ಬೆಂಬಲಿಗರು

ಶುಕ್ರವಾರ, ಜುಲೈ 5, 2013

ಡಾ ಎಂ ಕೆ ಮಣಿ

                                       

ಡಾ ಎಂ ಕೆ ಮಣಿ 

ನಮ್ಮ ದೇಶದಲ್ಲಿ  ಮೂತ್ರಾಂಗ ಶಾಸ್ತ್ರ ದ  (ನೆಫ್ರಾಲಜಿ)  ಬೆಳವಣಿಗೆಯ ಅಧ್ವರ್ಯು ಡಾ ಎಂ ಕೆ ಮಣಿ .

ಲೋಕ ನಾಯಕ ಜಯಪ್ರಕಾಶ ನಾರಾಯಣ ಅವರು ಕಿಡ್ನಿ ವೈಫಲ್ಯದಿಂದ ಬಳಲಿದಾಗ  ಚಿಕಿತ್ಸೆ ನಡೆಸಿ ಎಲ್ಲರ 

ಗಮನ ಸೆಳೆದು ಕೃತಜ್ಞತೆಗೆ ಪಾತ್ರರಾದವರು.ಆರಂಭದಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜ್ , ಮತ್ತು  ಇತರ ಸರಕಾರೀ 

ವೈದ್ಯಕೀಯ ಕಾಲೇಜ್ ಗಳಲ್ಲಿ ಭೋದನೆ. ನಂತರ  ಆಸ್ಟ್ರೇಲಿಯಾ ನಾಡಿನ ಹೆಸರಾಂತ ಗುರುಗಳ ಮಾರ್ಗದರ್ಶನದಲ್ಲಿ 

ಮೂತ್ರ ಅಂಗ ಶಾಸ್ತ್ರದಲ್ಲಿ  ಹೆಚ್ಚಿನ ಅಧ್ಯಯನ. ಭಾರತಕ್ಕೆ ಆಗಮಿಸಿ ಮೊದಲು ಮುಂಬೈ ಯಲ್ಲಿ , ಆ ಮೇಲೆ 

ಮದ್ರಾಸ್ ನ  ಅಪೊಲೊ ಆಸ್ಪತ್ರೆಯಲ್ಲಿ  ಸೇವೆ. ಕಾರ್ಪೊರೇಟ್ ಆಸ್ಪತ್ರೆ ಯಲ್ಲಿ ಇದ್ದರೂ  ವೈದ್ಯ ಕ್ಷೇತ್ರದ 

ನೀತಿ ನಿಯಮಗಳಿಗೆ ಬದ್ಧ . ವೈದ್ಯ ಕೀಯ ಕ್ಷೇತ್ರದ  ಅನಿಷ್ಟಗಳ   ವಿರುದ್ದ  ಹೋರಾಟ.

ಕಿಡ್ನಿ ಕಸಿಯಲ್ಲಿ ಕಟ್ಟು ನಿಟ್ಟು. ಸಂಬಂದಿಗಳ ಕಿಡ್ನಿ ಮಾತ್ರ ಕಸಿಗೆ  ಅನುಮತಿ.

 ವೈದ್ಯ ಗುರು ಭೀಷ್ಮಚಾರ್ಯ ಡಾ ಕೆ  ವಿ ತಿರುವೆಂಗಡಮ್ ಅವರಂತೆ ಇವರಿಗೂ ಅಧ್ಯಾಪನ ವೆಂದರೆ ಪ್ರೀತಿ. ಅಪೊಲೊ ಆಸ್ಪತ್ರೆಯಲ್ಲಿ ಪ್ರತಿ ಬುಧ ವಾರ 

ಸಂಜೆ ವಿದ್ಯಾರ್ಥಿಗಳಿಗೆ ಪ್ರವಚನ. ಸ್ನಾತಕ ಸ್ನಾತಕೋತ್ತರ ಯಾರು ಬೇಕಾದರೂ ಹೋಗ ಬಹುದು .ಸ್ವಂತ ಖರ್ಚಿನಲ್ಲಿ 

ಕಾಫೀ ತಿಂಡಿ ಮತ್ತು ಬ್ಹೊಧಪ್ರದ  ಉಪನ್ಯಾಸ  ಮತ್ತು ಪ್ರಾತ್ಯಕ್ಷಿಕೆ.

ಬಹಳಷ್ಟು ಕಿಡ್ನಿ ಕಾಯಿಲೆಗಳು  ಔಷಧಗಳ ದುಷ್ಪರಿಣಾಮದಿಂದ ಉಂಟಾಗುವುದರಿಂದ ಔಷಧ ಶಾಸ್ತ್ರ ದ ಆಳವಾದ 

ಅಧ್ಯಯನ ದ ಅವಶ್ಯಕತೆಯನ್ನು ಒತ್ತಿ ಹೇಳುತ್ತಿದ್ದರು.ಅವರ ಔಷಧ ಶಾಸ್ತ್ರದ ಗುರು  ಪ್ರೊಫ್.

ಈಶ್ವರಯ್ಯ ಹೇಳುತ್ತಿದ್ದ  ಮಾತನ್ನು ಆಗ್ಗಾಗ್ಗೆ ನೆನೆಪಿಸುತ್ತಿದ್ದರು . ' ವೈದ್ಯ ರಂಗ ದಲ್ಲಿ ಮೂರು ಮುಖ್ಯ ಶಾಸ್ತ್ರಗಳು .

ಒಂದು ಶರೀರ ಕ್ರಿಯಾ ಶಾಸ್ತ್ರ (ಪಿಸಿಯೋಲೋಜಿ.),ಎರಡನೆಯದು  ಔಷಧ ಶಾಸ್ತ್ರ (ಫಾರ್ಮಕಾಲಜಿ)

ಮತ್ತು  ಮೂರನೆಯದು  ರೋಗ ಶಾಸ್ತ್ರ (ಪ್ಯಾಥಾಲಜಿ).ನೀವು  ಔಷಧ ಶಾಸ್ತ್ರ ಚೆನ್ನಾಗಿ ಅರಿತರೆ 

ರೋಗ ಶಾಸ್ತ್ರವನ್ನು ಶರೀರ ಕ್ರಿಯಾ ಶಾಸ್ತ್ರವನ್ನಾಗಿ  ಮಾರ್ಪಡಿಸ ಬಹುದು. ಇಲ್ಲದಿದ್ದರೆ  ಸಾಮಾನ್ಯ ಶರೀರ ಕ್ರಿಯಾ 

ಶಾಸ್ತ್ರವನ್ನು ರೋಗ ಶಾಸ್ತ್ರವನ್ನಾಗಿ ಪರಿವರ್ತಿಸುವಿರಿ.'

ಔಷಧಿಗಳು ಸಾವಿರಾರು ಇರುವುದರಿಂದ  ವೈದ್ಯರು ತಮ್ಮ ಮೇಜಿನ ಮೇಲೆ  ಔಷಧ ಶಾಸ್ತ್ರದ ಬಗೆಗಿನ ಪುಸ್ತಕ 

ಇಟ್ಟುಕೊಂಡು ಸಂಶಯ ಇದ್ದಾಗ ಕೂಡಲೇ ಅದರ ಬಗ್ಗೆ ಓದಿ ಔಷಧಿ ಕೊಡುವುದು ಸೂಕ್ತ ಎಂದು ಹೇಳುತ್ತಿದ್ದರು.

ಆದುದರಿದ ಪುಸ್ತಕ ಓದಿ ಔಷಧ ಕೊಡುವ ವೈದ್ಯರನ್ನು ರೋಗಿಗಳು ಕೀಳಾಗಿ ನೋಡ ಬಾರದು.

ಈ ವಿಷಯದಲ್ಲಿ ಡಾ ಮಣಿ ಯವರು ಅಮೇರಿಕಾ ದ ವೈದ್ಯರು ಬಳಸುವ   ಪಿಸಿಶಿಯನ್ಸ್ ಡೆಸ್ಕ್  ರೆಫರೆನ್ಸ್ ಎಂಬ 

ಪುಸ್ತಕ ಉತ್ತಮ , ನಿಮಗೆ ಅದು ಸಿಗದಿದ್ದರೆ ನನ್ನಲ್ಲಿಗೆ ಬನ್ನಿರಿ ನಾನು ಕೊಡುತ್ತೇನೆ ಎಂದು ಹೇಳುತ್ತಿದ್ದರು.

ಪುಸ್ತಕದ ಅಂಗಡಿಗಳಲ್ಲಿ  ಹುಡುಕಿದರೆ  ಔಟ್ ಆಫ್ ಸ್ಟಾಕ್ ಆಗಿತ್ತು. ನಾನು ನೇರ ವಾಗಿ ಅಪೊಲೊ ಆಸ್ಪತ್ರೆಯಲ್ಲಿ 

ಅವರನ್ನು ಸಂದಿಸಿದಾಗ ತುಂಬು ಸಂತೋಷದಿಂದ  ಆ ಹೊತ್ತಿಗೆಯ ಪ್ರತಿ ಯೊಂದನ್ನು ಕೊಟ್ಟರು.

ಹೃದಯಾಘಾತದಿಂದ ಚೇತರಿಸಿ ಈಗ ಮೊದಲಿನಷ್ಟು  ಕ್ರಿಯಾಶೀಲ ರಾಗಿ ಇಲ್ಲ ದಿದ್ದರೂ ಕಿಡ್ನಿ ಕಾಯಿಲೆ ತಡೆಗಟ್ಟುವ 

ಸಮೂಹ ಕಾರ್ಯಕ್ರಮ ದಲ್ಲಿ ತೊಡಗಿಸಿ ಕೊಂಡಿದ್ದಾರೆ.ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡ ಕಿಡ್ನಿ ವೈಫಲ್ಯಕ್ಕೆ 

ಪ್ರಮುಖ   ಕಾರಣ ಆಗಿರುವುದರಿಂದ ಅವುಗಳ ಹತೋಟಿಗೆ ಕಡಿಮೆ ವೆಚ್ಚದ ಔಷಧಿಗಳನ್ನು ಪ್ರಚುರ 

ಪಡಿಸುತ್ತಿದ್ದಾರೆ.

ಇವರ  ಜೀವನ ಚರಿತ್ರೆಯ ಹೆಸರು ( ಯಮ ಧರ್ಮಾಸ್  ಬ್ರದರ್ ಪ್ರ; ಭಾರತೀಯ ವಿದ್ಯಾ ಭವನ ).ಸಂಸ್ಕೃತದಲ್ಲಿ 

ಒಂದು ಶ್ಲೋಕವಿದೆ. ವೈದ್ಯ ರಾಜ ನಮಸ್ತುಭ್ಯಂ ಯಮ ರಾಜ ಸಹೋದರ ,ಯಮಂ ಹರತಿ  ಪ್ರಾಣ ನಿ  ,ವೈದ್ಯಂ ಪ್ರಾಣ೦ 

ಧನಾ೦ಚ 'ಎಂದರೆ  ' ಯಮಧರ್ಮನ ಸೋದರ  ವೈದ್ಯ ರಾಜನಿಗೆ ನಮಿಸುವೆ ,ಯಮನು ಪ್ರಾಣ ಮಾತ್ರ 

ಅಪಹರಿಸಿದರೆ  ನೀನು ಪ್ರಾಣ ಮತ್ತು ಹಣ ಎರಡನ್ನೂ  ತೆಗೆದುಕೊಂಡು ಹೋಗುವೆ!'

ಬುಧವಾರ, ಜುಲೈ 3, 2013

ಪ್ಯಾಂಕ್ರಿಯಾಟಿಟಿಸ್ ಎಂಬ ಕಾಯಿಲೆಯು

ಹೊಟ್ಟೆ ನೋವು ಎಲ್ಲ  ಗ್ಯಾಸ್ಟ್ರಿಕ್ ಅಲ್ಲ 

ಹೊಟ್ಟೆಯ ಮೇಲಿನ ಭಾಗದಲ್ಲಿ ನೋವು ಬಂದರೆ  ಗ್ಯಾಸ್ಟ್ರಿಕ್ ಎಂದು ತಿಳಿಯುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಬೇರೆ 

ಗಂಭೀರ ಕಾರಣಗಳೂ ಇರ ಬಹುದು . ಉದಾ;  ಹೃದಯಾಘಾತ , ಅಪ್ಪೆಂಡಿಸೈಟಿಸ್, ಪಿತ್ತ ಕೋಶದ ಸೋಂಕು  ಮತ್ತು 

ಪ್ಯಾಂಕ್ರಿಯಾಟಿಟಿಸ್ ಕಾಯಿಲೆ.


ಪೆನ್ಕ್ರಿಯಸ್   ಅಥವಾ  ಮೇದೋಜೀರಕ ಗ್ರಂಥಿ  ಬಹು ಮುಖ್ಯ ಅಂಗ.
                                                             

ಇದರಲ್ಲಿ ಎರಡು  ಭಾಗಗಳಿವೆ .ಒಂದು ನಿರ್ನಾಳ ಗ್ರಂಥಿ , ಸಕ್ಕರೆ  ಹತೋಟಿಯಲ್ಲಿ ಇದುವ  ಇನ್ಸುಲಿನ್ ಉತ್ಪಾದನೆ ಮಾಡಿ 

ನೇರ ರಕ್ತಕ್ಕೆ ಸೇರಿಸುತ್ತದೆ .ಇನ್ನೊಂದು ಸನಾಳ ಭಾಗ , ಇದು  ಪಚನ ಕ್ರಿಯೆಗೆ ಬೇಕಾದ ರಸಗಳನ್ನು ಉತ್ಪಾದಿಸಿ 

ನಳಿಕೆ ಮೂಲಕ ಸಣ್ಣ ಕರುಳಿಗೆ  ಹರಿಸುತ್ತದೆ.

ಕೆಲವೊಮ್ಮೆ  ಇಲ್ಲಿ ಉತ್ಪಾದನೆಯಾದ ಜೀರ್ಣ ರಸಗಳು ತಮ್ಮನ್ನು ಉಂಟು ಮಾಡಿದ  ಗ್ರಂಥಿಯನ್ನೇ ಜೀರ್ಣಿಸ ತೊಡಗುತ್ತವೆ 

ಭಸ್ಮಾಸುರನಂತೆ.  ಆಗ ಉಂಟಾಗುವುದು  ಪ್ಯಾಂಕ್ರಿಯಾಟಿಟಿಸ್ .

ರೋಗ ಕಾರಣಗಳು.  ಮದ್ಯಪಾನ ,ಪಿತ್ತ ಕೋಶ ಪಿತ್ತ ನಾಳದ ಕಲ್ಲು ಇವು ಮುಖ್ಯ ಕಾರಣಗಳು.ಇದಲ್ಲದೆ ಕೆಲವು ಔಷಧಗಳು 

,ಕೆಪ್ತೆ ಟೆರಾಯ ,ಅತಿಯಾಗಿ ಏರಿದ   ತ್ರಯಿಗ್ಲಿಸೆರಿಡ್ ,ಹಲವೊಮ್ಮೆ ಏನೂ ಕಾರಣವಿಲ್ಲದೆ .

ರೋಗ ಲಕ್ಷಣಗಳು.    ತೀವ್ರ ತರ  ಮೇಲ್ ಹೊಟ್ಟೆ ನೋವು , ವಾಂತಿ  ಮುಖ್ಯ ಲಕ್ಷಣಗಳು 

ತಪಾಸಣೆ  ; ರಕ್ತ  ಪರೀಕ್ಷೆ  ಯಲ್ಲಿ   ಅಮೈಲೆಸ್  ಮತ್ತು  ಲೈಪೆಸ್  ಎಂಬುವು ಹಲವು ಪಟ್ಟು ಏರಿರುತ್ತವೆ .

ಹೊಟ್ಟೆಯ ಸ್ಕ್ಯಾನ್ ಮಾಡಿದಾಗ   ಮೆದೋ ಜಿರಕ  ಗ್ರಂಥಿ  ಊದಿರುತ್ತದೆ , ಪಿತ್ತ ಕೋಶದ ಕಲ್ಲುಗಳಿದ್ದರೆ ಕಾಣ ಬಹುದು.

ಉದರದಲ್ಲಿ , ಶ್ವಾಸಕೋಶದ ಸುತ್ತ ನೀರು ತುಂಬಿರ ಬಹುದು.

ಚಿಕಿತ್ಸೆ ;  ಈ ಕಾಯಿಲೆಯು ಕೆಲವೊಮ್ಮೆ ಮಾರಣಾಂತಿಕ ವಾಗಬಹುದು .ಆದುದರಿಂದ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ 

ಚಿಕಿತ್ಸೆ ಮಾಡುವುದು ಉತ್ತಮ. ವೈದ್ಯರು ಹೊಟ್ಟೆ ನೋವನ್ನು ಶಮನ  ಮಾಡುವ ಔಷಧಗಳನು  ನೀಡುವರು. ರೋಗಿಗೆ 

ಬಾಯಿ ಮೂಲಕ ಏನನ್ನೂ ಕೊಡದೆ ರಕ್ತ ನಾಳಗಳ ಮೂಲಕ ಆಹಾರ ಕೊಡುವರು. ಇದರ ಉದ್ದೇಶ ಮೆದೊಜಿರಕ  ಗ್ರಂಥಿಗೆ 

ವಿಶ್ರಾಂತಿ ಕೊಡುವುದು. ಹೊಟ್ಟೆಗೆ ಆಹಾರ ತೆಗೆದು ಕೊಂಡರೆ ಜೀರ್ಣ ಕ್ರಿಯೆಗೆ ರಸಗಳನ್ನು ಉತ್ಪತ್ತಿ ಮಾಡ ಬೇಕಲ್ಲವೇ ?

ಈ ರಸ  ವಿಶೇಷಗಳೇ  ತಮಗೆ ಜನ್ಮವಿತ್ತ  ಅಂಗವನ್ನು  ಜೀರ್ಣಿಸಿ ಈ ಕಾಯಿಲೆ ಉಂಟು ಮಾಡಿದ್ದು.

ಹೆಚ್ಚಿನ  ರೋಗಿಗಳು  ಈ ಉಪಚಾರದಿಂದ ಗುಣ ಮುಖರಾಗುವರು. ಕೆಲವರಿಗೆ  ರೋಗೆ ಉಲ್ಬಣಿಸಿ ಅನಾಹುತ ಆಗಬಹುದು.

 




ಸೋಮವಾರ, ಜುಲೈ 1, 2013

ವೈದ್ಯರ ದಿನಾಚರಣೆ

ಇಂದು ವೈದ್ಯರ ದಿನ. ಖ್ಯಾತ ವೈದ್ಯ ರಾಜಕಾರಿಣಿ ,ಸ್ವಾತಂತ್ರ್ಯ ಹೋರಾಟಗಾರ  ಡಾ ಬಿ ಸಿ ರಾಯ್ ಅವರ ಜನ್ಮ ದಿನ


,ಹಾಗೂ  ಗತಿಸಿದ ದಿನವೂ.

                                   
ಬಿ.ಸಿ.ರಾಯ್.

ಈ ದಿನ ವೈದ್ಯ ಗಣದ ಸೇವೆಯನ್ನು ಸಮಾಜ ಸ್ಮರಿಸುತ್ತದೆ.

ದೇವರು ನಿಜವಾದ ವೈದ್ಯ.ಭಾವ ರೋಗ ನಿವಾರಕ ಎಂದು ಅವನನ್ನು ಕರೆಯುತ್ತಾರೆ.ಒಂದು ಶ್ಲೋಕ ಇದೆ.

'ಜರ್ಜರಿ  ಭೂತೆ  ಶರೀರೆ ವ್ಯಾದಿಗ್ರಸ್ತೆ ಕಳೆವರೆ  ,ವೈದ್ಯೋ ನಾರಾಯಣಾ ಹರಿ ಔಷಧಂ  ಜಾಹ್ನವೀ ತೋಯಂ '

ದೇಹವು ಕಾಯಿಲೆಯಿಂದ ಬಳಲಿದಾಗ  ನಿಜವಾದ ಡಾಕ್ಟರು  ಹರಿ ಮತ್ತು ಔಷಧ ಗಂಗಾ ಜಲ .ಈ ಶ್ಲೋಕವನ್ನು 

ಕೆಲವರು ವೈದ್ಯರೇ ದೇವರು ಎಂದು ಅರ್ಥೈಸುತ್ತಾರೆ ,ಅದು ಸರಿಯಲ್ಲ ಎಂದು ನನ್ನ ಭಾವನೆ.

ಖ್ಯಾತ ಚಿಂತಕ ವೋಲ್ತೈರ್  ಹೇಳುತ್ತಾನೆ -"  Doctors are men who prescribe medicines of which they know

 little, to cure diseases of which they know less, in human beings of whom they know nothing.  

ವೈದ್ಯರು ಗಳೆಂದರೆ  ಸ್ವಲ್ಪ ತಿಳಿದಿರುವ ಕಾಯಿಲೆಗೆ ಅಲ್ಪ ಸ್ವಲ್ಪ ತಿಳಿದಿರುವ ಔಷಧಿಯನ್ನು ಏನೂ ತಿಳಿದಿರದ ರೋಗಿಯ ಮೇಲೆ 

ಪ್ರಯೋಗಿಸುವವನು."

ಚಿಕತ್ಸೆ ಮಾಡುವವನು ವೈದ್ಯ ವಾಸಿ ಮಾಡುವವನು ದೇವರು. 

ಡಾಕ್ಟರ ಸೇತುರಾಮನ್ ಎಂಬವರು ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ ರಕ್ತ ಶಾಸ್ತ್ರ ಆರಂಬಿಸಿದವರು.ಮಹಾನ್ ಮೇಧಾವಿ .ಅಷ್ಟೇ ಸರಳ ಜೀವಿ 

ಅವರ ಬಳಿ ಒಂದು ಹಳೆಯ ಸ್ಕೂಟರ್. ಜೋಲು ಪ್ಯಾಂಟ್ ಮತ್ತು ಅಂಗಿ.ನಾನು  ಪೆರ೦ಬುರ್ ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ  ಪಿ.ಜಿ.ಗಳಿಗೆ ಕ್ಲಾಸ್ 

ತೆಗೆದು ಕೊಳ್ಳಲು ಬರುತ್ತಿದ್ದರು.ಡೌನ್ ಟು ಅರ್ಥ್ ಮ್ಯಾನ್.ಅವರು ವೈದ್ಯ ಶಾಸ್ತ್ರದ ವಿಶ್ವ ಕೋಶ ಆಗಿದ್ದರು.ತಮ್ಮ ಗುರು ಪ್ರೊಫ್ ಕೆ ವಿ 

ತಿರುವೆ೦ಗಡ೦ (ಇವರ ಬಗ್ಗೆ ನನ್ನ ಬ್ಲಾಗ್ ನಲ್ಲಿ ಬರೆದಿರುವೆ ) ಬಗ್ಗೆ ಬಾರಿ ಗೌರವ .ಯವಾಗಲೂ ವಾದ್ಯಾರು ಸೋಲ್ಲುವಾರು ವಾದ್ಯಾರ್ 

 ಸೋಲ್ಲುವಾರ್  ಎಂದು ತಮ್ಮ ಗುರುಗಳನ್ನು ನೆನೆಪಿಸಿ ಕೊಳ್ಳುವರು.

ಅದೇ ರೀತಿ ಡಾಕ್ಟರ್ ಗಿರಿ ಗೌಡ ಎಂಬ ಸರ್ಜರಿ ಪ್ರೊಫೆಸ್ಸರ್  ಕೆ ಎಂ ಸಿ ಹುಬ್ಬಳ್ಳಿಯಲ್ಲಿ ಇದ್ದರು .ಬಾರೀ ಜನಪ್ರಿಯ ಅಧ್ಯಾಪಕ.ಅವರು 

ತರಗತಿ  ಆರಂಭದಲ್ಲಿ ತಮ್ಮ ಗುರುಗಳಾದ ಪ್ರೊಫ್. ಆರ್ ಎಚ್ ಏನ್ ಶೆನೋಯ್ ,ಪ್ರೊಫ್ ಕೆ ಜಿ ನಾಯಕ್ ಅವರಿಗೆ ಮನಸಾರೆ ವಂದಿಸಿ 

ತೊಡಗುತ್ತಿದ್ದರು .

ಮೇಲೆ ಹೆಸರಿಸಿದ ವೈದ್ಯರು ತಮ್ಮ ವೃತ್ತಿಯಿಂದ  ಹಚ್ಚು ಹಣ ಮಾಡಿದವರಲ್ಲ .ಈಗಿನ ಮಾಪನದಲ್ಲಿ ಅವರು ಯಶಸ್ವೀ ವೈದ್ಯರಲ್ಲದಿರ ಬಹುದು.

ಆದರೆ ಈ ಪವಿತ್ರ ವೃತ್ತಿಗೆ ಗೌರವ ಉಳಿದಿದ್ದರೆ ಅಂತರಿಂದ . ಅಂತಹವರು ಬಹಳ ಮಂದಿ ಇದ್ದಾರೆ.ರಾಜ್ಯೋತ್ಸವ ಪ್ರಸಸ್ತಿ. ಗೌರವ ಡಾಕ್ಟರೇಟ್ 

ಪದ್ಮಶ್ರೀ ಭೂಷಣ ಇವರ ಬಳಿ ಬಂದಿರದು .


ಎಂದರೋ ಮಹಾನು ಭಾವುಲು ಅಂದರಿಕಿ ವಂದನಮುಲು 





ಭಾನುವಾರ, ಜೂನ್ 30, 2013

ನನ್ನ ಹಳ್ಳಿಗೆ ನಾನೊಂದು ಕನಸಾದೆ

                                                       
I am a dream to my village ಇದು ನಾನು ಈಗ ತಾನೇ ಓದಿ ಬದಿಗಿರಿದ ಪುಸ್ತಕ .ಇದರ ಕರ್ತೃ  ಕೆನ್ನೆತ್ ಆರ್

ಲಲ್ಲ .ಟ್ರಿನಿಡಾಡ್ ನಾಡಿನ ಹೆಸರಾಂತ ವಕೀಲರು.ಮಾಜಿ ಸಂಸದ್ ಸದಸ್ಯರು.ಇವರ ರೋಚಕ ಆತ್ಮಕತೆ.

ಭಾರತೀಯರು ಶತಮಾನಗಳ ಹಿಂದೆ ಫಿಜಿ ,ಮಾರಿಷಿಯಸ್ , ತ್ರಿನಿದಾದ್ ,ಸುರಿನಾಮ್ ಮತ್ತು ಆಫ್ರಿಕಾದ ದೇಶಗಳಿಗೆ ಹಡಗುಗಳಲ್ಲಿ

ಪಯಣಿಸಿ ಅರಿಯದ ಊರಿನಲ್ಲಿ ನೆಲೆ ಕಂಡು ತಮ್ಮ ಹೊಕ್ಕುಳ ಬಳ್ಳಿ ಕಳೆದುಕೊಂಡ ಕತೆಗಳ ಬಗ್ಗೆ ನನಗೆ ಕುತೂಹಲ.

ಬಿಹಾರದ ಧರ್ಬಾಂಗಾ ಪ್ರಾಂತದ ಬಲಭದ್ರ ದಾಸ್ ಮದ್ಯಮ ವರ್ಗದಲ್ಲಿ ಜನಿಸಿದ ಹುಡುಗ.ತಂದೆಯವರು ತೀರಿಕೊಂಡ ಪ್ರಯುಕ್ತ ಜಾಣ

ಹುಗುಗ ಎಂದು ಚಿಕ್ಕಪ್ಪನ ಮನೆಯಿಂದ ಶಾಲೆಗೆ ಹೋಗುತ್ತಿದ್ದ.ಒಂದು ಬಾರಿ ಹೋಂ ವರ್ಕ್ ಪುಸ್ತಕದಲ್ಲಿ ತಪ್ಪು ಬರೆದಿದ್ದ ಹುಡುಗ.ಅದನ್ನು

ವಿಚಾರಿಸಿದ ಚಿಕ್ಕಪ್ಪನಿಗೆ ಶಾಲೆಯಲ್ಲಿ ಅಧ್ಯಾಪಕರೇ ಹಾಗೆ ಹೇಳಿ ಕೊಟ್ಟುದಾಗಿ ಸುಳ್ಳು ಹೇಳುತ್ತಾನೆ.ಆದರೆ ಮರುದಿನ ಚಿಕ್ಕಪ್ಪ ಗುರುಗಳಲ್ಲಿ

ವಿಚಾರಿಸಿದರೆ ಮಾನ ಹೋಗುತ್ತದೆಯೆಂದು ಮನೆ ಬಿಟ್ಟು ಓಡಿ ಹೋಗುತ್ತಾನೆ.ರೈಲ್ವೆ ನಿಲ್ದಾಣದಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ 

ಹುಡುಗನನ್ನು ವಿದೇಶಗಳಿಗೆ ಕೂಲಿಗಳನ್ನೂ ಸರಬರಾಜು ಮಾಡುವ ದಲಾಲಿ ಪುಸಲಾಯಿಸಿ ಕಲ್ಕತ್ತಾ ನಗರಕ್ಕೆ ಕರೆದುಕೊಂಡು

ಹೋಗುತ್ತಾನೆ.ಅಲ್ಲಿ ಕೂಡಿಹಾಕಿದ್ದ ಇಂತಹ ಅನೇಕರನ್ನು ಹಡಗಿನ ಮೂಲಕ ತ್ರಿನಿದಾದ್ ನಾಡಿಗೆ ರವಾನಿಸುತ್ತಾರೆ.ಗೊತ್ತು ಗುರಿ ಯಿಲ್ಲದ
                                                       
ನಾಡು .ತಮ್ಮ ಮನೆತನದ ಹೆಸರು ಕೆಡುವುದು ಬೇಡ ಎಂದು ತನ್ನ ಹೆಸರನ್ನುರಾಮ್ ಭಾಜೂ ಎಂದು  ಬದಲಾಯಿಸಿ ಕೊಡುತ್ತಾರೆ,

ತ್ರಿನಿದಾದ್ ನ ಕ್ಯಾಲಿಫೋರ್ನಿಯ ಪ್ರಾಂತ್ಯದ ಡೌ ಗ್ರಾಮದ ಕಬ್ಬಿನ ತೋಟದಲ್ಲಿ ಕೂಲಿ ಕೆಲಸಕ್ಕೆ ಹುಡುಗನನ್ನು ಹಾಕುತ್ತಾರೆ,ಮತ್ತೇನು


ಮಾಡುವುದು ಹಿಂತಿರಿಗುವಂತಿಲ್ಲ.ಅಲ್ಲಿಯೇ ಬೆಳೆದು ದೊಡ್ಡವನಾದ ರಾಮ್ ಭಾಜೂ ರಾಮ್ ಕಲ್ಯ ಎಂಬ ಬಿಹಾರಿ ಹುಡುಗಿಯನ್ನು


ಮದುವೆಯಾಗುತ್ತಾನೆ.ಕಾಂತ.,ಕವಾಲಿ(ಹುಡುಗಿ),ಮತ್ತು ರಾಮ್ ಶಾಂತ ಎಂಬ ಮೂರು ಮಕ್ಕಳಾದುವು.ದುರದ್ರುಸ್ತವಶಾತ್  ಪತ್ನಿ


ಮಕ್ಕಳನ್ನು ಬಿಟ್ಟು ಬೇರೆ ಯುವಕನೊಡನೆ ಓಡಿ ಹೋಗುತ್ತಾಳೆ.ರಾಮ್ ಭಾಜೂ ಪುನ ವಿವಾಹ ವಾಗದೆ ಮಕ್ಕಳನ್ನು ಸಲಹುತ್ತಾನೆ,ಓಡಿ

ಹೋದವಳನ್ನು ನಿಂದಿಸಲಿಲ್ಲ.(ಮಾಸ್ತಿಯವಯ ಕಟ್ಟಿಗೆಯನ ಕತೆ ನೆನಪಿಸುತ್ತದೆ.)
ಈ ಮಕ್ಕಳ ಪೈಕಿ ರಾಮ್ ಶಾಂತ ನೆ ಚಿಕ್ಕವನು.ತಾಯಿಯ ಆರೈಕೆ ಕಂಡವನಲ್ಲ .ಹುಡುಗನಾಗಿ ಕಬ್ಬಿನ ತೋಟ ,ಸಕ್ಕರೆ ಕಾರ್ಖಾನೆ ಗಳಲ್ಲಿ


ಕೆಲಸ.ತಂದೆಯವರಿಂದ ಉತ್ತಮ ಸಂಸ್ಕಾರ.ಕಳ ಬೇಡ ,ಹುಸಿಯ ನುಡಿಯಲು ಬೇಡ ದೇವರನ್ನು ನಂಬು ,ನಂಬಿ ಕೆಟ್ಟವರಿಲ್ಲ ,ಜೀವ

ಹೋದರೂ ಸರಿ ಚಾರಿತ್ರ್ಯ ಕೆಡಿಸಿಕೊಳ್ಳದೆ ಇರು ಇವು ತಂದೆ ಯವರು ತೋರಿದ ದಾರಿ .


ರಾಮ್ ಭಾಜೂ ಅಸೌಖ್ಯ ದಿಂದ ತೀರಿಕೊಂಡ ಮೇಲೆ ಕಿರಿಯ ರಾಮ ಶಾಂತ ದಿಕ್ಕಿಲ್ಲದವನಾಗಿ ಬಿಡುತ್ತಾನೆ.ಆಗ ಬರುತ್ತಾಳೆ ಗಾಡ್

ಮದರ್ .ಈಕೆ ಮನೆ ಕೆಲಸಕ್ಕೆ ನಗರಕ್ಕೆ ಹುಡುಗನ್ನು ಒಯ್ಯುತ್ತಾಳೆ.ಅಲ್ಲಿ ಮಗನಂತೆ ನೋಡಿ ಕೊಂಡು ಶಾಲೆಗೆ ಸೇರಿಸುತ್ತಾಳೆ.



ಶಾಲೆಯಲ್ಲಿ ಹೆಸರು ಕೆನ್ನೆತ್ ಲಲ್ಲ ಎಂದು ದಾಖಲಿಸುತ್ತಾರೆ.ಕೆನ್ನೆತ್ ಆದರೂ ಹಿಂದೂ ಧರ್ಮ ಬಿಡುವುದಿಲ್ಲ .ಮುಂದೆ ಇಂಗ್ಲಂಡ್ ಗೆ ತೆರಳಿ


ಬ್ಯಾರಿಸ್ಟರ್ ಪದವಿ ಗಳಿಸಿ ಕ್ರಮೇಣ ಹೆಸರಾಂತ ವಕೀಲ ರಾಗಿ , ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ.ದೇಶದ ಅಧ್ಯಕ್ಷರಾಗುವ

ಯೋಗ ಕೂದಲ ಎಳೆಯಲ್ಲಿ ತಪ್ಪುತ್ತದೆ.
                                                   
ಮುಂದೆ ತಮ್ಮ ಪೂರ್ವಜರ ನಾಡಿಗೆ ಬೇಟಿ ನೀಡುತ್ತಾರೆ.ಮನೆಯವರನ್ನು ಕಾಣುವ ಭಾಗ್ಯ ಸಿಗುವುದಿಲ್ಲ
.
ಇದು ಕೆನ್ನೆತ್ ಲಲ್ಲಾ ರ ಕತೆ,ಇದು ಶಿವನರೈನ್ ಚಂದ್ರ ಪಾಲ್ .ರೋಹನ್ ಕೆನ್ನಾಯ್ ಅವರ ಕತೆ ಆಗ ಬಹುದು.

ಬಾಲಂಗೋಚಿ.:ಈ ಪುಸ್ತಕವನ್ನು ಪ್ರಕಟಿಸಿದವರು ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಅವರು.ಈಗ ನೀವು ಏನ್ ಬಿ ಟಿ ಯ

ಪುಸ್ತಕಗಳನ್ನು ಆನ್ಲೈನ್ ತರಿಸಿಕೊಳ್ಳ ಬಹುದು.ಒಳ್ಳೆಯ ಮಕ್ಕಳ ಪುಸ್ತಕಗಳು ಇವೆ.ಇವರ ಸೇವೆ ಉತ್ತಮವಾಗಿದೆ.

ಈ  ಪುಸ್ತಕದಲ್ಲಿ ಗೋಯಿಂಗ್ ಔಟ್ ಡ್ರೆಸ್ ಎಂಬ  ಶಬ್ದ ಬರುತ್ತದೆ.ನಮ್ಮಲ್ಲೂ  ಹೊರಗೆ ಹೋಗುವ ಉಡುಪು ಎಂದು ಇರುತ್ತಿತ್ತು.ನೆಂಟರ

ಮನೆಗೆ ಹೋಗುವಾಗ ,ಮದುವೆ ಸಮಾರಂಭಗಳಿಗೆ ಮಾತ್ರ ಮಿಸಲಿದ್ದ ಡ್ರೆಸ್.ಇದನ್ನು ಜಿರಳೆ ಗುಳಿಗೆಗಳ ರಕ್ಷಣೆಯಲ್ಲಿ ಟ್ರಂಕ್ ನಲ್ಲಿ

ಇಸ್ತ್ರಿ ಯಿಲ್ಲದೆ ಮಡಿಸಿ ಇಡುತ್ತಿದ್ದರು.ಅದರ ವಾಸನೆ (ಪರಿಮಳ?) ಮತ್ತು ಜನ ತುಂಬಿದ ಬಸ್ಸಿನ ಯಾತ್ರೆ ಸೇರಿ ಉಡುಪಿನ ಮೇಲೆ

ವಾಂತಿಯ  ಸಿಂಚನ ಆಗುತ್ತಿತ್ತು.

ಬುಧವಾರ, ಜೂನ್ 26, 2013

ಹೃದಯ ಕಾಯಿಲೆಯಲ್ಲಿ ದಮ್ಮು ಕಟ್ಟುವುದು ಯಾಕೆ ?

ದಮ್ಮು  ಕಟ್ಟುವುದೆಲ್ಲಾ  ಬ್ರೊಂಕಿಯಲ್ ಅಸ್ತಮ ಅಲ್ಲ. ಹೃದಯ  ಕಾಯಿಲೆಯಲ್ಲೂ ದಮ್ಮು ಬರುತ್ತದೆ. ಹೃದಯದ ಕೊರೋನರಿ

ರಕ್ತನಾಳ ಗಳು  ಕೊಬ್ಬು ತುಂಬಿ ಒಳಗೆ ಸಪುರವಾದಾಗ ಹೃದಯದ ಮಾಂಸ ಖಂಡ ಗಳಿಗೆ  ರಕ್ತ ಸಂಚಾರ ಕಡಿಮೆಯಾಗುತ್ತದೆ.

ವಿಶ್ರಾಂತ ಸ್ತಿತಿಯಲ್ಲಿ ಎಲ್ಲಾ ಸರಿಯಿದ್ದರೂ  ಕಷ್ಟದ ಕೆಲಸ ಮಾಡುವಾಗ ,ಏರಿ ಏರುವಾಗ ,ಓಡುವಾಗ ಬೇಕಾದ ಹೆಚ್ಚಿನ ರಕ್ತ --

ಮತ್ತು ಅದರ ಮೂಲಕ ಆಮ್ಲಜನಕ ಸಿಕ್ಕದಿದ್ದರೆ  ಎದೆ ನೋವು ಅಥವಾ ದಮ್ಮು ಕಟ್ಟಿದ ಅನುಭವ ಆಗುವುದು.



ಇನ್ನೊಂದು ಕಾರಣ ಶ್ವಾಶಕೊಶದಲ್ಲಿ  ನೀರು ತುಂಬುವುದು.ನಿಮಗೆ ತಿಳಿದಂತೆ ದೇಹದ  ಸಕಲ ಮೂಲೆಗಳಿಂದ ಅಶುದ್ದ ರಕ್ತ

ಅಭಿಧಮನಿಗಳ ಮೂಲಕ ಹೃದಯದ ಬಲ ಬಾಗ ಕ್ಕೆ  ಬಂದು ಅಲ್ಲಿಂದ  ಶುದ್ದೀಕರಣ ಕ್ಕಾಗಿ  ಶ್ವಾಶಕೊಶಗಳಿಗೆ

ರವಾನಿಸಲ್ಪಡುತ್ತದೆ.ಅಲ್ಲಿಂದ ಶುದ್ದ ರಕ್ತ  ಎಡ ಭಾಗದ ಹೃದಯಕ್ಕೆ ಬಂದು ದೇಹದ ಎಲ್ಲಾ ಮೂಲೆಗಳಿಗೆ ಪಂಪ್

ಮಾಡಲ್ಪಡುತ್ತದೆ. ಈಗ ಹೃದಯಾಘಾತವಾಗಿ ಎಡ ಹೃದಯದ ಮಾಂಸ ಖಂಡಗಳು ಕಾರ್ಯ ವಿಮುಖವಾದರೆ

ಅವು ರಕ್ತವನ್ನು ಹೊರಕಳಿಸಲು  ಸಾಧ್ಯವಾಗುವುದಿಲ್ಲ .ಇದರಿಂದ ಶ್ವಾಸಕೋಶದಿಂದ ರಕ್ತವನ್ನು ಸ್ವೀಕರಿಸಲು ಸ್ಥಳಾವಕಾಶ

ಕಡಿಮೆಯಾಗಿ ಅದು ಶ್ವಾಶ ಕೋಶದಲ್ಲಿ ಉಳಿದು  ತೀವ್ರ ತರದ ದಮ್ಮು ಉಂಟು ಮಾಡುತ್ತದೆ.ಇದನ್ನು  ವೈದ್ಯಕೀಯ

ಭಾಷೆಯಲ್ಲಿ ಪಲ್ಮನರಿ  ಎಡಿಮ  ಎಂದು ಕರೆಯುತ್ತಾರೆ.ಈ ಸಂಧರ್ಭದಲ್ಲಿ  ಆಮ್ಲಜನಕ ,ಶರೀರದಿಂದ  ನೀರು ಮೂತ್ರ ರೂಪದಲ್ಲಿ

ಹೋಗಲು  ಮತ್ತು ಅಭಿದಮನಿಗಳನ್ನು ಹಿಗ್ಗಿಸಿ ಅವು ಹೃದಯಕ್ಕೆ ತರುವ ರಕ್ತದ ಪ್ರಮಾಣ ಕಮ್ಮಿ ಮಾಡುವ  ಔಷಧ ಕೊಟ್ಟು

ಶಮನ ಸಿಗುವಂತೆ ಮಾಡುತ್ತಾರೆ.


ಮಂಗಳವಾರ, ಜೂನ್ 25, 2013

ಹೃದಯಾಘಾತ

ಹೃದಯ ದೇವರು  ನಿರ್ಮಿಸಿದ ಅದ್ಬುತ  ಪಂಪ್.ದೇಹದ ಎಲ್ಲಾ ಜೀವಕೋಶಗಳಿಗೆ ಆಹಾರ ಮತ್ತ್ತು ಆಮ್ಲಜನಕ ಸರಬರಾಜು

ಮಾಡುವುದಲ್ಲದೆ ಅಶುದ್ದ್ದ ರಕ್ತವನ್ನು ಸ್ವೀಕರಿಸಿ ಸ್ವಾಶಕೊಶಕ್ಕೆ ಶುದ್ದೀಕರಣಕ್ಕಾಗಿ ಕಳುಸಿಸಿ  ಕೊಡುತ್ತದೆ.ಅದರಲ್ಲೂ ಮೆದುಳಿನ 

ಜೀವಕೋಶಗಳು ಬಹಳ ಸೂಕ್ಷ್ಮ .ಕೆಲ ನಿಮಿಷಗಳ ರಕ್ತ ಸರಬರಾಜು ನಿಂತರೂ ಅವು ಸತ್ತು ಹೋಗುವವು.ಆದುದರಿಂದ

 ಯಾವುದೇ ವಿಶ್ರಾಂತಿ ಇಲ್ಲದೆ ಕೆಲಸ ಮಾಡುವ ಅಂಗ ಹೃದಯ. ಈ ಹೃದಯಕ್ಕೂ ರಕ್ತ ಸರಬರಾಜು ಬೇಕು. ಅದಕ್ಕೆಂದೇ 

ಮಹಾ ಅಪಧಮನಿ (ಅಯೋರ್ತ) ದಿಂದ ಉದ್ಭವಿಸುವ   ಕೊರೋನರಿ ರಕ್ತ ನಾಳಗಳು  ಹೃದಯದ ಮಾಂಸ ಖಂಡಗಳಿಗೆ 

ಬೇಕಾದ ಆಹಾರ ಮತ್ತು  ಆಮ್ಲಜನಕ ಒದಗಿಸುತ್ತವೆ. ಡಿಸೇಲ್  ಟ್ಯಾಂಕರ್  ಲಾರಿ ಗೆ  ಇಂಧನ ಒದಗಿಸಲು ಬೇರೆ  ಟ್ಯಾಂಕ್ 

ಇದೆಯಲ್ಲವೇ?
                                                           
ಹೃದಯದ ರಕ್ತ ನಾಳಗಳು.
ಬಲ ಮತ್ತು ಎಡ  ಎಂಬ ಎರಡು ಮುಖ್ಯ ನಾಳಗಳು ,ಎಡದ ಹೃದಯದ ಮಾಂಸ ಖಂಡಗಳು ಹೆಚ್ಚು 

ಕೆಲಸ ಮಾಡುವುದರಿಂದ ಎಡದ ರಕ್ತನಾಳ  ದೊಡ್ಡದಿದ್ದು ಎರಡು ಮುಖ್ಯ ಕವಲು ಗಳಾಗಿ  ಒಡೆಯುತ್ತದೆ.

ಇವು ಮೂರು ಮುಖ್ಯ ರಕ್ತನಾಳಗಳು. ಇವುಗಳು ಬ್ಲಾಕ್ ಆದಾಗ ಸಿಂಗಲ್ ವೆಸ್ಸೆಲ್  ಬ್ಲಾಕ್ , ಡಬ್ಬಲ್ ಮತ್ತು ಟ್ರಿಪಲ್ 

ವೆಸ್ಸೆಲ್ ಬ್ಲಾಕ  ಎಂದು ವೈದ್ಯರು ಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ರಕ್ತನಾಳ ಕ್ಕೆ  ಬ್ಲಡ್ ವೆಸ್ಸಲ್ ಎಂದೂ ಕರೆಯುತ್ತಾರೆ.

ಈ ಕೊರೋನರಿ  ರಕ್ತನಾಳ ಗಳ ಒಳಗೆ  ಕೊಲೆಸ್ತೆರೋಲ್ ಮತ್ತು ಕೊಬ್ಬಿನ ಅಂಶ ಕುಳಿತು ರಕ್ತ ಸಂಚಾರಕ್ಕೆ 

ತಡೆಯುಂಟು ಮಾಡಿದರೆ ಹೃದಯ ದ ಮಾಂಸ ಖಂಡಗಳು ನೋವಿನಿಂದ  ಕೂಗುತ್ತವೆ. ಆ ಕೂಗೆ ಎದೆ ನೋವು.

ಹೃದಯ ಸಂಬಂದಿ ಎದೆ ನೋವು. ಈ ನೋವು  ಎದೆಯ ಮಧ್ಯ ಭಾಗದಲ್ಲಿ ಒತ್ತಿದಂತ  ಅನುಭವ , ಎಡದ ಕೈಗೂ 

ನೋವು ಪಸರಿಸ ಬಹುದು.  ರಕ್ತನಾಳ ಪೂರ್ಣವಾಗಿ ಬ್ಲಾಕ್  ಆದರೆ  ಅದನ್ನು ಅವಲಂಬಿಸಿಸುವ ಹೃದಯದ 

ಮಾಂಸ ಖಂಡಗಳು ಉಪವಾಸದಿಂದ ಸಾಯುತ್ತವೆ. ಇದನ್ನ್ನುರ್ ಮಯೊ ಕಾರ್ಡಿಯಲ ಇನ್ಫಾರ್ಕ್ಶನ್  ಅಥವಾ 

ಹೃದಯಾಘಾತ  ಎಂದು ಕರಯುತ್ತಾರೆ.ಇದು ತಿವ್ರವಾಗಿದ್ದರೆ ಮೆದುಳಿಗೆ ರಕ್ತ ಇಲ್ಲದೆ ವ್ಯಕ್ತಿ ಸಾವನ್ನು ಅಪ್ಪುವನು.

ಸಕ್ಕರೆ ಕಾಯಿಲೆ ಇರುವ ರೋಗಿಗಳಲ್ಲಿ ನರಗಳು  ಭಾದಿಸಲ್ಪತ್ತಿರುವುದರಿಂದ  ಅವರಿಗೆ ಉಳಿದವರಂತೆ ಎದೆ ನೋವು 

ಬಾರದಿರಬಹುದು.ಹೃದಯದ  ಅಡಿ ಭಾಗ ದ  ರಕ್ತನಾಳ ಗಳು ಮುಚ್ಚಿದ್ದರೆ  ಹೊಟ್ಟೆ ನೋವು ಬರಬಹುದು. ಇದನ್ನು 

ಗ್ಯಾಸ್ಟ್ರಿಕ್ ಎಂದು ಉಪೇಕ್ಷಿಸಿ  ಅನಾಹುತ ಆದ ನಿದರ್ಶನ ಗಳಿವೆ,.

ಹೃದಯಾಘಾತ  ಯಾರಲ್ಲಿ ಬರುತ್ತದೆ?

ಸಕ್ಕರೆ ಕಾಯಿಲೆ , ಅಧಿಕ ರಕ್ತದ ಒತ್ತಡ  ಇರುವವರು, ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಉಳ್ಳವರು, ಧೂಮ 

ಪಾನಿಗಳು ,  ಶಾರೀರಿಕ  ವ್ಯಾಯಾಮ ಇಲ್ಲದವರು ಈ ಮಂದಿಯಲ್ಲಿ  ಹೃದಯಾಘಾತ ಹೆಚ್ಚು.ಇತ್ತೀಚಿಗಿನ 

ಉದ್ವೇಗದ ಜೀವನ ಶೈಲಿಯೂ ಕಾರಣ. ಗಂಡಸರಲ್ಲಿ ಇದು ಹೆಚ್ಚಾದರೂ ಮುಟ್ಟು ನಿಂತ ಮೇಲೆ  ಹೆಂಗಸರೂ 

ಇದಕ್ಕೆ ಹೊರತಲ್ಲ.

ಹಿಂದಿನ ಕಾಲದಲ್ಲಿ  ಹೃದಯಾಘಾತ ದಿಂದ  ಮರಣ ಹೊಂದಿದರೆ  ಭೂತ  ಪಿಶಾಚಿಗಳನ್ನ  ದೂರುತ್ತಿದ್ದರು.

ಅನಾಯಾಸೇನ ಮರಣಂ ಎಂದು ಬಯಸುವವರಿಗೆ  ಇದು ವರ ಪ್ರಸಾದ.

ಬುಧವಾರ, ಜೂನ್ 19, 2013

Rajaji"s Prophesy

While granting independence to India Sir Winston Churchill is said to have prophesied.


Power will go to the hands of Rascals, Rogues, Free loaders & Charlatans...


All Indian Leaders will be of low calibre & men of straw...

They will have Sweet Tongues & Silly Hearts...

Giving false promises will be their game with the poor & stupid masses...

They will be Shameless & Unpatriotic in their ways while handling problems of the people...

They will fight amongst themselves for power & India will be lost in political squabbles...

Justice will be a joke...

A day will come when Air, Water & even Common Salt will be taxed in India..."
Our own  Statesman Rajaji had in 1922 in his prison diary wrote:
'We all ought to know that Swaraj will not at once or ,I think ,even for a long time to come
bring better goverment or greater happiness fo people.Elections and their corruptions.injustice, and
the power and tyranny of wealth,and inefficiency of administration ,will make a hell of life as soon
as freedom is given to us.Men will look regretfully back to the old regime of comparative justice
and efficient,peaceful,more or less honest administration.Only thing gained as race we wiil be
saved from dishonour and subordination.Hope lies only in unversal education by which right
conduct,fear of God and love will be developed among  citizens from childhood.It is only if we
succeed in this that Swraraj will mean happiness.Otherwise it will mean the grinding injustices
and tyranny of wealth.What a beautiful world it would be if everybody were just and God fearing
and realised the happiness of loving other!Yet ,there is more practical hope for ultimate
 consummation of ideal in India than elsewhere.