಕ.ಆಲಸಿ,ಕಾಮುಕ.ಅವನ ಪತ್ನಿ



ಮರಿಯಂ ಅವನ ಹಿಂಸೆ ಮತ್ತು  ಅವಗಣನೆಗೆ ಗುರಿಯಾಗ್ತ್ತಾಳೆ.ಅವಳ ಒಂದು ಮಾತು ಹೀಗಿದೆ ‘ನಾವು ಹೆಂಗಸರು


ಎಂದಾದರೂ


ಬದುಕಿದ್ದೆವೆಯೇ ?ನಾವು ಇಂಚು ಇಂಚಾಗಿ ಸಾಯುವುದು ಮಾತ್ರ.ದೇವರು ನಮ್ಮನ್ನು ಗಂಡಸರ ಕೈಯ್ಯಲ್ಲಿ ಸಾಯಲೆಂದೇ


ಹುಟ್ಟಿಸಿದ್ದಾನೆ.':


ಈ ಕಾದಂಬರಿಯಲ್ಲಿ ಮುಸ್ತಫಾನ ಭವ್ಯ ಮನೆ ಸೌದಾ ಮಂಜಿಲ್ ನ ಒಂದೊಂದು ವಸ್ತುವೂ ಒಂದು ರೋಚಕ ಕತೆ ಹೇಳುತ್ತದೆ.


ಬೆಳ್ಳಿಯ ಖಡ್ಗ ,ಶ್ರೀಗಂಧದ ಕಪಾಟು, ಕುಳಿತುಕೊಳ್ಳುವ ಕುರ್ಚಿ ಮತ್ತು ಸೌದಾ ಮಂಜಿಲ್ ,ಅದರ  ಕೊಳ ಎಲ್ಲವಕ್ಕೂ


ಇತಹಾಸ ರೂಪದಲ್ಲಿ ಕತೆ ಹಣೆದಿದ್ದಾರೆ ಮೀರಾನ್.


                                           

ಎರಡು ಕಾದಂಬರಿಗಳ  ಕತೆ ನಡೆದ  ಊರು ಬೇರೆ ಬೇರೆಯಾದರೂ ಎರಡರಲ್ಲೂ ಬಹಳ ಸಾಮ್ಯತೆ ಇದೆ.ಎರಡೂ ದೊಡ್ಡ


ಮನೆತನದ ಅವನತಿಯ ಕತೆಗಳು.ಜಿನ್(ದೆವ್ವ),ಮಂತ್ರವಾದಿಗಳು,ಅಡಿಗೆ ಮನೆ ವರ್ಣನೆ ಇತ್ಯಾದಿ ಎರಡರಲ್ಲೂ ಸಾಕಷ್ಟಿವೆ.


ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಈ  ಅನುವಾದಗಳ ಪ್ರಕಾಶಕರು ಕೇಂದ್ರ ಸಾಹಿತ್ಯ ಅಕಾಡೆಮಿ.

ಬುಧವಾರ, ಜುಲೈ 24, 2013

ರೋಗಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಗಮನಿಸ ಬೇಕಾದ ಕೆಲವು ಅಂಶಗಳು

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಯನ್ನು  ಆಸ್ಪತ್ರೆಗೆ  ಸಾಗಿಸುವಾಗ ಕೆಲವು ಅಂಶಗಳನ್ನು ಗಮನಿಸ ಬೇಕು.


ರೋಗಿಯು ಪ್ರಜ್ಞಾ ಶೂನ್ಯ ಅಥವಾ ಅರೆ ಪ್ರಜ್ಞೆಯಲ್ಲಿ ಇದ್ದರೆ ಮಲಗಿಸಿಯೇ ಸಾಗಿಸಿ.ಕುಳ್ಳಿರಿಸ ಬೇಡಿ.ಇದರಿಂದ ಮೆದುಳಿಗೆ

ರಕ್ತ ಸಂಚಾರ ಉತ್ತಮವಾಗಿರುವುದಲ್ಲದೆ ಬಾಯಿಯಿಂದ ದ್ರವ  ಶ್ವಾಸ ಕೋಶಕ್ಕೆ ಹೋಗುವುದು ತಪ್ಪುತ್ತದೆ.ನಿಂತಿರುವಾಗ

ತಲೆ ತಿರುಗಿ ಬಿದ್ದವರನ್ನು ಕುಳ್ಳಿರಿಸಲು ಯತ್ನಿಸ ಬಾರದು. ಇದರಿಂದ ಮೆದುಳಿನ ರಕ್ತದ ಓಟ ಕಡಿಮೆಯಾಗಿ ಇನ್ನಸ್ಟು

ತೊಂದರೆಯಾಗುವುದು. ಅಲ್ಲದೆ ವಾಂತಿ ಭೇದಿ ಯಿಂದಲೋ ಇನ್ನ್ನಿತರ ಕಾರಣ ಗಳಿಂದ  ರಕ್ತದ ಒತ್ತಡ ಕಡಿಮೆಯಾಗಿ

ಇರುವಾಗ ತಲೆ  ಕೆಳಗೆ ಇದ್ದರೆ ಗುರುತ್ವಾಕರ್ಷಣೆಯಿಂದ ರಕ್ತ ಮೆದುಳಿಗೆ ಹೋಗುವುದು.

ಪ್ರಜ್ಞಾ ಶೂನ್ಯ ನಾದ ವ್ಯಕ್ತಿಗೆ ಬಾಯಲ್ಲಿ ಏನನ್ನೂ ಕೊಡಲು ಹೋಗ ಬಾರದು.ಕೊಟ್ಟರೆ ಅದು ಶ್ವಾಸ ಕೋಶಕ್ಕೆ ಹೋಗಿ

ಶ್ವಾಸೋಸ್ವಾಸಕ್ಕೆ ತಡೆ ಉಂಟುಮಾಡುವುದಲ್ಲದೆ .ನ್ಯುಮೋನಿಯ ಕಾಯಿಲೆ ಬರುವುದು.

ರೋಗಿಗೆ ಅಪಸ್ಮಾರ ಬರುತ್ತಿದಿದ್ದರೆ ಒಂದು ಪಾರ್ಶ್ವಕ್ಕೆ ತಿರುಗಿಸಿ  ಮಲಗಿಸಿರಿ.ಕಬ್ಬಿಣದ ವಸ್ತುಗಳನ್ನ್ನು ಕೈಯಲ್ಲಿ ಇಡಲು

ಪ್ರಯತ್ನಿಸ ಬಾರದು.ಇದು ದೊಡ್ಡ ಅವೈಜಾನಿಕ  ನಂಬಿಕೆ  .ಫಿಟ್ಸ್ ಮಾರುವಾಗ ಕಬ್ಬಿಣದ ತುಂಡು ತಾಗಿ ಗಾಯ ಯಾಗುವ ಸಂಭವ

ಇದೆ. ಪ್ರಜ್ಞೆಯಿಲ್ಲದ ವ್ಯಕ್ತಿ ವಾಂತಿ ಮಾಡಿದರೂ ಒಂದು ಪಾರ್ಶ್ವಕ್ಕೆ ತಿರುಗಿಸಿ ಮಲಗಿಸ ಬೇಕು.ಇದರಿಂದ ವಾಂತಿ ಶ್ವಾಸ

ನಾಳಕ್ಕೆ  ಹೋಗುವುದು ತಪ್ಪುತ್ತದೆ. ಸ್ಟ್ರೋಕ್ ಆದ ರೋಗಿಯು ನೀರು ಕುಡಿಸುವಾಗ ಕೆಮ್ಮುತ್ತಿದ್ದರೆ ಬಾಯಲ್ಲಿ ಏನನ್ನ್ನೂ ಕೊಡ

ಬಾರದು .


ದಮ್ಮು ಇರುವ ಹೃದಯ ರೋಗಿಗಳು ಮತ್ತ್ತು ಅಸ್ಥಮಾ ರೋಗಿಗಳನ್ನು ಕುಳ್ಳಿರಿಸಿ ಆಸ್ಪತ್ರೆಗೆ ಒಯ್ಯ ಬೇಕು.ಮಲಗಿಸಿದರೆ

ದಮ್ಮು ಜಾಸ್ತಿ ಆಗುವುದು.

ಸುಟ್ಟಗಾಯ ಆದ  ಜಾಗಕ್ಕೆ ತಣ್ಣೀರು ಹಾಕುತ್ತಿರ ಬೇಕು.ಇದರಿಂದ ಗಾಯದ ತೀವ್ರತೆ ಕಡಿಮೆ ಆಗುವುದು.

ಮೂಳೆ ಮುರಿತ ಇದ್ದರೆ  ಆ ಭಾಗವನ್ನು ಚಲನೆ ಕಮ್ಮಿಯಿರುವಂತೆ ನೋಡಿ ಕೊಳ್ಳ ಬೇಕು.ಇದಕ್ಕೆ ಸಾಧ್ಯವಿದ್ದರೆ ಸ್ಲಿಂಗ್ ಅಥವಾ

ಸ್ಪ್ಲಿಂಟ್ ಉಪಯೋಗಿಸ ಬಹುದು.ಬೆನ್ನು ಮೂಳೆಗೆ ಏಟು ಆದವರನ್ನು ಅದಸ್ಟು ಕಡಿಮೆ ಚಲನೆಗೊಳಪದಿಸ ಬೇಕು.ಇದರಿಂದ

ಬೆನ್ನು ಹುರಿಗೆ ಅಪಾಯ ಕಡಿಮೆ ಆಗುವುದು.

ಸಾಗಿಸುವ ವಾಹನದಲ್ಲಿ ಗಾಳಿ ಚೆನ್ನಾಗಿ ಓಡುತ್ತಿರ ಬೇಕು.

ವಾಂತಿ ಭೇದಿಯಿಂದ ಬಳಲುತ್ತಿರುವ ರೋಗಿಗಳಿಗೆ ಎಚ್ಚರ ಇದ್ದರೆ ನೀರು ಕುಡಿಸುತ್ತಿರ ಬಹುದು 

ಮಂಗಳವಾರ, ಜುಲೈ 23, 2013

ವೈದ್ಯರಿಂದ ರಚಿತವಾದ ಎರಡು ಒಳ್ಳೆಯ ಕಾದಂಬರಿಗಳು

ಕೆಲವು ತಿಗಳುಗಳ ಹಿಂದೆ ಎರಡು ಒಳ್ಳೆಯ ಪುಸ್ತಕಗಳನ್ನು ಓದಿದ್ದೆ.ಇಂಗ್ಲಿಷ್ ಭಾಷೆಯ ಕಾದಂಬರಿಗಳು.ಬರೆದವರು ವೈದ್ಯರು.

ಒಂದು ಕಾವೇರಿ ನಂಬೀಶನ್ ಅವರು ಬರೆದ ಕಾದಂಬರಿ ದಿ  ಹಿಲ್ಸ್ ಆಫ್ ಅಂಗ್ಹೇರಿ.ನಲ್ಲಿ ಎಂಬ ಬಯಲು ಸೀಮೆಯ ಹುಡುಗಿ ,ಶಾಲಾ ಮಾಸ್ತರರ ಮಗಳು ವೈದ್ಯೆಯಾಗಿ ತನ್ನ ಹಳ್ಳಿಯಲ್ಲಿ ಸೇವೆ ಸಲ್ಲಿಸುವ ಕನಸುಗಳೊಡನೆ ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ ಕಲಿತು ಮುಂದೆ ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿ ತನ್ನ ಹಳ್ಳಿಯಲ್ಲಿ ಕೆಲಸ ಮಾಡುವ ಅವಕಾಶ ಸಿಗದಿದ್ದರೂ ಉತ್ತರ ಭಾರತದ ಒಂದು ಮೂಲೆಯಲ್ಲಿ ಸೇವಾ ಸಂಘಟನೆಯ ಆಸ್ಪತ್ರೆಯಲ್ಲಿ ,ಆ ಮೇಲೆ ಬೇರೆ ಬೇರೆ ಊರುಗಳಲ್ಲಿ ವೈದಯಕೀಯ ನೀತಿಗಳಿಗೆ ಭದ್ಧವಾಗಿ ಕೆಲಸ ಮಾಡುವ ಕತೆ.ವೈದ್ಯಕೀಯ ಪ್ರಪಂಚದ ಕೌತಕಗಳು,ಸಮಸ್ಯೆಗಳು,ಮೋಸ ವಂಚನೆಗಳು ಅನುಭವ ಉಳ್ಳ ವೈದ್ಯೆಯ ಲೇಖನಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಸ್ವಲ್ಪ ಮಟ್ಟಿಗೆ ಆತ್ಮ ಕಥಾತ್ಮಕ.
                                    hills of angheri
                               
                             kavri
                                 ಕಾವೇರಿ ನಂಬೀಶನ್
ಕಾವೇರಿ ನಂಬೀಶನ್ ಕರ್ನಾಟಕದವರು.ಕೊಡಗಿನ ಮಾಜಿ ಮುಖ್ಯ ಮಂತ್ರಿ ,ಕೇಂದ್ರದ ರೈಲ್ವೆ ಸಚಿವ ,ರಾಜ್ಯಪಾಲರಾಗಿದ್ದ ಶ್ರೀ ಸಿ ಎಂ ಪೂಣಚ್ಚ ಅವರ ಮಗಳು ,ಶಸ್ತ್ರ ವೈದ್ಯ ತಜ್ಞೆ .
ಕಾದಂಬರಿಯ ನಾಯಕಿ ವೈದ್ಯ ವಿದ್ಯಾರ್ಥಿನಿಯಾಗಿದ್ದಾಗ ಅವಳ ಗುರುಗಳು ಹೇಳುವ ಕಿವಿ ಮಾತು ಹೀಗಿದೆ.'’ ಸಾಯುತ್ತಿರುವ ರೋಗಿಯ ಬಳಿ ಸೇವೆ ಸಲ್ಲಿಸುವುದು ಒಂದು ಸೌಭಾಗ್ಯ.ನಾವು ವಿ. ಐ ಪಿ ಗಳನ್ನು  ,ರಾಜವಂಶಜರನ್ನು ಸೇವಿಸಲು ಕಾಯುತ್ತಿರುತ್ತೇವೆ ,ಆದರೆ ಸಾವಿನ ದವಡೆಯಲ್ಲಿ ಇರುವ ರೋಗಿಯೇ ನಮಗೆ ರಾಜ.’
ಇನ್ನೊಂದು ಪಾರಾ ಹೀಗಿದೆ.
‘ಅವಳು   (ಡಾ ನಲ್ಲಿ ) ಬೋರಯ್ಯ್ಯನ ಸ್ತಬ್ಧವಾದ ಹೃದಯವನ್ನು ಖಚಿತ ಪಡಿಸಿ ಸ್ತೇಥೋಸ್ಕೋಪ್ ಕಿವಿಯಿಂದ ತೆಗೆದು ಬಂಧುಗಳಲ್ಲಿ ಹೇಳ ತೊಡಗಿದಳು .ಅದು ವರೆಗೆ ಅವಳ ಪ್ರತಿಯೊಂದು ಶಬ್ದಕ್ಕೂ ಜೋತು ಬೀಳುತ್ತಿದ್ದವರು ಈಗ ಅವಳನ್ನು ತಿರಸ್ಕಾರದಲ್ಲಿ ನೋಡಲಾರಂಬಿಸಿದರು .ಈ ತನಕ ಬಹಳ ಮುಖ್ಯವೆನಿಸಿದ್ದ ಅವಳ ಕೈಗಳು ಮರದ ಕೊರಡುಗಳಂತೆ ಇಕ್ಕಡೆ ಜೋತು ಬಿದ್ದಿದ್ದವು.ಔಷಧಿ ಟ್ರಾಲಿ, ಐ ವಿ ಲೈನ್ ,ಟ್ಯೂಬುಗಳು  ಕ್ಯಾತಿಟರ್ಗಳು ,ಇಂಜೆಕ್ಷನ್ಗಳು ,ಬಿ ಪಿ ಕಫ್ ಗಳು ಎಲ್ಲಾ ನಿರುಪರುಕ್ತ ವಾಗಿ ತೋರಿದವು.ಡಾಕ್ಟರ್ ಎದುರಿಸ ಬೇಕಾದ ಕಷ್ಟಗಳಲ್ಲಿ ಇದು ಅತೀ ಕಠಿಣವಾದುದು’

ಇನ್ನೊಂದು ಉತ್ತಮ ಕಾದಂಬರಿ  ಡಾ ಅಬ್ರಹಾಂ ವೆರ್ಗ್ಹಿಸ್ ಅವರ  ಕಟಿಂಗ್ ಫಾರ್ ಸ್ಟೋನ್ .ಇದು ವೈದ್ಯ ಜಗತ್ತಿನ ಸವಾಲು ,ಸೋಲು ಗೆಲುವು , ಮನುಷ್ಯ ಪ್ರೀತಿ ಪ್ರೇಮಗಳ  ಸುಂದರ ಚಿತ್ರಣ.ಆಫ್ರಿಕಾ ಖಂಡದ ಇತಿಯೋಪಿಯಾ ನಾಡಿನ ರಾಜಧಾನಿ ಅಡಿಸ್ ಅಬಾಬದ ಕಾಲ್ಪನಿಕ ಆಸ್ಪತ್ರೆ ‘ಮಿಸ್ಸಿಂಗ್” ಕಾದಂಬರಿಯ ಕಾರ್ಯ ಕೇಂದ್ರ. ಮಾರಿಯೋನ್ ಮತ್ತು ಶಿವ ಸ್ಟೋನ್ ಭಾರತೀಯ ನನ್ ಸಿಸ್ಟರ್ ಮತ್ತು ಬ್ರಿಟಿಶ್ ಸರ್ಜನ್ ಅವರ  ಗುಪ್ತ ಪ್ರಣಯದಲ್ಲಿ ಜನಿಸಿದ ಅವಳಿ ಜವಳಿಗಳು .ಇವರ ತಾಯಿ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದರೆ ತಂದೆ ಹೇಳದೇ ಊರು ಬಿಟ್ಟು ಹೋಗಿರುತ್ತಾರೆ.ಭಾರತೀಯ ಮೂಲದ ವೈದ್ಯೆ ಹೇಮಾ ಇವರಿಗೆ ತಾಯಾಗುತ್ತಾಳೆ .ಅವಳಿ ಜವಳಿ ಗಳಾದರೂ ಇಬ್ಬರ ನಡೆ ನುಡಿ ಅಭಿರುಚಿಗಳಲ್ಲಿ ಅಜ ಗಜಾಂತರ.ಮುಂದೆ ಅಮೇರಿಕಾ ಕ್ಕೂ ಹರಡುವ ಕತೆಯಲ್ಲಿ ಇತಿಯೋಪಿಯಾ ದ ಅನಿಶ್ಚಿತ ರಾಜಕೀಯ ಮತ್ತು ಜನಜೀವನದ ಚಿತ್ರಣ ಕೊಟ್ಟಿದ್ದಾರೆ.ಕೊನೆ ವರೆಗೂ ಕೌತುಕ ಕಾಯ್ದು ಕೊಳ್ಳುವ ಕೃತಿ.

                                                        cutting for stone

ಡಾ ಅಬ್ರಹಾಂ ವೆರ್ಗ್ಹಿಸ್ ಭಾರತೀಯ ಮೂಲದ ವೈದ್ಯ ,ಈಗ ಅಮೆರಿಕಾದಲ್ಲಿ ಪಿಸಿಶಿಯನ್ ಮತ್ತು ಬರಹಗಾರರಾಗಿ ಬಹಳ ಹೆಸರು
ಗಳಿಸಿದ್ದಾರೆ. ಅನಿವಾಸಿ  ಭಾರತೀಯ ಶಿಕ್ಷಕ ತಂದೆ ತಾಯಿಗಳ ಪುತ್ರನಾದ ಇವರ ಜನನ ಇಥಿಯೋಪಿಯಾ ದಲ್ಲಿ ಆಯಿತು.ಮುಂದೆ ಅಮೇರಿಕಾ ನಾಡಿಗೆ ವಲಸೆ ಹೋದ ಇವರು ಎಂ ಬಿ ಬಿ ಎಸ್ ಮಾಡಿದ್ದು ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ .ಪ್ರಸಿದ್ದ ವೈದ್ಯ ಮತ್ತು ಲೇಖಕ .

ಶಿಕ್ಷಕ ಡಾ ಕೆ ವಿ ತಿರುವೆಂಗಡಂ ಇವರ  ಆದರ್ಶ .ರೋಗಿಗಳ ರೋಗ ವಿವರ ತೆಗೆದು ಕೊಳ್ಳುವುದು ಮತ್ತು ಪರೀಕ್ಷೆಗೆ ಹೆಚ್ಚು ಒತ್ತು

ನೀಡುವ ಪರಂಪರೆ. ಕ್ಷ ರೇ .ರಕ್ತ ಪರೀಕ್ಷೆ , ಸ್ಕ್ಯಾನ್ ಗಳು ಆ ಮೇಲೆ ಆವಶ್ಯವಿದ್ದರೆ ಮಾತ್ರ .
                         
                         
                             abraham verghese
                             ಡಾ ಅಬ್ರಹಾಂ ವರ್ಗ್ಹಿಸ್
ಇವರ ಇನ್ನೆರಡು ಕೃತಿಗಳಾದ ದಿ ಟೆನಿಸ್ ಪಾರ್ಟ್ನರ್ ಮತ್ತು ಮೈ ಓನ್ ಕಂಟ್ರಿ ಗಳೂ ಓದುಗರ ಮನ ಗೆದ್ದಿವೆ.

ಶುಕ್ರವಾರ, ಜುಲೈ 19, 2013

ಪ್ರಾಸ್ಟೇಟ್ ಗ್ರಂಥಿಯ ಸಾಮಾನ್ಯ ಊತ(Benign hyperplasia of Protate)

                                                    prostarte
ಗಂಡಸರಲ್ಲಿ ಪ್ರಾಸ್ಟೇಟ್ ಎಂಬ ಗ್ರಂಥಿಯಿದೆ.ಮುತ್ರಾಶಯದ ಹಿಂದೆ ಮತ್ತು ಗುದ ನಾಳದ ಮುಂದೆ ಇರುವ ಈ ಗ್ರಂಥಿಯು ಮೂತ್ರ

ನಾಳವನ್ನು ಸುತ್ತುವರಿಯುತ್ತದೆ.ಕ್ಷಾರಯುಕ್ತವಾದ ಇದರ ಸ್ರಾವ  ವೀರ್ಯಾಣುಗಳ ರಕ್ಷಣೆ ಮಾಡುತ್ತದೆ.ಮಧ್ಯ ವಯಸ್ಸು ಕಳೆದಂತೆ ಈ

ಗ್ರಂಥಿಯು ಉಬ್ಬಿಕೊಳ್ಳುತ್ತದೆ.ಇದನ್ನೇ ಪ್ರಾಸ್ಟೇಟ್ ನ ಸಾಮಾನ್ಯ ಊತ ಎಂದು ಕರೆಯುತ್ತಾರೆ.

ಪ್ರಾಸ್ಟೇಟ್ ಊತದ ಲಕ್ಷಣಗಳು .
೧.ಆಗಾಗ್ಗೆ ಮೂತ್ರ ವಿಸರ್ಜನೆ ಆಗುವುದು.ಮೂತ್ರ  ಹಿಡಿದಿಟ್ಟುಕೊಳ್ಳಲು ಆಗದಿರುವುದು.
೨ ಮೂತ್ರ ಕಟ್ಟಿ ಕಟ್ಟಿ ಹೋಗುವುದು.

೩ ಮೂತ್ರ ವಿಸರ್ಜನೆಯ ನಂತರವೂ ಮೂತ್ರಾಶಯದಲ್ಲಿ  ತುಂಬಾ ಮೂತ್ರ ಉಳಿಯುವುದು.

೪ ಆಗಾಗ್ಗೆ  ಮೂತ್ರದ ಸೋಂಕು ಆಗಿ ಉರಿ ಮೂತ್ರ ,ಅದರಿಂದ ಜ್ವರ ಬರುವುದು.

೫.  ಕೆಲವು ಬಾರಿ ಏಕಾ ಏಕಿ ಮೂತ್ರ ಬಂದ್ ಆಗಿ ಕೆಳ ಹೊಟ್ಟೆ ನೋವಿನಿಂದ ಊದುವುದು

  ಮಧ್ಯ ವಯಸ್ಸಿನ ಗಂಡಸು ಮೇಲಿನ  ಲಕ್ಷಣಗಳೊಡನೆ ಬಂದರೆ ವೈದ್ಯರು ಪ್ರಾಸ್ಟೇಟ್ ನ ಊತ ವನ್ನು ಶಂಕಿಸುವರು.

ಗುದ ನಾಳದಲ್ಲಿ ಬೆರಳಿಟ್ಟು ಪರೀಕ್ಷಿಸಿದಾಗ   ಪ್ರಾಸ್ಟೇಟ್  ಉಬ್ಬಿದುದನ್ನು ಕಂಡು ಹಿಡಿಯ ಬಲ್ಲುದಲ್ಲದೆ ,ಅನುಭವದಿಂದ  ಪ್ರಾಸ್ಟೇಟ್ ನ

ಗಂಭೀರ ಕಾಯಿಲೆ ಕ್ಯಾನ್ಸರ್ ನ್ನೂ ಶಂಕಿಸ ಬಹುದು.

ಅಲ್ಟ್ರಾ ಸೌಂಡ್ ಸ್ಕ್ಯಾನ್ ಮೂಲಕ ಪ್ರಾಸ್ಟೇಟ್ ನ ಗಾತ್ರ ಹೆಚ್ಚು ಕಡಿಮೆ ನಿಖರವಾಗಿ ಗೊತ್ತು ಮಾಡ ಬಹುದು.ಮೂತ್ರ ವಿಸರ್ಜನೆಯ

ನಂತರ  ಮುತ್ರಾಶಯದಲ್ಲಿ  ಉಳಿಯುವ ಮೂತ್ರದ ಪ್ರಮಾಣವನ್ನೂ ಸ್ಕ್ಯಾನ್ ಮೂಲಕ ನಿರ್ದರಿಸುತ್ತಾರೆ. ಈ ಅಳತೆ ೫೦ ಎಂ.ಎಲ್

ಗಿಂತ  ಜಾಸ್ತಿ ಇದ್ದರೆ ಮೂತ್ರ ವಿಸರ್ಜನೆಗೆ ಪ್ರಾಸ್ಟೇಟ್ ಊತದಿಂದ  ತಡೆಯಾಗುತ್ತಿದೆ ಎಂದು ಅರ್ಥ .

ಚಿಕಿತ್ಸೆ

ಮೂತ್ರ ವಿಸರ್ಜನೆ ಸಂಪೂರ್ಣ ಬ್ಲಾಕ್ ಆದರೆ ತತ್ಕಾಲಕ್ಕೆ ಕೃತಕ ನಾಳ (ಕ್ಯಾತಿಟರ್ ) ಹಾಕುವರು.

                 ಪ್ರಾಸ್ಟೇಟ್ ಊತವನ್ನು ಕಮ್ಮಿ ಮಾಡುವ ಮಾತ್ರೆಗಳು ಲಭ್ಯವಿವೆ.ಇವುಗಳಲ್ಲಿ ಆಲ್ಫಾ ಎಡ್ರಿನರ್ಜಿಕ್ ಬ್ಲೋಕೆರ್ಸ್ ಉದಾ

ಪ್ರಜೊಸಿನ್ ,ತಮ್ಸುಲೋಸಿನ್ ಇತ್ಯಾದಿ .ಪ್ರಾಸ್ಟೇಟ್ ಗ್ರಂಥಿಯ  ಊತಕ್ಕೆ ಗಂಡು ಹಾರ್ಮೋನ್ ಗಳೂ ಕಾರಣ ವಾದುದರಿಂದ

ಈ ಹಾರ್ಮೋನ್ ಗಳನ್ನು ಕಮ್ಮಿ ಮಾಡುವ ಔಷಧಿಗಳೂ ಬಳಕೆಯಲ್ಲಿ ಇವೆ.

ಔಷಧಿಯಿಂದ  ಕಾಯಿಲೆ ಹತೋಟಿಗೆ ಬರದಿದ್ದರೆ  ಶಸ್ತ್ರಚಿಕಿತ್ಸೆ ಮಾಡುತ್ತಾರೆ .ಇದರಲ್ಲಿ ಮೂತ್ರ ನಾಳದ ಮೂಲಕ ಉಪಕರಣ ಹಾಯಿಸಿ

ಮೂತ್ರ ನಾಳಕ್ಕೆ  ಉಬ್ಬಿರುವ ಪ್ರಾಸ್ಟೇಟ್ ನ ಅಂಶವನ್ನು ಕತ್ತರಿಸುವ  ಟ್ರಾನ್ಸ್  ಯುರೆತ್ರಿಕ್ ಪ್ರಾಸ್ಟೇಟಿಕ್  ರಿಸೆಕ್ಕ್ಶನ್ (ಟಿ.ಯು.ಆರ್.ಪಿ)

ಜನಪ್ರಿಯ. ಇತ್ತೀಚಿಗೆ ಪ್ರಾಸ್ಟೇಟ್ ಕತ್ತರಿಸಲು ಲೇಸರ್ ನ್ನೂ ಬಳಸುತ್ತಾರೆ. ಇಡೀ ಪ್ರಾಸ್ಟೇಟ್ ನ್ನು ತೆಗೆಯುವ ಶಸ್ತ್ರ ಚಿಕಿತ್ಸೆಯೂ ಇದೆ.

ಸೋಮವಾರ, ಜುಲೈ 15, 2013

ಅಸ್ತಮಾ ಕಾಯಿಲೆ


ಅಸ್ಥಮಾ ಕಾಯಿಲೆ ಅನುವಂಷಿಕ ಹಾಗೂ ಅಲರ್ಜಿ ಯಿಂದ ಬರುತ್ತದೆ.ಅಲರ್ಜಿ ಉಂಟು ಮಾಡುವ ವಸ್ತುಗಳಿಗೆ ಅಲ್ಲರ್ಜನ್

ಎಂದು ಕರೆಯುತ್ತಾರೆ.ಇಂತಹ ವಸ್ತುಗಳ ಸಂಖ್ಯೆ ಈಗ ಹೆಚ್ಚುತ್ತಿದೆ.ವಾಯು ಕಲ್ಮಶಗಳು ,ಹೂವಿನ ಪರಾಗ ಇತ್ಯಾದಿ ವಸ್ತುಗಳು ಅಲರ್ಜಿ ಕಾರಕಗಳು


ಅಸ್ಥಮಾ ಕಾಯಿಲೆಯಲ್ಲಿ ಶ್ವಾಸ ನಾಳಗಳ ಒಳಪದರ ಉಬ್ಬಿಕೊಂಡು  ನಾಳದ ರಂದ್ರ ಸಂಕುಚಿತ ಗೊಳ್ಳುತ್ತದೆ .ಆದುದರಿಂದ

ಶ್ವಾಸ ಕೋಶದಿಂದ ಉಸಿರು ಹೊರ ಹೋಗುವಾಗ ತಡೆ ಉಂಟಾಗಿ ದಮ್ಮು ಕಟ್ಟಿದ ಅನುಭವ  ಮತ್ತು ಸುಯಿ ಸುಯಿ ಎಂಬ

ಶಬ್ದ ಉಂಟಾಗುತ್ತದೆ.ಸಣ್ಣ ನಳಿಗೆ ಯೋಳಗಿಂದ  ಜೋರಾಗಿ ಗಾಳಿ ಊದಿ ಶಬ್ದ ಬರಿಸುವ ಆಟ ಮಕ್ಕಳು ಆಡುತ್ತಾರಲ್ಲವೇ

ಅಂತೆಯೇ.
                                                                 
                                   ನಾರ್ಮಲ್              ಆಸ್ತಮಾ ರೋಗಿ  ಶ್ವಾಸ ನಾಳ      
                                                              




 ಇತ್ತೀಚಿಗೆ ಅಸ್ಥಮಾ ರೋಗ ಹೆಚ್ಚಾಗುತ್ತಿದೆ. ವಾತಾವರಣ ,ಆಹಾರ  ಪ್ರದೂಷಣ ಇದಕ್ಕೆ ಕಾರಣ ಇರಬಹುದು.ಮಕ್ಕಳು  ನಮ್ಮ

ಹಾಸಿಗೆಯಲ್ಲಿ ಧೂಳು ಕ್ರಿಮಿ (dust mite) ಎಂಬ ಅಲರ್ಜಿ ಕಾರಕ  ಕುಳಿತು ಕೊಳ್ಳುತ್ತದೆ.ಹಿಂದೆ ಮಲಗಿದ ಚಾಪೆ  ಮಡಿಚಿ ಇಡುತ್ತಿದ್ದರು .ಈಗ

ಕಡಿಮೆ.ಆದ್ದುದರಿಂದ ಈ ಕ್ರಿಮಿಗಳು ಹಾಸಿಗೆಯಲ್ಲಿ ಹೆಚ್ಚು ಹೆಚ್ಹು ತಳವೂರಿ ನಾವು ಮಲಗುವಾಗ ತಮ್ಮ ಪ್ರತಿಭೆ ತೋರಿಸುತ್ತವೆ.

ಇದಲ್ಲದೆ ಸೊಳ್ಳೆ ಓಡಿಸಲೆಂದು ಫ್ಯಾನ್ ಹಾಕಿ ಮಲಗುತ್ತ್ತೇವೆ. ಇದರಿಂದ ಗಾಳಿ ಯಲ್ಲಿ  ಈ ಕ್ರಿಮಿಗಳು ಸೇರಿಕೊಳ್ಳುವವು  ಅಲ್ಲದೆ ಫ್ಯಾನ್ ಗಾಳಿಯಿಂದ ಶ್ವಾಸ ನಾಳದ ನೈಸರ್ಗಿಕ

ಆರ್ದ್ರತೆಯನ್ನು ಕಡಿಮೆ ಆಗುವುದು .ಇದೂ ಶ್ವಾಸ ನಾಳದ ಉತ್ಪ್ರೇಕ್ಷಿತ ಪ್ರತಿಕ್ರಿಯೆ ಗೆ (Hyper responsiveness) ಕಾರಣ ಇರ

ಬಹುದು.


ಅಸ್ತಮಾ ರೋಗಿಗೆ ಉಸಿರಾಟ ಕಷ್ಟವಾಗುವುದು .ಅಲ್ಲದೆ  ಶಬ್ದದಿಂದ ಕೂಡಿರುವುದು.


ಚಿಕತ್ಸೆ

ಇತ್ತೀಚೆಗೆ ಅಸ್ಥಮಾ ಕಾಯಿಲೆಗೆ  ಒಳ್ಳೆಯ ಔಷಧಿಗಳು ಬಂದಿವೆ.ಶ್ವಾಸನಾಳಗಳನ್ನು ವಿಕಸಿಸಿಸುವಂತಹ ಔಷಧಿಗಳಿಗೆ

ಇಂಗ್ಲಿಷ್ ನಲ್ಲಿ ಬ್ರೊಂಕೋ ಡಯ ಲೇಟರ್   ಎನ್ನುತ್ತಾರೆ .ಉದಾ ; ಸಾಲ್ಬು ಟಮೋಲ್, ಟರ್ಬುಟಲಿನ್ .ಇವು ಗುಳಿಗೆ ,ಸೇದುವ

ಮಾತ್ರೆ ,ಮತ್ತು ಸೇದುವ ಗಾಳಿ (ಇನ್ಹೆಲ ರ್ ) ರೂಪದಲ್ಲಿ ಬರುತ್ತವೆ.ಇದರಲ್ಲಿ  ಸೇದುವ ಮಾರ್ಗ ಉತ್ತಮ. ಏಕೆಂದರೆ

ಈ ವಿಧಾನದಲ್ಲಿ ಔಷಧ ನೇರ ಶ್ವಾಸಕೋಶಕ್ಕೆ ಹೋಗಿ ಸಂಕುಚನ ಗೊಂಡ ನಾಳವನ್ನು ಕೂಡಲೇ ವಿಕಸನ ಗೊಳಿಸುವುದು.

ಮಾತ್ರೆಗಲಾದರೋ  ಹೊಟ್ಟೆಯಿಂದ ರಕ್ತಕ್ಕೆ ಸೇರಿ ನಿದಾನವಾಗಿ  ಶ್ವಾಸನಾಳಕ್ಕೆ ತಲುಪುವವು.ಅಲ್ಲದೆ ಈ ವಿಧಾನದಲ್ಲಿಔಷಧ  ಶರೀರದ ಎಲ್ಲಾ ಅಂಗಗಳಿಗೆ ಅನಾವಶ್ಯಕ ಹೋಗುವುದು.ಸೇದುವ ಮಾತ್ರೆ ಮತ್ತು ಇನ್ಹಲರ್ ನಲ್ಲಿ ಔಷಧಿ  ಮೈಕ್ರೋ

ಗ್ರಾಂ ಅಂದರೆ ಮಿಲಿಗ್ರಾಂ ನ ಸಾವಿರದ ಒಂದು ಭಾಗದಷ್ಟು ಇದ್ದರೆ ತಿನ್ನುವ ಮಾತ್ರೆಗಳಲ್ಲಿ ಮಿಲಿಗ್ರಾಂ ನಲ್ಲಿ ಇರುತ್ತವೆ,ಆದರಿಂದ
ತಿನ್ನುವ ಮಾತ್ರೆಗಳೇ ಹೆಚ್ಚು ಸ್ಟ್ರಾಂಗ್.ಅಡ್ಡ ಪರಿಣಾಮಗಳು ಸೇದುವ ರೂಪದಲ್ಲಿ ಕಡಿಮೆ.

ರೋಗಿಗೆ ತೀವ್ರ ಅಸ್ತಮಾ ಇದ್ದಾರೆ ನೆಬುಲೈಸರ್ ಎಂಬ ಯಂತ್ರದ ಮುಖಾಂತರ  ಔಷಧಿ ದ್ರಾವಣದ ಆವಿ ಕೊಡುವ ಪದ್ಧತಿಇದೆ.

ಶ್ವಾಸನಾಳದ ವಿಕಸಕ ಔಷಧಿಗಳೊಂದಿಗೆ ಅಲರ್ಜಿ ಚಟ ತೆಗೆಯಲು ಸ್ಟೀರಾಯ್ಡ್ ಗಳನ್ನೂ ಕೊಡುತ್ತಾರೆ.ಇವೂ ಮೇಲೆ ಹೇಳಿದ

ವಿವಿಧ  ರೂಪಗಲ್ಲಿ ಸಿಗುತ್ತವೆ.ಕೆಲವರು  ಸ್ಟೀರಾಯ್ಡ್ ಎಂದರೆ ಬೆಚ್ಚಿ  ಬೀ ಳುತ್ತಾರೆ. ಆದರೆ ಯಾವುದೇ ಔಷಧಿ ಹಿತ ಮಿತದಲ್ಲಿ

ಇದ್ದರೆ ತೊಂದರೆ ಇಲ್ಲ. ಆಸ್ತಮಾದ  ತೊಂದರೆಗಿಂತ ಚಿಕ್ಕ ಪುಟ್ಟ ಅಡ್ಡ ಪರಿಣಾಮ ಲೇಸು.

                                         
                                                          Inhaler(ಇನ್ಹೆಲರ್ )
                                                     
                                                        ಸೇದುವ ಮಾತ್ರೆ ಮತ್ತು ಉಪಕರಣ

                                                ನೆಬುಲೈಸರ್


ಔಷಧಿಗೆ ಹೆದರಿ ಅಸ್ತಮಾ ಕಾಯಿಲೆಗೆ ಸರಿ ಚಿಕಿತ್ಸೆ ಮಾಡದಿದ್ದರೆ  ಶರೀರದ ಅಂಗಾಂಗ ಗಳಿಗೆ  ಆಮ್ಲ ಜನಕ ಸರಿಯಾಗಿಸಿಗದೆ ಮೆದುಳು ಮತ್ತು ಶರೀರದ ಬೆಳವಣಿಗೆ ಕುಂಠಿತ ವಾಗುವುದು.
ಚಳಿ ಗಾಲದಲ್ಲಿ  ಆಸ್ತಮಾ ಭಾದೆ ಜಾಸ್ತಿ ಆಗುವುದು .ತಂಪು ಹವೆಯಲ್ಲಿ ವಾತಾವರಣದ  ನೀರಾವಿ ಸಾಂದ್ರಗೊಂಡು ಕೆಳಗೆ ಬರುವುದು .ತನ್ನೊಡನೆ ಅದು ಧೂಳು ,ಕಲ್ಮಶಗಳನ್ನೂ ಕೆಳಗೆ ಒಯ್ಯುವುದು .(ಇಂದ್ರನನ್ನು ಎಳೆದು ಕೊಂಡು ಬಂದ ತಕ್ಷಕ ನಂತೆ )ಇದುವೇ ನಾವು ಕರೆಯುವ ಮಂಜು .ಉಸಿರಿನ ಮೂಲಕ ಒಳಹೋಗಿ ಕಿತಾಪತಿ ಮಾಡುವುದು .ಇದನ್ನು ತಡೆಗಟ್ಟಲು ಮಾಸ್ಕ್ ಸ್ವಲ್ಪ ಉಪಯೋಗ ಆಗಬಹುದು ;ಟೋಪಿಯಲ್ಲ .ಚಳಿಗಾಲದಲ್ಲಿ ಶುಷ್ಕತೆಯಿಂದ ಶ್ವಾಶ ನಾಳದ ನೈಸರ್ಗಿಕ ,ಮತ್ತು ರಕ್ಷಣಾ ಆರ್ದ್ರತೆ ಕಮ್ಮಿ ಇರುವುದರಿಂದ  ವೈರಿಗಳಿಗೆ ನೇರ ಪ್ರವೇಶ ಸಿಗುವುದು 


ಬಾಲಂಗೋಚಿ .  

ಅಸ್ತಮಾ  ಎಲ್ಲಾ  ಶ್ವಾಸ ಕೋಶ ಸಂಬಂದಿ ಅಲ್ಲ .ಕೆಲವು ಹೃದಯ ಕಾಯಿಲೆಯಲ್ಲೂ ಅಸ್ತಮಾ ಬರುವುದು.

ಇನ್ಹಲರ್ ತಿನ್ನುವ ಮಾತ್ರೆಗಿಂತ ಸ್ಟ್ರಾಂಗ್ ಅಲ್ಲ.ಒಮ್ಮೆ  ಇನ್ಹೇಲರ್ ಉಪಯೋಗಿಸಿದರೆ ಯಾವಾಗಲೂ ಬೇಕಾಗುತ್ತದೆಯೇಮ್ಬುದು ತಪ್ಪು ಕಲ್ಪನೆ.

ಮೇಲಿನ ಚಿತ್ರಗಳ ಮೂಲಕ್ಕೆ ಅಭಾರಿ.ರೋಟ ಹೇಲರ್ ಚಿತ್ರ ಉದಾಹರಣೆಗೆ ಮಾತ್ರ ,ಪ್ರಚಾರಕ್ಕೆ ಅಲ್ಲ .ಅದರಲ್ಲಿ

ಹೆಸರಿಸಿದ ಕಂಪೆನಿ ಔಷಧಿಯ ಪ್ರಚಾರ ವಲ್ಲ