ಬೆಂಬಲಿಗರು

ಶನಿವಾರ, ಮಾರ್ಚ್ 9, 2013

BLOGS CARNATIC MUSIC LOVERS MUST VISIT

Dear friends please visit these sites if you are not already following them.Salute these bloggers efforts they take to share the joy of music.

www.sangeethapriya.org
anuradhamahesh.wordpress.com/
prakasharashmi.blogspot.com/
arvindsdad.blogspot.com

ಎಂದರೋ ಮಹಾನುಬಾವುಲು

ಎಂದರೋ ಮಹಾನುಬಾವುಲು
ತ್ಯಾಗರಾಜರ ಪ೦ಚರತ್ನ ಕೀರ್ತನೆಗಳಲ್ಲಿ ಒ೦ದು. ಕೇರಳದ ಪ್ರಸಿದ್ಧ ಸ೦ಗೀತ ಗಾರ ಷಡ್ಕಲ ಗೊವಿ೦ದನ್ ಮಾರಾರ್ ಅವರ ಹಾಡುಗಾರಿಕೆ ಆಲಿಸಿ ಈ ಕೃ ತಿ ಅವರನ್ನು ಉದ್ದೇಶಿಸಿ ರಚಿಸಿದರೆ೦ಬ ಪ್ರತೀತಿ. ಇದನ್ನು ಶ್ರೀ ರಾಗದಲ್ಲಿ ಹಾಡುತ್ತಾರೆ. ಕನ್ನಡ ಭಾವಾರ್ಥ ಹೀಗಿದೆ

ಮಹಾನುಭಾವರೆನಿತೋ ಮ೦ದಿ ಅವರೆಲ್ಲರಿಗೆ ವ೦ದನೆಗಳು
ಚ೦ದಿರನ೦ತಹ ಸು೦ದರ ರೂಪಿ ದೇವನ  ಹೃದಯ ಮ೦ದಿರದಿರಿಸಿ ಆನ೦ದಿಪರವರು
ಸಾಮಗಾನ ಪ್ರಿಯನ ಪೂಜಿಪರು
ಮನವನನುಗೊಳಿಸಿ ಮನಸಿಜನ೦ದದ ದೇವನ ಪೂಜಿಪರು
ನಿನ್ನ ಅಡಿದಾವರೆಗಳಲ್ಲಿ ಹೃದಯವ ಅರ್ಪಿಸಿದವರು
ಮನುಜಕುಲ ರಕ್ಷಕನೇ,ಸ್ವರ,ರಾಗ ,ಲಯವರಿತು ನಿನ್ನ ಪೊಗಳಿ ಪಾಡುವ ವವರು
ಹರಿ ಮಹಿಮೆಯ ರತ್ನಗಳ ಧರಿಪರು ಪ್ರೀತಿ ಪ್ರೇಮ ಗಳನೆ ಜಗಕೆ ತೋರು ವರು
ನಿನ್ನ ಸುಂದರ ನಡೆಯ ಕಂಡು ಹರುಶಗೊಲ್ಲುವರು
ಸೂರ್ಯ ಚಂದ್ರ ಸನಕ ಸನಾತನ,ದಿಕ್ಪಾಲಕರು,ದೇವರು,ಕಿಂಪುರುಷರು ,ಪ್ರಹ್ಲಾದ,ನಾರದ,ತುಂಬುರು,ಆಂಜನೇಯ,ಶಿವ,ಬ್ರಹ್ಮ,ಬ್ರಾಹ್ಮಣರು
ದೇವನ ಬ್ರಹ್ಮಪಾದ ಸ್ವರೂಪ ವ  ಆನಂದಿಸುವರು
ಇವರಲ್ಲದೆ ಇನ್ನೂ ಹಲವರಿಹರು ಅವರಿಗೆಲ್ಲ ವಂದನೆಗಳು
ನಿನ್ನ ರೂಪ ,ನಾಮ,ಶೂರತ್ವ ,ಪ್ರಶಾಂತ ಹೃದಯ ,ನಿಜ ನುಡಿಯ ಪೊಗಳುವರು
ಭಾಗವತ ರಾಮಾಯಣ ಗೀತೆ ಶ್ರುತಿ, ಶಾಸ್ತ್ರ , ೩೩ ಕೋಟಿ ದೇವರ
ಭಾವರಾಗ ತಾಳವರಿತವರು ಅವರು ಧೀರ್ಘ ಸುಖೀ ಜೀವನ ನಡೆಸುವರು
ತ್ಯಾಗರಜಪ್ರಿಯರುಭಕ್ತಿಯೋಳುನಿನ್ನ ನೆನೆವರು
ರಾಮ ಭಕ್ತರು,ತ್ಯಗರಾಜಾರಾಧಕರು,ನಿನ್ನ ಪೂಜಿಸುವರು

ಎಲೇ ಮರೆಯ ಕಾಯಿಯಂತೆ  ನಮ್ಮೊಳಗೆ ಇರುವ ಮಹಾನ್ ಮಹಾನ್ ಪ್ರತಿಭೆಗಳನ್ನೆಲ್ಲ ಉದ್ದೇಶಿಸಿ ರಚಿಸಿ ಹಾಡಿದ ಕೀರ್ತನೆ ಎನಿಸುತ್ತದೆ .
ಸಂಗೀತ  ಕ್ಷೇತ್ರ ದ  ಭೀಷ್ಮ  ಚೆಂಬೈ ಹಾಡಿದ  ಈ  ಕೃತಿಯ  ಲಿಂಕ್  ಕೆಳಗಿದೆ . ಮೂ ಲ  ಅಪ್ ಲೋಡರ್ ಗಳಿಗೆ  ವಂದಿಸಿwww.youtube.com/watch?v=35KbLo625jI

ಶುಕ್ರವಾರ, ಮಾರ್ಚ್ 8, 2013

ಮತ್ತದೇ ಬೇಸರ....!! ಕೆ. ಎಸ್. ನಿಸ್ಸಾರ್ ಅಹ್ಮದ್



ಮತ್ತದೇ ಬೇಸರ, ಅದೆ ಸಂಜೆ ಅದೆ ಏಕಾಂತ‌
ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ..
ಕಣ್ಣನೆ ದಣಿಸುವ ಈ ಪಡುವಣ ಬಾನ್ಬಣ್ಣಗಳು
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗಗಾನ‌
ಚಿನ್ನ ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ....
ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ‌
ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ‌
ಮುತ್ತಿದಾಲಸ್ಯದ ಬಿಗಿಮೌನವ ಹೊಡೆದೋಡಿಸು ಬಾ
ಮತ್ತೆ ಆ ಸಮತೆಯ ಹಿರಿಬೇಲಿಯ ಸರಿ ನಿಲಿಸು ಬಾ....


ಮೇಲಿನ ಹಾಡು  ಕವಿ ನಿಸಾರ್ ಅಹಮ್ಮದ್ ಅವರು ಹಿಂದಿಯ ಜನಪ್ರಿಯ ಗೀತೆ ಫಿರ್ ಓಹಿ ಶಾಮ್ ನಿಂದ ಸ್ಫೂರ್ತಿ ಗೊಂದು ಬರೆದದ್ದೆಂದು ಅವರೆ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರವೊಂದರಲ್ಲಿ ಅಳವಡಿಸಿದ ಈ ಗೀತೆ ನೋಡಿ ಕೇಳಿ  ಲಿಂಕ್ ಇಲ್ಲಿದೆ
www.youtube.com/watch?v=6o_TXXDnrXo

ಫ್ಹಿರ್ ವಹೀ ಶಂ ಹಾಡಿನ ಸಾಹಿತ್ಯ ಹೀಗಿದೆ

phir vohi shaam vahi gam vahi tanahaai hai
dil ko samajhaane teri yaad chali aai hai

phir tasavvur tere pahalu me bithaa jaaegaa
phir gayaa vaqt ghadi bhar ko palat aaegaa
dil bahal jaaegaa aakhir ye to saudaai hai
phir vohi shaam 

jaane ab tujh se mulaaqaat kabhi ho ke na ho
jo adhuri rahe vo baat kabhi ho ke na ho
meri mazil teri mazil se bichhad aai hai
phir vohi shaam 

phir tere zulf ke rukhasaar ki baate hogi
hijr ki raat magar pyaar ki baate hogi
phir muhabbat me tadapane ki qasam khaai hai
phir vohi shaam 
 
ಈ ಹಾಡನ್ನು ಇಂಗ್ಲಿಷ್ ಅನುವಾದ ಸಹಿತ ನೋಡಲು 
 
www.youtube.com/watch?v=GoSiqA-WAgI 
 
 
ಮೇಲಿನ ಹಾಡುಗಳನ್ನು ಅಪ್ಲೋಡ್ ಮಾಡಿದವರಿಗೆ ಧನ್ಯವಾದ. 

ಅರಣ್ಯೀಕರಣಕ್ಕೆ ಅಳಿಲ ಸೇವೆ :


ಏನಾದರು ಮಾಡುತಿರು ತಮ್ಮ; ಸುಮ್ಮನೆ ಕೂತು
ನೆಲಕೆ ಬರಿಭಾರವಾಗಬೇಡವೋ;ನೆಲದ
ಭಾರ ಕಳೆಯಲು ಹೀಗೆ ಮಾಡು ನೀ ಸರಿ, ಸಹಜ   
                        -   ಅಡಿಗ

ಅಂದಂದಿಗಾದನಿತು ಬುಡ ಕಟ್ಟಿ ಕಳೆ ತೆಗೆದು
ಚೆಂದಳಿರು ದಿನಮುಮೊಗೆಯೆ ನೀರೆರೆದು
ಸಂದ ಬಲದಿಂದ ಜಗzಶ್ವತ್ಥ ಸೇವೆಯಲಿ
ನಿಂದಿರುವುದೆ ಧರ್ಮ - ಮಂಕುತಿಮ್ಮ   
                          -ಡಿ.ವಿ.ಜಿ.


    ರೈಲ್ವೆ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ನನಗೆ ಮೈಸೂರಿನಿಂದ ಸಕಲೇಶಪುರಕ್ಕೆ ವರ್ಗವಾಗಿತ್ತು.  ಮೈಸೂರಿನ ಮಿತ್ರರನ್ನು ಬಿಟ್ಟು ಒಂಟಿಯಾಗಿ ಮಲೆನಾಡ ಪಟ್ಟಣಕ್ಕೆ ಬಂದ ನನಗೆ ಮಿಶ್ರ ಅನುಭವ.  ರೈಲ್ವೆ ಕಾಲನಿ ನಿಲ್ದಾಣದ ಹಿಂದಿನ ಗುಡ್ಡದಲ್ಲಿ ನಿರ್ಮಿಸಲ್ಪಟ್ಟಿತ್ತು.  ಎತ್ತರದಲ್ಲಿದ್ದ ಆರೋಗ್ಯ ಕೇಂದ್ರದಿಂದ ನೋಡಿದರೆ ಹೇಮಾವತಿ ನದಿಯ ಬಳಕು ನಡೆ ನಯನ ಮನೋಹರ.  ಆದರೆ, ಎಷ್ಟು ಹೊತ್ತು ಪ್ರಕೃತಿಯನ್ನು ಆಸ್ವಾದಿಸಿಕೊಂಡು ಕೂರುವುದು?  ಆರೋಗ್ಯ ಕೇಂದ್ರದ ಕೆಲಸ ನನ್ನಂತಹ ತರುಣನಿಗೆ ಬಹಳ ಕಡಿಮೆಯೆನಿಸುತ್ತಿತ್ತು.  ಸಾರ್ವಜನಿಕ ವಾಚನಾಲಯದಿಂದ ಪುಸ್ತಕಗಳನ್ನು ತಂದು ಓದುವುದು, ಸಂಜೆ ವೇಳೆ ಒಂದೊಂದು ರಸ್ತೆ ಗುಂಟ ನಡೆದು ಸಮಯ ಕಳೆಯುತ್ತಿದ್ದೆ.
    ರೈಲ್ವೆ ನಿಲ್ದಾಣದಿಂದ ಪಟ್ಟಣಕ್ಕೆ ಹೋಗುವ ರಸ್ತೆ ಕಡಿದಾದ ಏರು ಮಾರ್ಗ.  ವಯಸ್ಸಾದವರಿಗೂ ಹೃದ್ರೋಗಿಗಳಿಗೂ ನಡೆದು ಹೋಗುವ ದಾರಿಯಲ್ಲ.  ಈ ಗುಡ್ಡದಲ್ಲಿಯೇ ರೈಲ್ವೆ ನೌಕರರ ವಸತಿ ಗೃಹಗಳನ್ನು ನಿರ್ಮಿಸಲಾಗಿತ್ತು.  ನಿರ್ಮಾಣ ಕಾಲದಲ್ಲಿ ಅಲ್ಲಿದ್ದ ಗಿಡಮರಗಳೆಲ್ಲಾ ಮಾಯವಾಗಿ ಪಾರ್ಥೇನಿಯಂ ಮತ್ತು ಇತರ ಕಳೆಗಿಡಗಳು ಹುಲುಸಾಗಿ ಬೆಳೆದಿದ್ದವು.  ಬೇಸಿಗೆಯಲ್ಲಿ ರೈಲ್ವೇ ನಿಲ್ದಾಣದಿಂದ ನಗರಕ್ಕೆ ನಡೆದು ಹೋಗುವವರಿಗೆ ಕಿಂಚಿತ್ ನೆರಳೂ ಇಲ್ಲ.  ವಿಷಪೂರಿತ ಹಾವುಗಳ ಕಾಟ ಬೇರೆ.
    1985 ಜುಲೈ ವನಮೋತ್ಸವ ಮಾಸ.  ನನಗೊಂದು ಯೋಚನೆ ಹೊಳೆಯಿತು.  ನಿಲ್ದಾಣದ ಸಂಪರ್ಕದಾರಿಗುÀಂಟ ನೆರಳು ಕೊಡುವ ಮರಗಳ ಸಸಿ ನೆಡುವುದು.  ರೈಲ್ವೇ ಇಲಾಖೆಯಲ್ಲಿಯೂ  ಅರಣ್ಯೀಕರಣ ಯೋಜನೆ ಇಂಜಿನಿಯರಿಂಗ್ ವಿಭಾಗದಲ್ಲಿ ಇತ್ತು.  ಆದರೆ ಅವರ ಚಟುವಟಿಕೆ ರೈಲ್ವೇ ಹಳಿಗಳ ಪಕ್ಕದಲ್ಲಿರುವ ಇಲಾಖೆಯ ಖಾಲಿ ಜಾಗದಲ್ಲಿ ನೀಲಗಿರಿ ತೋಪು ನೆಡುವುದು.  ಅದು ನಮಗೆ ಬೇಡ.
    ನಾನು ಸಕಲೇಶಪುರ ಅರಣ್ಯ ಇಲಾಖೆಯನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಐವತ್ತು ಗಿಡಗಳಿಗೆ ಬೇಡಿಕೆಯಿಟ್ಟೆ.  ಅವರೋ ಯಾಂತ್ರಿಕವಾಗಿ ಅಷ್ಟೆಲ್ಲಾ ಒಬ್ಬರಿಗೇ ಕೊಡುವುದಕ್ಕೆ ಆಗದು, ಬೇಕಾದರೆ ಐದೋ ಹತ್ತೋ ತೆಗೆದುಕೊಳ್ಳಿ ಎನ್ನಬೇಕೇ?
    ಎದೆಗುಂದದೆ ದಕ್ಷಿಣ ಕನ್ನಡದ ನೆಟ್ಟಣದಲ್ಲಿರುವ ಅರಣ್ಯ ಇಲಾಖೆಯ ನರ್ಸರಿಯನ್ನು ಸಂಪರ್ಕಿಸಿದೆ.  ಅವರು ಉದಾರಿಗಳಾಗಿ ಬೇಕಾದಷ್ಟು ಸಸಿಗಳ ಪೂರೈಕೆ ಮಾಡಿದರು.  ಅವನ್ನೆಲ್ಲಾ ರೈಲಿನಲ್ಲಿ ಹಾಕಿ ಸಕಲೇಶಪುರಕ್ಕೆ ತಂದಾಯಿತು.
    ಆದರೆ, ಗಿಡಗಳನ್ನು ನೆಡುವುದಕ್ಕೆ ಮೊದಲು ಕಾಲನಿಯಲ್ಲಿದ್ದ ಕಳೆಗಿಡಗಳನ್ನು ತೆಗೆದು ನಾಶ ಮಾಡಬೇಕಲ್ಲಾ.  ಇದು ಇಲಾಖೆಯ ಕೆಲಸವಲ್ಲ.  ಒಂದು ವೇಳೆ ಆದರೂ ವೈದ್ಯಕೀಯ ವಿಭಾಗದವರು ಮಾಡುವ ಕಾರ್ಯ ಅಲ್ಲವೇ ಅಲ್ಲ.  ಅದಕ್ಕಾಗಿ ನಾನೇ ನಮ್ಮ ಆರೋಗ್ಯ ನಿರೀಕ್ಷರೊಡನೆ ಸೇರಿ ಶ್ರಮದಾನದಲ್ಲಿ ಪಾರ್ಥೇನಿಯಂ, ಲಂಟಾನ ಇತ್ಯಾದಿಗಳನ್ನು ಕಡಿಯುವ ಕಾರ್ಯ ಆರಂಭಿಸಿದೆ.  ಎಲ್ಲರಿಗೂ ಮೈಯಲ್ಲಿ ಸಹಿಸಲಾರದ ತುರಿಕೆ.
    ಕಾಲನಿಯಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ, ಮುಖ್ಯವಾಗಿ ಮಹಿಳೆಯರು ಈ ಗಿಡಕಂಟಿಗಳ ಮರೆಯನ್ನು ತಮ್ಮ ಬಹಿರ್ದೆಶೆಗೆ ಬಳಸಿಕೊಳ್ಳುತ್ತಿದ್ದುದರಿಂದ ಅವರಲ್ಲಿ ಅನೇಕರು ಬಂದು ನನ್ನಲ್ಲಿ ವಿರೋಧ ವ್ಯಕ್ತಪಡಿಸಿದರು.  ಅವರನ್ನು ಸಮಾಧಾನಪಡಿಸಿ, ಬದಲಿ ವ್ಯವಸ್ಥೆ ಮಾಡಿಕೊಡಲಾಯಿತು.  ನನ್ನ ಅಧಿಕಪ್ರಸಂಗಕ್ಕೆ ಅನೇಕರ ಟೀಕೆಗಳನ್ನು ಕೇಳಬೇಕಾಯಿತು.
    ಒಂದು ಭಾನುವಾರ ಮಚ್ಚು ಹಿಡದು ಕಳೆ ಕೊಯ್ಯುತ್ತಿದ್ದೆ.  ಶ್ಯೂ ಶ್ಯೂ ಎಂಬ ರೈಲ್ವೇ ಇಂಜಿನ್‍ನಿಂದ ಹೊರಡುವ ಹೊಗೆ ಶಬ್ದದಂತೆ ಪೊದೆಯಿಂದ ಸದ್ದಾಗಿ ಹಿಂದೆ ಸರಿದೆ.  ಪಕ್ಕದಲ್ಲಿದ್ದ ರೈಲ್ವೇ ಇಂಜಿನಿಯರ್ ಮನೆಯಲ್ಲಿ ಸಹಾಯಕ್ಕಿದ್ದ ಒಬ್ಬನನ್ನು ಕರೆದು ಅದೇನೆಂದು ನೋಡ ಹೇಳಿದೆ.  ಬಗ್ಗಿ ನೋಡಿದವನೇ ಭಯದಿಂದ ಹಿಂದೆ ನೆಗೆದ.  ಅದು ವಿಷಪೂರಿತ ಕೊಳಕು ಮಂಡಲ ಹಾವು.  ಶರೀರದಲ್ಲಿಯೂ ಆಜಾನುಬಾಹು.  ಅದನ್ನು ಹಲವರ ಸಹಾಯದಿಂದ ಮರ್ದಿಸಿ ದಹಿಸಲಾಯಿತು.  ಇಂತಹ ಹತ್ತು ಹನ್ನೊಂದು ಸರೀಸೃಪಗಳು ನಮ್ಮ ಯಜ್ಞಕ್ಕೆ ಬಲಿಯಾದವು.
    ಒಂದು ಒಳ್ಳೆಯ ದಿನ ಭಾನುವಾರ ನಮ್ಮ ವನಮಹೋತ್ಸವ ಕಾರ್ಯಕ್ರಮ ರೈಲ್ವೇ ಸ್ಟೇಶನ್ ರಸ್ತೆಯ ಇಬ್ಬದಿಯಲ್ಲಿ ಗಿಡ ನೆಡುವ ಮೂಲಕ ಆರಂಭಿಸಿದೆವು.  ರೈಲ್ವೆ ನಿಲ್ದಾಣಾಧಿಕಾರಿ ಸಮುದ್ರಯ್ಯ, ಆರೋಗ್ಯ ನಿರೀಕ್ಷಕ ಮುರುಗೇಶನ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.  ನಮ್ಮ ಸಿಬ್ಬಂದಿಯಲ್ಲಿ ಮಹಿಳೆಯರೇ ಅಧಿಕವಿದ್ದು, ನಿಮಯಗಳ ಪ್ರಕಾರ ನಮ್ಮ ವಿಭಾಗ[ವೈದ್ಯಕೀಯ]ದ ಕೆಲಸವಲ್ಲದಿದ್ದರೂ ಗಿಡಗಳಿಗೆ ಶ್ರದ್ಧೆಯಿಂದ ನೀರುಣಿಸಿದರು.  ನೀರನ್ನು ಕೊಡದಲ್ಲಿ ಹೊತ್ತು ಗುಡ್ಡ ಹತ್ತಿ ಹೊಯ್ಯುವುದು ಅಂತಹ ಸುಲಭದ ಮಾತೇನಲ್ಲ.  ನನ್ನ ಮೇಲಿನ ವಿಶ್ವಾಸದಿಂದ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾದ ಅವರನ್ನೆಲ್ಲ ನೆನೆದು ನನ್ನ ಹೃದಯ ಭಾರವಾಗುತ್ತಿದೆ.
    ಆ ಮೇಲೆ ನಾನು ವರ್ಗಾವಣೆಗೊಂಡು ಕೇರಳ, ತಮಿಳುನಾಡುಗಳಲ್ಲಿ ಕೆಲಸ ಮಾಡಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಬಂದು ಈಗ ಪುತ್ತೂರಿನಲ್ಲಿ ನೆಲಸಿದ್ದೇನೆ.  ಮೊನ್ನೆ ನನ್ನ ಪತ್ನಿ ಮತ್ತು ಮಗ ಹಗಲು ರೈಲಿನಲ್ಲಿ ಘಾಟಿ ಪ್ರದೇಶದ ಸೌಂದರ್ಯಾಸ್ವಾದನೆ ಪ್ರಯುಕ್ತ ಸಕಲೇಶಪುರಕ್ಕೆ ತೆರಳಿದ್ದಾಗ ನಾವು ನೆಟ್ಟ ಸಸಿಗಳು ಈಗ ಸದಾಕಾಲ ನೆರಳು ನೀಡುವ ಮರಗಳ ಫೋಟೋಗಳನ್ನು ಇಂದು ಕಾಣುತ್ತಿರುವಾಗ ಆದ ಸಂತೋಷವನ್ನು ನಿಮ್ಮಲ್ಲಿ ನಾನು ಹಂಚಿಕೊಳ್ಳುತ್ತಿದ್ದೇನೆ.

ಹಸಿರಿನಿಂದ ನಳನಳಿಸುತ್ತಿರುವ ರಸ್ತೆ ಬದಿಯಲ್ಲಿ ಇಂದು ಬೆಳೆದು ನಿಂತ ಮರಗಳು.





                                                                                                                                                                                          







* * *

ಗುರುವಾರ, ಮಾರ್ಚ್ 7, 2013

ಪುಸ್ತಕ ಕೊಳ್ಳುವುದು

ಪುಸ್ತಕ  ಕೊಂಡು  ಓದುವುದು ಒಳ್ಳೆಯ ಹವ್ಯಾಸ. ಕೊಳ್ಳಲಿರುವ ಕೃತಿ ಒಳ್ಳೆಯದಿದೆಯೋ ಇಲ್ಲವೋ ಎಂದು ಗೊತ್ತಾಗುವುದು ಹೇಗೆ?

ಪತ್ರಿಕೆಗಳಲ್ಲಿ ಬರುವ ವಿಮರ್ಶೆ ಗಳನ್ನು  ಓದುವುದು.ಇಂಗ್ಲಿಷ್ ಪುಸ್ತಕ ಗಳ ಬಗ್ಗೆ www.goodreads.com  ನಂತಹ ತಾಣಗಳಲ್ಲಿ ಓದಿ ಓದುಗರ ಅಭಿಪ್ರಾಯ ತಿಳಿಯ ಬಹುದು.ಕನ್ನಡದಲ್ಲೂ ಇತ್ತೀಚಿಗೆ http://www.chukkubukku.com/blog/posts

ಬ್ಲಾಗ್ ಹೊಸ ಪುಸ್ತಕಗಳ ಮಾದರಿ ಪುಟಗಳ ಓದುವ ಅವಕಾಶವನ್ನೂ ಮಾಡಿಕೊಡುತ್ತದೆ.ಈಗ ಕನ್ನಡ ಪುಸ್ತಕಗಳು  ಆನ್ ಲೈನಿನ್ನಲ್ಲೂ  ತರಿಸಿಕೊಳ್ಳುವ ಅವಕಾಶವಿದ್ದು  ಒಳನಾಡುಗಳಲ್ಲಿರುವರಿಗೆ ಅನುಕೂಲವಾಗಿದೆ. ಇವುಗಳಲ್ಲಿ  ಆಕೃತಿ ಬುಕ್ಸ  ಸಪ್ನಾ ಆನ್ಲೈನ್,ಗಳ (

ಸೇವೆ ಉತ್ತಮ. Flipkart ನಲ್ಲೂ  ಕನ್ನಡ ಪುಸ್ತಗಳು ಸಿಗುತ್ತವೆ. ಇನ್ನು ಐ ಬಿ ಎಚ್ , ಗೀತಾ ಬುಕ್ ಹೌಸ್ , ಮನೋಹರ ಗ್ರಂಥ

ಮಾಲಾ  ಆನ್ಲೈನ್ ಮಳಿಗೆಗಳನ್ನು ತೆರೆದಿವೆ.ನವಕರ್ನಾಟಕ  ಪ್ರಕಾಶನದವರು Flipkart ನೊಂದಿಗೆ ಒಡಂಬಡಿಕೆ ಮಾಡಿಕೊಂಡು

ತಮ್ಮ ಹೊತ್ತಿಗೆಗಳು ಅಲ್ಲಿ ಸಿಗುವ  ವ್ಯವಸ್ತೆ ಮಾಡಿದೆ.

ಇಂಗ್ಲಿಷ್  ಪುಸ್ತಕಗಳನ್ನು ಕೊಳ್ಳಲು ಬಯಸುವವರು  ಯಾವ  ಮಳಿಗೆಯವರು ಎಷ್ಟು ಇಳುವರಿ ಕೊಡುತ್ತಾರೆ೦ದು

ತಿಳಿದುಕೊಂಡು

ಆರ್ಡರ್  ಮಾಡ ಬಹುದು. ಅದಕ್ಕಾಗಿ  http://www.indiabookstore.net/  ನಲ್ಲಿ ನಮಗೆ ಬೇಕಾದ  ಪುಸ್ತಕದ ಹೆಸರು

ನಮೂದಿಸಿದರೆ ಆಯಿತು. ಯಾವ ಯಾವ ಅಂಗಡಿಯಲ್ಲಿ ಎಷ್ಟು ಕ್ರಯ ಎಂದು ಬರುತ್ತದೆ. ಮಳಿಗೆಯವರು  ಸಾಗಣೆ ವೆಚ್ಚ

ಉಚಿತವಾಗ ಬೇಕಿದ್ದರೆ ಇ೦ತಿಷ್ಟು  ಮೊತ್ತದ  ಖರೀದಿ ಬೇಕೆಂದು ತಿಳಿಸಿರುತ್ತಾರೆ. ಈ ಸೌಲಭ್ಯ  ಜಂಗಲೀ ಯಂತಹ ತಾಣದಲ್ಲೂ

 ಲಭ್ಯವಿದೆ. ಹೆಚ್ಚಿನ  ಅಂಗಡಿಯವರಲ್ಲಿ  ಕ್ಯಾಶ್ ಆನ್  ಡೆಲಿವರಿ  ಅಂದರೆ ಮೊದಲಿನ  ವಿ ಪಿ ಪಿ ಯಂತಹ ಸೌಲಭ್ಯ ಇದೆ.

ಇಲ್ಲವಾದಲ್ಲಿ  ಡೆಬಿಟ್ ಕಾರ್ಡ್ ಉಪಯೋಗಿಸಿ  ಪಾವತಿ ಮಾಡಬಹುದು.

ಪುಸ್ತಕ ಗಳೆಂದರೆ  ನನ್ನ  ಜೀವ ಸಂಗಾತಿಗಳು. ಆಟಿಗೆಗಳ ಅಂಗಡಿಗಳನ್ನು ಕಂಡ ಮಕ್ಕಳ ಕಣ್ಣು ಕಾಲುಗಳು ಅತ್ತ  ಓಡುವಂತೆ

ಈಗಲೂ  ಆರ೦ಕುಶ ವಿಟೊಡ೦ ಓಡುವುದೆನ್ನ ಕಾಲುಂ. ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕ ಪ್ರದರ್ಶನ ಮಾರಾಟ ಇರುತ್ತದೆ.

ಇಂತಹ ಸಂದರ್ಭದಲ್ಲಿ  ನಾನು ಮೊದಲು ಎಲಾ ಮಳಿಗೆಗಳಿಗೂ ಭೇಟಿ ನೀಡಿ ನಾನು ಕೊಳಹುದಾದ ಪುಸ್ತಕಗಳ ಪಟ್ಟಿ

ಮಾಡುತ್ತೇನೆ  ಆ ಮೇಲೆ ನನ್ನ ಬಜೆಟ್ ಗೆ ಅನುಗುಣ ವಾಗಿ  ಅದನ್ನು ಪರಿಷ್ಕರಿಸಿ ಎರಡನೇ ಸುತ್ತಿನಲ್ಲಿ  ಖರೀದಿ ಮಾಡುತ್ತೇನೆ.

 ಹುಬ್ಬಳ್ಳಿಯ ಸಾಹಿತ್ಯ ಭಂಡಾರ ,ಹಾಸನ ದ ಜಯಂತ ಬುಕ್ ಹೌಸ್ ,ಬೆಂಗಳೂರಿನ ಮತ್ತು ಮೈಸೂರಿನ ಗೀತ ಬುಕ್ ಹೌಸ್,

ಅತ್ರೀ ಬುಕ್ ಹೌಸ್, ನವಕರ್ನಾಟಕ ,ಸಪ್ನಾ ಇವು ನನ್ನ ಭಂಡಾರ ದ ಹೆಚ್ಚಿನ ಪುಸ್ತಕಗಳನ್ನು ಕೊಟ್ಟವು.

ಮಾಹಿತಿ ಉಪಯುಕ್ತ ವಾಗಿದೆಯೆ?



akrutibooks.com  

sapnaonline.com       

gbhmysore.com                                                                                             

ಬುಧವಾರ, ಮಾರ್ಚ್ 6, 2013

BALLAMBETTU

Last year I happened read three books plotted around Ballmbettu.Starting with Yaksha Bahndari a biography of  veteran yakshagaana artist Sri Sheenappa Bhandari published by Mangalore University which i thoroughly enjoyed.His son  Mr Shridhar Bhandari also rose to become star artist.Senior Bhandari had a troupe called Ballambettu Mela.I recommend all art lovers read the book.
You can watch energetic Shridhara Bhandari performing(thanks to original up loader)
www.youtube.com/watch?v=ZC4AJ9oZ6cc


 Then came the Magnum Opus Sapna Saraswata  novel by Sri Ballembetttu Gopalakrishna Pai which won him Kenda Sahitya Academy Award.It is the story of Gouda Saraswath brahmins escaping Portuguese from Goa and migrating to south up to Cochin .One such family settles down after all ordeals at Ballambeedu later named Ballebettu.If you stand on the hillocks of Guttu,Guruvare,Dambeboole you will see the fertile valley called Ballambettu says a sentence in the novel.A well researched novel.
   Then came the childhood memories of Smt Shakuntala Kini  'Ballmbettina Baalya' which was serialized earlier in  kannada online magazine Kenasampige.She is also from Ballambettu.Now working at AIR Mangalore.I will write about this book later.

When you travel from Vittal to Kasaragod you pass trough Adyanadka , Perla, Ukkinadka ,Ballamettu,Pallathadka and Badiyadka. Fascinated by  so many Adkas one traveler exclaimed in Tulu Yethadka! that place where he uttered later was named Yethadka.
There is one more novel Enmakaje dealing with Endosulfan problem originally written in Malayalam translated to Kannada. This novel is plotted around this place.
Tail piece: There is a place called Swarga(meaning heaven)near Perla.Bus agents in Perla can seen shouting whoever want to go to Swarga pl. come.My friend Dr Rajesh Ballal got a shock  of the day  when one of the patients he operated upon called saying that he is speaking from Swarga!

ಮಂಗಳವಾರ, ಮಾರ್ಚ್ 5, 2013

WHICH OIL IS BETTER


OIL CONTROVERSY : IS FINAL WORD SAID?


 People are confused about the coking oil which is better for health. Companies


producing edible oils spend lot of money in advertising the so called cardio-p


rotectiveness of oils containing polyunsaturated fatty acids. Hence sunflower


Oil.olive oil, groundnut oil etc were heart friendly whereas coconut oil, palm oil


Groups were villains.



Now a study published in recent issue of BMJ calls this a bluff. It says over a period of


Time all cause mortality is higher in people consuming polyunsaturated fatty acids.




group.bmj.com › ... › BMJ Group Media Centre

When patients ask me which oil is better I am reminded of  kannada writer Beechi's


answer to query as to whether love marriage is good or arranged marriage? His reply


was who told at the first instance marriage is good? Anything in moderation is OK. Eating beyond


our    abilility  to spend  is definitely harmful.


Tail piece:    Dr K P Mishra well known cardiologist was giving a talk on obesity related


problems to bankers. He told body fat is like SB account.,whatever  you eat is credit and


physical exercise is like debit. One of audience got up rounding his protruding tummy


Sir what about this fixed deposit?