ಬೆಂಬಲಿಗರು
ಸೋಮವಾರ, ಏಪ್ರಿಲ್ 13, 2015
ಇಂಜೆಕ್ಷನ್ ಪುರಾಣವು
ಶುಕ್ರವಾರ, ಏಪ್ರಿಲ್ 10, 2015
ಮಾಂತ್ರಿಕ ವಿಡಂಬನೆಯ ವಿಜಾರ್ಡ್ ಆಫ್ ದಿ ಕ್ರೋ
ಸೋಮವಾರ, ಏಪ್ರಿಲ್ 6, 2015
ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು
ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು
ಮಳೆಯ ಬೇಸರ ಕಳೆಯಲು ಕತೆಯೊಂದನ್ನು ಹೇಳುವಂತೆ ಕೇಳಿದ
ಮನೋರಮೆ ಸಂಸ್ಕೃತ ದಲ್ಲಿ ಕಾವ್ಯ ವಾಚನ ಮಾಡಿದ ಮುದ್ದಣ್ಣನಿಗೆ
ಹೇಳಿದ ಮಾತು .ಅಂದರೆ ಸಾಧಾರಣ ಅಕ್ಷರ ಜ್ಞಾನವುಳ್ಳ ತನಗೆ ಸರಳ ಕನ್ನಡ
ವೇ ಅರಗಿಸಲು ಕಷ್ಟ ವಿರುವಾಗ ಸಂಸ್ಕೃತ ಯಾಕೆ ?
ಆದರೆ ಅಕಲೆಸಿಯ ಕಾರ್ಡಿಯಾ ಎಂಬ ಅಪರೂಪದ ಕಾಯಿಲೆಯಲ್ಲಿ
ಗಂಟಲಲ್ಲಿ ನೀರು ಇಳಿಯದು.ಅದರೆ ಕಡುಬು ಇಳಿಯುವುದು .ಅನ್ನ ನಾಳ
ಮತ್ತು ಜಠರದ ನಡುವೆ ಒಂದು ಕವಾಟ ಇದೆ .ಇದು ಸರಿ ಇಲ್ಲದಿದ್ದರೆ ಈ
ಪರಿಸ್ತಿತಿ ಬರುವುದು .
ಅನ್ನನಾಳದಲ್ಲಿ ಗಡ್ಡೆ ಬೆಳೆದರೂ ನುಂಗಲು ಕಷ್ಟ ,ಆದರೆ ಇಲ್ಲಿ ಘನ
ಆಹಾರ ಇಳಿಯದು,ದ್ರವ ಇಳಿಯ ಬಹುದು .ಕೆಲವು ಭಾರಿ ಮೆದುಳಿನ
ಅಥವಾ ಅನ್ನನಾಳದ ನರಗಳು ದುರ್ಬಲಗೊಂಡು ನುಂಗುವುದು
ಕಷ್ಟ ವಾಗುವುದು .ಇಂತಹ ಸಂದರ್ಭ ರೋಗಿಗೆ ಬಾಯಲ್ಲಿ ತಿನ್ನಲು
ಅಥವಾ ಕುಡಿಯಲು ಕೊಟ್ಟರೆ ಅದು ಹೊಟ್ಟೆಗೆ ಹೋಗುವ ಬದಲು
ಶ್ವಾಸಕೋಶ ಕ್ಕೆ ಹೋಗಿ ಕೆಮ್ಮು ಮತ್ತು ದಮ್ಮು ಉಂಟಾಗುವುದು .
ಇದಕ್ಕೆ ಪುನಃ ಬಾಯಲ್ಲಿ ಕೆಮ್ಮಿನ ಔಷಧಿ ಕೊಟ್ಟು ಪ್ರಯೋಜನ ಇಲ್ಲ .
ಬದಲಾಗಿ ಕೆಮ್ಮು ಇನ್ನೂ ಹೆಚ್ಚುವುದು . ಇದನ್ನು ಕಫ ಎಂದು ಭಾವಿಸಿ
ಚಿಕಿತ್ಸೆ ಮಾಡಿಸುವರು ,ಅದು ಸರಿಯಲ್ಲ ಇಂತಹ ಸಂದರ್ಭ ದಲ್ಲಿ ಟ್ಯೂಬಿನ
ಮೂಲಕ ಆಹಾರ ಕೊಡಬೇಕು .ಇಲ್ಲವೇ ಹೊಟ್ಟೆಯ ಮೇಲೆ ಒಂದು
ರಂಧ್ರ ಮಾಡಿ ನೇರ ಜಠರ ಕ್ಕೆ ಆಹಾರ ಕೊಡಬೇಕಾಗುವುದು ..
ಔಷಧಿ ಕಂಪೆನಿಗಳ ಪ್ರತಿನಿಧಿಗಳು ತಮ್ಮ ಮಾತ್ರೆಗಳು ಬೇರೆ ಕಂಪೆನಿಗಳಿಗೆ ಹೊಲಿಸಿದರೆ ಗಾತ್ರದಲ್ಲಿ ಬಹಳ ಸಣ್ಣದಾಗಿದ್ದು ನುಂಗಲು ಬಲು ಸುಲಭ ಎನ್ನುವರು .ನನ್ನ ಮೇಲೆ ಅದು ಪ್ರಭಾವ ಬೀರುವುದಿಲ್ಲ .ಮಾತ್ರೆ ತುಂಬಾ ಸಣ್ಣ ಇದ್ದರೆ ನುಂಗಲು ಕಷ್ಟ ,ಅಲ್ಲದೆ ಅದು ಗಂಟಲಿನ ಬದಿಯಲ್ಲಿ ಸಿಕ್ಕಿಕೊಂಡಂತೆ ಆಗುವುದು.ನೀವು ಒಂದು ಕಾಳು ಅಕ್ಕಿ ಮತ್ತು ಒಂದು ತುಂಡು ಇಡ್ಲಿ ತಿಂದು ನೋಡಿರಿ .ಯಾವುದು ಸುಲಭವಾಗಿ ಇಳಿಯುವುದು ?ಇದರಲ್ಲಿ ಗುರುತ್ವಾಕರ್ಷಣ ವೂ ಭಾಗಶಃ ಕೆಲಸ ಮಾಡುವುದು .
ಶನಿವಾರ, ಏಪ್ರಿಲ್ 4, 2015
ಬ್ರಾಹ್ಮಣ ನೆಂದರೆ ಯಾರು ?
ಹೆಬ್ಬಾವು ರೂಪದಲ್ಲಿ ಇರುವ ನಹುಷ ಆಕ್ರಮಿಸಿ ಹಿಡಿದು ಸುತ್ತಿ ಕೊಳ್ಳುವನು,ಬಲ
ಭೀಮನಿಗೂ ಅವನಿಂದ ಬಿಡಿಸಿ ಕೊಳ್ಳಲು ಆಗುವುದಿಲ್ಲ .ಆಗ ತಮ್ಮನನ್ನು ಹುಡುಕಿ
ಕೊಂದು ಬಂದ ಧರ್ಮರಾಯ ನಿಗೆ ತನ್ನ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ
ಕೊಟ್ಟರೆ ತಮ್ಮನನ್ನು ಬಿಡುವುದಾಗಿ ನಹುಷ ಹೇಳುವನು .
ನಹುಷ : ಯಾರನ್ನು ಬ್ರಾಹ್ಮಣ ಎಂದು ಕರೆಯುತ್ತೇವೆ ?
ಧರ್ಮರಾಯ :ಸತ್ಯವಂತ ,ದಯವಂತ ,ದಾನಶೀಲ ,ಕ್ಷಮೆ ಮತ್ತು ಸ್ವಯಂ ಮನ
ಹತೋಟಿ ಇರುವವನು ಬ್ರಾಹ್ಮಣ .
ನಹುಷ :ಆದರೆ ಇದು ಚಾತುರ್ವರ್ಣ ಪದ್ಧತಿ ಗೆ ವಿರುದ್ದವಾಯಿತು .ಈ ಗುಣಗಳು
ಶೂದ್ರನಲ್ಲಿಯೂ ಇರ ಬಹುದು ಸದ್ಗುಣಗಳು ಯಾವದೇ ಜಾತಿಯ ಸೊತ್ತಲ್ಲ .
ಧರ್ಮರಾಯ :ನಿಜ .ಬ್ರಾಹ್ಮಣನಾಗಿ ಹುಟ್ಟಿದರೂ ಸದಾಚಾರ ,ಸದ್ಗುಣ ಇಲ್ಲದಿದ್ದರೆ
ಅವನು ಶೂದ್ರನೆ .ಅದೇ ಮೇಲೆ ಹೇಳಿದ ಒಳ್ಳೆಯ ಗುಣಗಳನ್ನು ರೂಡಿಸಿ ಕೊಂಡ
ಯಾರೇ ಬ್ರಾಹ್ಮಣ ಎನಿಸಿಕೊಳ್ಳುವನು .
ಭಗವದ್ಗೀತೆ ಯ ೧೮ ನೆ ಅಧ್ಯಾಯ ದ ೪೨ ನೆ ಶ್ಲೋಕದಲ್ಲಿ ಇದನ್ನೇ ಹೇಳಲಾಗಿದೆ .
ಶಾಂತ ಪ್ರಕೃತಿ ಸ್ವಯಂ ಶಾಸನ ,ಸರಳ ಜೀವನ ,ಶುದ್ದಾಂತಃ ಕರಣ .ಕ್ಷಮೆ
ಪ್ರಾಮಾಣಿಕತೆ ,ಜ್ಞಾನದಾಹ ಮತ್ತು ಧಾರ್ಮಿಕತೆ ಇದ್ದವನು ಬ್ರಾಹ್ಮಣ .
ಹಿರಿಯ ಬಾಳು ಬಾಳಿದ ಸರಳ ಜೀವಿಗಳು
ನಾರಾಯಣ್ ದೇಸಾಯಿ ಬಗ್ಗೆ ಬರೆದಿದ್ದರು .ಗಾಂಧೀಜಿಯವರ ಆಪ್ತ ಕಾರ್ಯದರ್ಶಿ
ಯಾಗಿದ್ದ ಮಹಾದೇವ ದೇಸಾಯಿ ಅವರ ಪುತ್ರ .ಕೊನೆ ತನಕ ಗಾಂಧಿ ವಾದಿ
ಯಾಗಿಯೇ ಬದುಕಿದವರು .ಗಾಂಧಿ ಬಗೆಗಿನ ಸೆಮಿನಾರ್ ಒಂದಕ್ಕೆ ದೆಹಲಿಗೆ
ಬಂದಿದ್ದ ಗಣ್ಯರು ಕೊನೆ ದಿನ ವಿಮಾನ ಪಯಣದ ಟಿ ಎ ತೆಗೆದು ಕೊಳ್ಳುವ
ಧಾವಂತ ಈ ಮನುಷ್ಯ ತಾನು ರೈಲಿನಲ್ಲಿ ಬಂದುದಾಗಿಯೂ ,ನನ್ನ ಮನೆಗೆ
ಹೋಗಲು ನನಗೆ ಬೇರೆ ಹಣದ ಅವಶ್ಯ ಇಲ್ಲ ಎಂದು ಹೇಳಿದರು ಎಂದು ಬರೆದಿದ್ದಾರೆ .
ಸರಳ ಜೀವನವನ್ನು ತಮ್ಮ ಸಹಜ ಶೈಲಿ ಯಾಗಿ ಮಾಡಿಕೊಂಡ ಮಹನೀಯರು .
ಇದನ್ನು ಓದುವಾಗ ನನಗೆ ನಮ್ಮವರೇ ಆದ ಎಚ್ ನರಸಿಂಹಯ್ಯ
ಅವರ ನೆನಪಾಯಿತು .ಅವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಗಿದ್ದಾಗ
ರಾಜ್ಯದಾದ್ಯಂತ ಸಂಚರಿಸ ಬೇಕಿತ್ತು .ಸರಕಾರದ ಸಚಿವ ಸಮಾನ ಹುದ್ದೆ .ಆದರೂ
ಅವರು ರೈಲಿನ ಎರಡನೇ ದರ್ಜೆಯಲ್ಲಿ ಸಂಚರಿಸಿ ಅದೇ ದರ್ಜೆಯ ಪ್ರಯಾಣ ಭತ್ತೆ
ಪಡೆದರು .ಅಲ್ಲದೆ ತಮ್ಮ ಕಚೇರಿಗೆ ಬರುತ್ತಿದ್ದ ವೃತ್ತ ಪತ್ರಿಕೆಗಳ ಹಳೆಯ
ಪ್ರತಿಗಳನ್ನು ಮಾರಿ ಸರಕಾರದ ಖಜಾನೆಗೆ ಪಾವತಿಸುತ್ತಿದ್ದರು .ಈ ವಿಷಯಗಳ
ಬಗ್ಗ್ಗೆ ಅವರ ಜೀವನ ಚರಿತ್ರೆ ಹೋರಾಟದ ಬದುಕು ವಿನಲ್ಲಿ ಬರೆದಿರುವರು .
ಲಾಲ್ ಬಹಾದುರ್ ಶಾಸ್ತ್ರೀಯವರೂ ಹೀಗೆಯೇ ಬದುಕಿದವರು .
ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಮಂಗಳೂರಿಗೆ ಆಗಮಿಸಿದ್ದರು .ಆ ಸಮಯ
ಕದ್ರಿ ಯ ಪ್ರವಾಸಿ ಬಂಗಲೆಯ ಸಾಧಾರಣ ಕೋಣೆಯಲ್ಲಿ ಉಳಕೊಂಡು ಅಲ್ಲಿ
ಇದ್ದ ವಾತಾನುಕೂಲ ಕೋಣೆಯನ್ನು ಬಂದಿದ್ದ ರಾಜ್ಯದ ಮುಖ್ಯ ಮಂತ್ರಿ
ನಿಜಲಿಂಗಪ್ಪನವರಿಗೆ ಬಿಟ್ಟು ಕೊಟ್ಟರು .ಈ ಬಗ್ಗೆ ಆಗ ಜಿಲ್ಲೆಯ ಜಿಲ್ಲಾಧಿಕಾರಿ
ಯಾಗಿದ್ದು ಮುಂದೆ ಸರ್ಕಾರದ ಕಾರ್ಯದರ್ಶಿಯಾಗಿ ನಿವೃತ್ತರಾದ ಶ್ರೀ
ರಾಮಚಂದ್ರನ್ ಅವರು ತಮ್ಮ ವೃತ್ತಿ ಜೀವನ ಚಿತ್ರ ತಾಬೇದಾರಿ ಯಲ್ಲಿ
ಉಲ್ಲೇಖಿಸಿದ್ದಾರೆ .
ಇಂತಹವರು ಈಗ ಬಹಳ ಅಪರೂಪ ಆಗುತ್ತಿದ್ದಾರೆ .ಸರಳತೆಯ ಭೋಧನೆ
ಮಾಡುವವರು ಸ್ವಯಂ ಐಶಾರಮ ಜೀವನ ನಡೆಸುತ್ತಿದ್ದಾರೆ.ಸರಕಾರಿ ನೌಕರರೂ
ಸಮಾಜದ ಹಣವನ್ನು ಬೇಕಾಬಿಟ್ಟಿ ಬಳಸುತ್ತಿದ್ದಾರೆ .ಸಮಾಜದ ಕೊನೆಯ ವ್ಯಕ್ತಿ
ಕೂಡ ಗೌರವಾನ್ವಿತ ವಾಗಿ ಬದುಕುವ ಸನ್ನಿವೇಶ ಬರುವ ವರೆಗೂ ಉಳ್ಳವರು
ತಮ್ಮ ಐಶ್ವರ್ಯ ಪ್ರದರ್ಶನ ಮಾಡುವುದು ಮಾನವಿಯತೆಗೂ ಸಮಾಜದ
ಸ್ವಾಸ್ಥ್ಯಕ್ಕೂ ಒಳ್ಳೆಯದಲ್ಲ .
ಗುರುವಾರ, ಏಪ್ರಿಲ್ 2, 2015
ಆಶಿರ್ವಾದವೇ ಉಡುಗೊರೆ
ಇನ್ ಬ್ಲೆಸ್ಸಿ೦ ಗ್ಸ್ ಓನ್ಲಿ ಇತ್ಯಾದಿಯಾಗಿ ಎಚ್ಚರಿಸುವುದು ಸಾಮಾನ್ಯವಾಗಿದೆ.
ಆಹ್ವಾನಿತರು ಉಡುಗೊರೆ ಕೊಡಬೇಕಲ್ಲಾ ಎಂದು ಚಿಂತಿಸಿ ಮದುವೆಗೆ ಹೋಗದೇ
ಇರುವುದು ಬೇಡ ಎಂಬ ಸದಾಶಯ ಇರ ಬಹುದು .ನಮ್ಮ ಮನೆಯಲ್ಲಿಯೇ ಬೇಡದ
ಬಟ್ಟೆ ತಟ್ಟೆ ಗಡಿಯಾರಗಳು ತುಂಬಿವೆ ಇನ್ನು ನೀವೂ ಇನ್ನಷ್ಟು ಕೊಟ್ಟರೆ ಏನು
ಮಾಡುವುದು ? ಎಂಬ ಚಿಂತೆಯೂ ಇದರ ಹಿಂದೆ ಇರ ಬಹುದು .ಏನೇ ಇರಲಿ .
ಕೆಲವು ಇಂಗ್ಲಿಷ್ ಆಮಂತ್ರಣ ಪತ್ರಿಕೆಯಲ್ಲಿ ಅರ್ ಎಸ್ ವಿ ಪಿ .(RSVP)
ಎಂದು ಬರೆದಿರುತ್ತಾರೆ .ಇದು ಫ್ರೆಂಚ್ ನುಡಿಗಟ್ಟು ಒಂದರ ಅಪಭ್ರ೦ಶ.ಅಂದರೆ
ಸಾಧ್ಯವಾದರೆ ಈ ಪತ್ರಕ್ಕೆ ಉತ್ತರಿಸಿರಿ .ಎಂದರೆ ನೀವು ಬರುತ್ತೀರೋ ಇಲ್ಲ್ಲವೋ
ತಿಳಿಸಿ .ಅದರ ಪ್ರಕಾರ ಅತಿಥೇಯರು ಔತಣ ಏರ್ಪಡಿಸುವರು .ನಮ್ಮಲ್ಲಿ ಈ
ಪದ್ಧತಿ ಇದ್ದರೆ ಎಷ್ಟೋ ಆಹಾರ ಪದಾರ್ಥ ನಷ್ಟ ವಾಗುವುದನ್ನು ತಪ್ಪಿಸ ಬಹುದು .
ಖ್ಯಾತ ಲೇಖಕ ರೊಬ್ಬರು ತನ್ನ ಏಳಮೆಯಲ್ಲಿ RSVP ಯನ್ನು ರಸಂ ಸಾಂಭಾರ್
ವಡೆ ಪೊಂಗಲ್ ಎಂದು ಮೆನು ಇರಬೇಕು ಎಂದು ಭಾವಿಸಿದ್ದಾಗಿ ತಮ್ಮ ಆತ್ಮ
ಚರಿತ್ರೆಯಲ್ಲಿ ಬರೆದಿದ್ದಾರೆ .
ಇನ್ನು ಕೆಲವು ಆಮಂತ್ರಣ ಪತ್ರಿಕೆಯಲ್ಲಿ ವಿಷಾದಿಸುವುದಿದ್ದರೆ ಮಾತ್ರ ಉತ್ತರಿಸಿ
ಎಂದು ಬರೆದಿರುತ್ತಾರೆ .ರಿಪ್ಲೈ ಇಫ್ ರಿಗ್ರೆಟ್ಸ್.ಎಂದರೆ ನಿಮಗೆ ಬರಲು
ಅನಾನುಕೂಲವಿದ್ದಲ್ಲಿ ಮಾತ್ರ ಉತ್ತರಿಸಿರಿ .ಅಂದರೆ ನಿಮ್ಮಿಂದ ಪ್ರತಿಕ್ರಿಯೆ
ಬರದಿದ್ದಲ್ಲಿ ಭೋಜನ ಲೆಕ್ಕ ಕ್ಕೆ ನಿಮ್ಮನ್ನೂ ಸೇರಿಸಲಾಗುವುದು ಎಂದರ್ಥ .ಅಲ್ಲ
ಅವರ ಮಗಳಿಗೋ ಮಗನಿಗೋ ಮದುವೆ ಆದರೆ ನೀವೇಕೆ ವಿಷಾದಿಸ ಬೇಕು
ಎಂದು ಚಿಂತೆ ಮಾಡ ಬೇಡಿ .
ಆಯಿತು ನೀವು ಆಮಂತ್ರಣ ಬಂತು ಎಂದು ನೀವು ಮುಹೂ ರ್ಥ ಕ್ಕೆ ಸರಿಯಾಗಿ
ಹೋದರೆ ಎಲ್ಲರೂ ಮೇಲೆ ಕೆಳಗೆ ನೋಡುವರು .ನಿಮ್ಮ ಪ್ರತಿಷ್ಠೆ ಉಳಿಯ
ಬೇಕಾದರೆ ಭೋಜನ ವೇಳೆ ತೆರಳಿ ಮದು ಮಕ್ಕಳಿಗೆ ಶುಭ ಹಾರೈಸುವ ಶಾಸ್ತ್ರ
ಮಾಡ ಬೇಕು .ಅಲ್ಲಿಯೂ ನಿಮ್ಮಂತೆ ಬಂದವರ ಉದ್ದ ಕ್ಯೂ ಇರುವುದು .ಕೆಲವು
ಬುದ್ದಿವಂತರು ಸಿನೆಮಾ ಹಾಲ್ ,ರೈಲ್ವೆ ಟಿಕೆಟ್ ಕೌಂಟರ್ ನಲ್ಲಿ ಮಾಡಿದಂತೆ
ಇಲ್ಲೂ ಕ್ಯೂ ಜಂಪ್ ಮಾಡುವರು .ಅಂತೂ ನಿಮ್ಮ ಸರದಿ ಬರುವಾಗ ನಿನಗಿಂತ
ಮೊದಲು ಬಂದ ವಿ ಆಯ ಪಿ ಯವರ ವೀಡಿಯೊ ಆಗುತ್ತಿರುತ್ತದೆ .ನಿಮ್ಮನ್ನು
ಎಲ್ಲರೂ ಬದಿಗೆ ತಳ್ಳುವರು .ಬೇಸರ ಮಾಡ ಬೇಡಿ .ಒಳ್ಳೆಯ ಊಟ ನಿಮಗಾಗಿ
ಕಾದಿರುತ್ತದೆ .
ಒಂದು ಪ್ರಸಿದ್ದ ಉದ್ಯಮಿಯ ಮಗನ ಮದುವೆಗೆ ಹೋಗಿದ್ದೆ .ಇದ್ದ ಬದ್ದವರಿಗೆಲ್ಲ್ಲಾ
ಆಮಂತ್ರಣ ಕೊಟ್ಟಿದ್ದರು .ಮದು ಮಕ್ಕಳಿಗೆ ಹಾರೈಸಲು ಹೋದಾಗ ತಂದೆ
ತಾಯಿ ಯಥಾ ಪ್ರಕಾರ ಊಟ ಮಾಡಿಯೇ ಹೋಗಿ ಎಂದರು .ಕೆಳಗೆ ಭೋಜನ
ಶಾಲೆಗೆ ಹೋದರೆ ಎಲ್ಲಾ ಖಾಲಿ .ಹಸಿದು ಕೊಂಡೆ ಮನೆಗೆ ಮರಳಿದೆವು .
ಇದಕ್ಕೆ ಪರಿಹಾರ ಮೊದಲು ಊಟಕ್ಕೆ ಹೋಗುವುದು .ಹೇಗೂ ವೀಡಿಯೊ ದಲ್ಲಿ
ನೀವು ಊಟ ಮಾಡುವ ಚಿತ್ರ ನಿಮ್ಮ ಹಾಜರಿಯನ್ನು ಸಾಕ್ಷಿಕರಿಸುತ್ತ್ತದೆ .
ಮೊದಲು ನಮ್ಮ ಕಡೆ ಮದುವೆ ಮನೆಯಲ್ಲಿ ಅಡಿಕೆ
ಭತ್ತ ಬೆಳೆಯ ಬಗ್ಗೆ ,ಕುಟುಂಬ ದವರ ಆರೋಗ್ಯದ ಬಗ್ಗೆ ಉಭಯಕುಶಲೋಪರಿ
ನಡೆಯುತ್ತಿತ್ತು .ಈಗ ಸಿ ಇ ಟಿ., ಕ್ಯಾಂಪಸ್ ಅಗಿದೋ ,ಅಮೇರಿಕಾ ಬಾಳಂತನ
ಇತ್ಯಾದಿಗಳು ಮೇಲಿನ ವಿಷಯಗಳ ಜಾಗ ಆಕ್ರಮಿಸಿವೆ .ಅಜ್ಜ ಅಜ್ಜಿಯವರಿಗೆ
ಹಿಂದಿನ ಹಾಗೆ ಅಗ್ರ ಮಣೆ ಕಾಣೆಯಾಗಿದೆ ..
ನಿಮಗೆ ಅನಿಸಿದೆಯೋ ಗೊತ್ತಿಲ್ಲ ,ಹಲವು ಕಾರ್ಯಕ್ರಮಗಳಿಗೆ ಹೋಗಿ ಬಂದ
ಮೇಲೆ ಅಲ್ಲಿ ಹೋಗದಿದ್ದರೂ ನಡೆಯುತ್ತಿತ್ತು ಎಂದು ಅನಿಸುತ್ತದೆ .ಕೆಲವು
ಕಡೆ ನಮ್ಮ ಅದೃಷ್ಟ ಒಳ್ಳೆಯದಿದ್ದರೆ ಇಲ್ಲಿಗೆ ಬಾರದಿದ್ದರೆ ಎಷ್ಟು ಕಳೆದು ಕೊಳ್ಳುತ್ತಿದ್ದ್ದೆ
ಎಂದೂ ತೋರಿದ್ದುಂಟು .


