ಬೆಂಬಲಿಗರು

ಶುಕ್ರವಾರ, ಫೆಬ್ರವರಿ 20, 2026

ಹಿರಿಯರಲ್ಲಿ ಬೀಳುವಿಕೆ ಮತ್ತು ಮೂಳೆ ಮುರಿತ

Our aim should be not only adding years to life but also adding life to years

  

೬೦ ವರ್ಷ ಮೇಲ್ಪಟ್ಟವರ ಪೈಕಿ  ೩೦% ಮಂದಿ ಬೀಳುತ್ತಾರೆ ,ಮತ್ತು ೧೦% ಮಂದಿಗೆ ಮೂಳೆ ಮುರಿತ ಉಂಟಾಗುವುದು . ಹಿರಿಯ ನಾಗರಿಕರಲ್ಲಿ ಇದು  ಗಂಭೀರ ಸಮಸ್ಯೆ . ಒಮ್ಮೆ ಬಿದ್ದವರಿಗೆ ಮತ್ತೆ  ಬಿದ್ದು ಬಿಡುವ ಭಯ ಅಡರಿ ಬಿಟ್ಟು  ಅದೇ ಒಂದು ಕಾಯಿಲೆ ಆಗುತ್ತದೆ .

 ಹಿರಿಯರಲ್ಲಿ ಬೀಳುವಿಕೆಗೆ ಹಲವು ಕಾರಣಗಳು ಇವೆ . ಕೆಲವನ್ನು ಪರಿಶೀಲಿಸುವಾ .

೧ . ಮಾಂಸ ಖಂಡಗಳ ದೌರ್ಬಲ್ಯ . ವಯಸ್ಸು ಆದಂತೆ ಮಾಂಸ ಖಂಡಗಳ  ಶಕ್ತಿ   ಕುಂದುವುದು . ಗಂಡಸರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಹೆಂಗಸರಲ್ಲಿ ಈಸ್ಟ್ರೋಜನ್ ಕಡಿಮೆ ಯಾಗುವುದು ಒಂದು ಕಾರಣ . ಸರಿಯಾದ ವ್ಯಾಯಾಮ ಇಲ್ಲದೆ ಇರುವುದೂ ಒಂದು ಕಾರಣ .ಹಿಂದೆ ನೆಲದಲ್ಲಿ ಕುಳಿತು ಕೊಳ್ಳುವ (ಊಟಕ್ಕೆ ಸೇರಿ)ಪದ್ಧತಿ ಇತ್ತು .ಇದರಿಂದ ಕುಳಿತು ಏಳುವುದು ಸಹಜ ವ್ಯಾಯಾಮ ಆಗುತ್ತಿತ್ತು .ಈಗ ಮಂಚ  .ಕುರ್ಚಿ ಸೋಫಾ  ಇತ್ಯಾದಿ ಬಂದ ಮೇಲೆ ಸೊಂಟ ಮತ್ತು ತೊಡೆಯ ಮಾಂಸ ಖಂಡಗಳು ವ್ಯಾಯಾಮ ಇಲ್ಲದೆ ಬೇಗ ಸೊರಗುತ್ತವೆ . ಬರೀ ನಡೆಯುವಿಕೆ  ಅಥವಾ ವಾಕಿಂಗ್ ಇದಕ್ಕೆ ಸಾಲುವುದಿಲ್ಲ .ಆದುದರಿಂದ ಇದಕ್ಕೆಂದೇ ಕೆಲವು ವ್ಯಾಯಾಮ ಗಳನ್ನು  ರೂಢಿಸಿ ಕೊಳ್ಳಬೇಕಾಗುತ್ತದೆ .(ಉದಾ Tai chi ಯಂತಹ ).ಮಾಂಸ ಖಂಡಗಳ ಆರೋಗ್ಯಕ್ಕೆ ಒಳ್ಳೆಯ ಸಸಾರ ಜನಕ ಯುಕ್ತ ಆಹಾರದ ಪ್ರಾಮುಖ್ಯತೆ ಇದ್ದೇ ಇದೆ .

೨. ಹಿರಿಯರಲ್ಲಿ ಸಮತೋಲ ಮತ್ತು ರಕ್ಷಣಾತ್ಮಕ  ಕ್ರಿಯೆಗಳು ಕುಂಠಿತ ವಾಗಿರುವುದು 

೩ ದೃಷ್ಟಿ  ಮಾಂದ್ಯ 

೪  ನರಗಳ ದೌರ್ಬಲ್ಯದಿಂದ ಕೆಲವರಲ್ಲಿ  ಕುಳಿತು ಕೊಳ್ಳುವಾಗ ಅಥವಾ ನಿಲ್ಲುವಾಗ  ರಕ್ತದ ಒತ್ತಡ ಹಠಾತ್ ಕಡಿಮೆ ಯಾಗಿ ಮೆದುಳಿಗ ಸಾಕಷ್ಟು ರಕ್ತ ಹೋಗದೆ ಬೀಳುವುದೂ ಇದೆ . ಇದನ್ನು postural hypotension  ಎನ್ನುವರು .

೫  ಸಂಧಿ ಸವೆತ .ಮುಖ್ಯವಾಗಿ ಸೊಂಟ ಮತ್ತು ಮೊಣಕಾಲು . 

೬  ನಿದ್ದೆ ಮಾತ್ರೆ ಸೇವನೆಯಿಂದ ಆಗುವ ಅಮಲು ,ಮದ್ಯ ಪಾನ 

೭ ಹೃದಯ ಸಂಬಂದಿ ಕಾಯಿಲೆಗಳು ,ಬಡಿತದ ಏರು ಪೇರು 

೮ ರಕ್ತದಲ್ಲಿ ಸೋಡಿಯಂ ,ಪೊಯಸ್ಸಿಯಂ ಇತ್ಯಾದಿಗಳ ಕೊರತೆ 

೯  ಮೂತ್ರ ಹಿಡಿದು ಕೊಳ್ಳಲು ಆಗದೇ ಇರುವುದರಿಂದ ಶಂಕೆಗೆ ಓಡುವುದು .

೧೦ ಪಾಲಿ ಫಾರ್ಮಸಿ ಅಥವಾ ಹಲ ಔಷಧಿಗಳ ಸೇವನೆ  

ಇತ್ಯಾದಿ ಬೀಳಲು ಕಾರಣಗಳು ಆದರೆ   ಸುಲಭವಾಗಿ  ಮುರಿತ ಉಂಟಾಗಲು ಎಲುಬು ಟೊಳ್ಳಾಗುವುದು ಕಾರಣ .ವಯಸ್ಸು ಆದಂತೆ ಸ್ತ್ರೀಯರಲ್ಲಿ  ಈಸ್ಟ್ರೋಜೆನ್ ಮತ್ತು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕೊರತೆ ಮುಖ್ಯ ಕಾರಣ . ಎಲುಬು ಸಾಂದ್ರತೆಗೆ ಕ್ಯಾಲ್ಸಿಯಂ ಮುಖ್ಯ ಮತ್ತು ಅದು ರಕ್ತ ಮೂಲಕ ಮೂಳೆ  ಸೇರಲು ವಿಟಮಿನ್ ಡಿ.ಇವೆರಡರ ಕೊರತೆ ಎಲುಬುಗಳನ್ನು  ಶಕ್ತಿ ಹೀನ ಮಾಡಿದರೆ    ವ್ಯಾಯಾಮದ ಕೊರತೆ ,ಕೆಲವು ಔಷಧಿಗಳು ,ಧೂಮ ಪಾನ ಇತ್ಯಾದಿ ಪೂರಕ ಅಂಶಗಳು .

 

 

 

  

 

ಬುಧವಾರ, ಫೆಬ್ರವರಿ 18, 2026

ಹಿರಿಯರ ಆರೋಗ್ಯ

 ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಲೇವರೇ |
ಔಷಧಂ ಜಾನ್ಹವೀ ತೋಯಂ ವೈದ್ಯೋ ನಾರಾಯಣೋ ಹರಿಃ 

ಆ ಗಾಗ ಕೇಳಿ ಬರುವ ಶ್ಲೋಕ .  ರೋಗ ಗ್ರಸ್ತ ವಾಗಿ ಜರ್ಜರಿತ  ಶರೀರ ಜರ್ಜರಿತ ವಾದಾಗ ದೇವರೇ ವೈದ್ಯ ,ಗಂಗಾ ಜಲವೇ ದಿವ್ಯ ಔಷಧ .ಮನುಷ್ಯನಿಗೆ  ವಯಸ್ಸಾದಾಗ ಶರೀರ ಶಿಥಿಲ ವಾಗಿ ರೋಗಗಳು ಹುಡುಕಿ ಕೊಂಡು ಬರುತ್ತವೆ .

ವಿನಾ ದೈನ್ಯೇನ ಜೀವಿತಂ ಅನಾಯಸೇನ ಮರಣಂ ಎಂಬ  ಮಂತ್ರ ಎಲ್ಲರಿಗೂ ಅಪ್ಯಾಯಮಾನವಾಗಿ ತೋರುವುದು .

ಆದುದರಿಂದ ಅನಾರೋಗ್ಯ ದೂರ ಇಡುವ ಕೆಲವು ಮಾರ್ಗೋಪಾಯ ಗಳನ್ನು  ಗಮನಿಸುವ .

ಇದರಲ್ಲಿ ಸುಲಭ (?)ಸಾಧ್ಯ  ಸರಿಯಾದ ಸಮತೋಲ ಆಹಾರ ಸೇವನೆ .

 

ಹಿರಿಯರಿಗೆ  ಸಮತೋಲಿತ ಆಹಾರವು ಕಡಿಮೆ ಕ್ಯಾಲೊರಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರಬೇಕು.ನಮ್ಮಲ್ಲಿ ಬಹು ಮಂದಿ ಅಕ್ಕಿ ಗಂಜಿ ,ನೀರು ದೋಸೆ ,ಪುಂಡಿ ಇತ್ಯಾದಿ ಆರೋಗ್ಯಕರ ಆಹಾರ ಎಂದು ಹೇಳುತ್ತಾರೆ .ಆದರೆ ಅಕ್ಕಿಯಲ್ಲಿ ಸಕ್ಕರೆ ಅಥವಾ ಕ್ಯಾಲೋರಿ ಜಾಸ್ತಿ .  ಸ್ನಾಯುಗಳ ಸಂರಕ್ಷಣೆಗೆ ಹೆಚ್ಚಿನ ಪ್ರೋಟೀನ್, ಜೀರ್ಣಕ್ರಿಯೆಗೆ ನಾರು, ಹಾಗೂ ಎಲುಬುಗಳ ಆರೋಗ್ಯಕ್ಕಾಗಿ ಅಗತ್ಯವಾದ ವಿಟಮಿನ್ ಮತ್ತು ಖನಿಜಗಳ ಮೇಲೆ ಒತ್ತು ನೀಡಬೇಕು. ಮುಖ್ಯ ಅಂಶಗಳಲ್ಲಿ ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು, ಕಡಿಮೆ ಕೊಬ್ಬಿನ ಪ್ರೋಟೀನ್ (ಮೀನು, ಕೋಳಿ, ಬೀನ್ಸ್), ಮತ್ತು ಕಡಿಮೆ ಕೊಬ್ಬಿನ ಹಾಲು ಉತ್ಪನ್ನಗಳು ಸೇರಿವೆ.  ಕೊಬ್ಬು, ಉಪ್ಪು ಮತ್ತು ಸಕ್ಕರೆ ಬಳಕೆಯನ್ನು ಕಡಿಮೆ ಮಾಡಬೇಕು. ದೇಹದಲ್ಲಿ ನೀರಿನ ಸಮತೋಲನ ಕಾಪಾಡುವುದು ಅತ್ಯಂತ ಮುಖ್ಯ, ಹಾಗೆಯೇ ಮೃದುವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು.

 

ಪ್ರೋಟೀನ್: ಸ್ನಾಯುಗಳ ಭಾರವನ್ನು ಕಾಪಾಡಲು ಅಗತ್ಯ. ಕಡಿಮೆ ಕೊಬ್ಬಿನ ಮಾಂಸ, ಕೋಳಿ, ಮೊಟ್ಟೆ, ಮೀನು, ಬೀನ್ಸ್ ಮತ್ತು ಕಾಯಿ-ಬೀಜಗಳು ಉತ್ತಮ ಮೂಲಗಳು.ಅಕ್ಕಿ ಗೋಧಿ ಯಂತಹ ಏಕ ದಳ  ಧಾನ್ಯಗಳಿಗಿಂತ ಹೆಸರು ಕಡಲೆ ಉದ್ದು ಮುಂತಾದ ದ್ವಿದಳ ಧಾನ್ಯಗಳಲ್ಲಿ ಪ್ರೊಟೀನ್ ಅಥವಾ ಸಸಾರ ಜನಕ ಅಧಿಕ ಎಂಬುದನ್ನು ಗಮನಿಸ ಬೇಕು .

ಹಣ್ಣುಗಳು ಮತ್ತು ತರಕಾರಿಗಳು: ವಿವಿಧ ಬಣ್ಣಗಳ ಹಣ್ಣು ಮತ್ತು ತರಕಾರಿಗಳನ್ನು, ವಿಶೇಷವಾಗಿ ಹಸಿರು ಎಲೆ ತರಕಾರಿಗಳನ್ನು ಸೇವಿಸುವುದು ನಾರು ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಒದಗಿಸುತ್ತದೆ.

ಅಸಂಸ್ಕರಿತ ಇಡೀ ಧಾನ್ಯ ಗಳು .

ಹಾಲು ಉತ್ಪನ್ನಗಳು: ಕಡಿಮೆ ಕೊಬ್ಬಿನ ಹಾಲು, ಮೊಸರು  ಕ್ಯಾಲ್ಸಿಯಂ ಹಾಗೂ ವಿಟಮಿನ್ D ಒದಗಿಸಿ ಎಲುಬುಗಳ ಆರೋಗ್ಯವನ್ನು ಕಾಪಾಡುತ್ತವೆ.



ಆಹಾರ ಸಂಬಂಧಿತ ಸಲಹೆಗಳು ಮತ್ತು ಗಮನಿಸಬೇಕಾದ ವಿಷಯಗಳು

ನೀರಿನ ಸೇವನೆ: ವಯಸ್ಸಾದಂತೆ ದಾಹದ ಭಾವನೆ ಕಡಿಮೆಯಾಗಬಹುದು, ಆದ್ದರಿಂದ ದಿನಪೂರ್ತಿ ಸಾಕಷ್ಟು ದ್ರವಗಳನ್ನು ಕುಡಿಯಬೇಕು.

ಉಪ್ಪು ಮತ್ತು ಸಕ್ಕರೆ ಕಡಿಮೆ ಮಾಡುವುದು: ರುಚಿಗಾಗಿ ಉಪ್ಪಿನ ಬದಲು ಸೊಪ್ಪುಗಳು ಮತ್ತು ಮಸಾಲೆಗಳನ್ನು ಬಳಸಿ; ಸಕ್ಕರೆ ಮತ್ತು ಸಂಸ್ಕರಿಸಿದ  ಆಹಾರಗಳನ್ನು ತಪ್ಪಿಸಬೇಕು.ಉಪ್ಪಿನ ಕಾಯಿ ,ಉಪ್ಪಿನಲ್ಲಿ ಕಾಪಿಟ್ಟ ಹಲಸು ಮಾವು ಮೀನು  ಇತ್ಯಾದಿ ಯಲ್ಲಿ ಉಪ್ಪು ಸಾಂದ್ರೀಕೃತ ವಾಗಿರುತ್ತದೆ  ಎಂದು ಗಮನಿಸ ಬೇಕು  

ಚಿಕ್ಕ ಪ್ರಮಾಣದ, ಹೆಚ್ಚು ಬಾರಿ ಊಟ: 

 

 ಉಪವಾಸ 

 ನಿಯಮಿತವಾಗಿ  ಮಾಡುವ ಉಪವಾಸ ಆರೋಗ್ಯಕ್ಕೆ ಉತ್ತಮ ಎಂದು ಕಂಡು ಬಂದಿದೆ .ಇದು ಆಚೇ ಮನೆ ಸುಬ್ಬಮ್ಮನ ಉಪವಾಸ ದಂತೆ ಬರೀ ಅನ್ನ ಬಿಟ್ಟು ಉಳಿದನ್ನು ಸ್ವಾಹಾ ಮಾಡುವುದು ಆಗಿರ ಬಾರದು ಮತ್ತು ಉಪವಾಸ ಮುರಿದ ಮೇಲೆ ಅದನ್ನು ಹೆಚ್ಚಿನ ಆಹಾರ ಸೇವಿಸಿ ಸಮತೂಕ ಮಾಡಲು ಹೋಗ ಬಾರದು .

(ಮುಂದುವರಿಯುವುದು )

ಮಂಗಳವಾರ, ಫೆಬ್ರವರಿ 17, 2026

ಹಿರಿಯ ರ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

 ಸಮಾಜದಲ್ಲಿ ಹಿರಿಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು  ಅವರಿಗೆ  ಕೌಟಿಂಬಿಕ ಬೆಂಬಲ ಕಡಿಮೆ ಯಾಗುತ್ತಿರುವ ಈ ಕಾಲದಲ್ಲಿ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳ ಬೇಕಾದ ಜವಾಬ್ದಾರಿ ಅವರ ಮೇಲೆ ಇದೆ . 

ಇಂದಿನ ತಥಾಕಥಿತ ನಾಗರೀಕ ಸಮಾಜದ ಕಾಯಿಲೆಗಳಾದ ರಕ್ತದ ಒತ್ತಡ ,ಸಕ್ಕರೆ ಕಾಯಿಲೆ ,ಹೃದ್ರೋಗ ಗಳಲ್ಲದೆ ಹಿರಿಯ ನಾಗರಿಕರಲ್ಲಿ ಕಾಣಿಸಿ ಕೊಳ್ಳುವ ಮೂತ್ರ ಸಂಬಂದಿ  ಸಮಸ್ಯೆ ,ಬೀಳುವಿಕೆ ಮತ್ತು ಮೂಳೆ ಮುರಿತ , ಮಹಿಳೆಯರಲ್ಲಿ  ಋತುಬಂಧ ಸಮಸ್ಯೆಗಳು ಇವುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಗಾರ ವೊಂದನ್ನು  ೧.೩.೨೦೨೬ ನೇ ಭಾನುವಾರ ಪುತ್ತೂರಿನಲ್ಲಿ ಹಮ್ಮಿ ಕೊಳ್ಳಲಾಗಿದೆ . 

ಹಿರಿಯ ಮೂಳೆ ತಜ್ಞ ಡಾ ಭಾಸ್ಕರ್ ಅವರು ಹಿರಿಯರ ಮೂಳೆ ಮತ್ತು ಸಂಧಿ ವ್ಯಾಧಿಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ,ಹಿರಿಯ ಶಸ್ತ್ರ ಚಿಕಿತ್ಸಾ ವೈದ್ಯ ಡಾ ಗೋಪಿನಾಥ ಪೈ ಅವರು ಹಿರಿಯ  ಪುರುಷ ಮತ್ತು ಸ್ತ್ರೀಯರ ಮೂತ್ರ ಸಂಬಂದಿ ಸಮಸ್ಯೆಗಳ ಮೇಲೆ ಮತ್ತು ಜನಪ್ರಿಯ ಸ್ತ್ರೀ ರೋಗ ತಜ್ಞೆ ಡಾ ಶ್ರುತಿ ಅಲೆವೂರ್ ಋತುಬಂಧ(ಮುಟ್ಟು ನಿಲ್ಲುವಿಕೆ )ಸಂಬಂಧಿ ವಿಚಾರಗಳ ಬಗ್ಗೆ ಮಾತನಾಡುವರು . ಹಿರಿಯ ಫಿಸಿಯೋಥೆರಪಿಸ್ಟ್ ವಿನಯ ಪ್ರಸಾದ್ ಝಾ ಅವರು ಉಪಯುಕ್ತ ವ್ಯಾಯಾಮ ಗಳ  ಪ್ರಾತ್ಯಕ್ಷಿಕೆ ನೀಡುವರು . ಪ್ರಶ್ನೆ ಸಮಾಲೋಚನೆಗೆ ಅವಕಾಶ ಇದೆ . ಜತೆಗೆ ನಾನೂ ಇರುತ್ತೇನೆ .

ನಿಯಮಿತ  ಆಸನ ವ್ಯವಸ್ಥೆ ಇರುವುದರಿಂದ ದಯವಿಟ್ಟು ೨೬.೨.೨೦೨೬ ರ ಒಳಗೆ ನೋಂದಾಯಿಸಿ ಕೊಳ್ಳಬೇಕಾಗಿ ವಿನಂತಿ . ಇದು ಪೂರ್ಣ ಉಚಿತ . ಕಾರ್ಯಕ್ರಮ ನಂತರ ಊಟದ ವ್ಯವಸ್ಥೆ ಇದೆ .