ಬೆಂಬಲಿಗರು

ಸೋಮವಾರ, ಮಾರ್ಚ್ 16, 2026

ಸಕ್ಕರೆ ಕಾಯಿಲೆಯ ರೋಗ ಲಕ್ಷಣಗಳು

 ಆಂಗ್ಲ ಭಾಷೆಯಲ್ಲಿ ಮೂರು ಮುಖ್ಯ 'P' ಗಳು Polyuria (ಹೆಚ್ಚು ಮೂತ್ರ ಶಂಕೆ ),Polydipsia (ಅರದ ದಾಹ )Polyphagia (ತಣಿಯದ ಹಸಿವು ) ಮಧು ಮೇಹದ ಮುಖ್ಯ ಲಕ್ಷಗಳು ಎಂದು ವರ್ಣಿಸುತ್ತಾರೆ . 

ಅತೀ ಮೂತ್ರ ಮತ್ತು ದಾಹ ಏಕೆ ?

ಮೂತ್ರ ಪಿಂಡಗಳು ಅನಪೇಕ್ಷಿತ ವಸ್ತುಗಳನ್ನು ಫಿಲ್ಟರ್ ಮಾಡಿ ಹೊರ ಹಾಕುವಾಗ ಜತೆಗೆ ಹೋದ  ಗ್ಲುಕೊಸನ್ನು ಪುನಃ  ವಾಪಸು ಹೀರಿಕೊಳ್ಳುತ್ತವೆ . ಆದರೆ ಇದಕ್ಕೆ ಒಂದು ಪರಿಮಿತಿ ಇದೆ . ರಕ್ತದ ಗ್ಲುಕೊಸ ಪ್ರಮಾಣ 180 mg /dl  ಗಿಂತ ಜಾಸ್ತಿ ಇದ್ದರೆ ಅದು ಮೂತ್ರದಲ್ಲಿ ವಿಸರ್ಜನೆ ಆಗಿ ಹೋಗುತ್ತದೆ . ಸರ್ಪದಲ್ಲಿ ಯಾಗ ದಲ್ಲಿ  ತಕ್ಷಕನ ಜತೆ ಇಂದ್ರನು ಬಂದಂತೆ glucose ಜತೆ ನೀರೂ ಹೋಗುತ್ತದೆ . ಇದರಿಂದ ಉಂಟಾದ ನಿರ್ಜಲತೆ ಮತ್ತು ರಕ್ತದಲ್ಲಿ ಏರಿದ ಸಕ್ಕರೆ ಪ್ರಮಾಣ  ಇವೆರಡು ಸೇರಿ ರಕ್ತದ ಸಾಂದ್ರತೆ ಯನ್ನು ಏರಿಸುತ್ತವೆ . ನಮ್ಮ ಮೇದುಳಿನಲ್ಲಿ ದಾಹದ ಕೇಂದ್ರ ಎಂದು ಇದೆ . ರಕ್ತದ  ಸಾಂದ್ರತೆ ಏರಿದೊಡನೆ ಅದು ನೀರು ಕುಡಿಯಲು ಪ್ರೇರೇಪಿಸುತ್ತದೆ . ಅದೇ ಬಾಯಾರಿಕೆ . 

ತಣಿಯದ ಹಸಿವು 

ಕವಿಯೊಬ್ಬ ಸಮುದ್ರದ ನಡುವೆ  "water water everywhere nor any drop to drink' ಎಂದು ಹೇಳಿದಂತೆ ಮಧುಮೇಹ ದಲ್ಲಿ ಇನ್ಸುಲಿನ್ ಕೊರತೆ ಮತ್ತು ಪ್ರತಿರೋಧ ದಿಂದ ರಕ್ತದಲ್ಲಿ ಯಥೇಚ್ಛ ಸಕ್ಕರೆ ಇದ್ದರೂ ಜೀವಕೋಶ ಗಳಿಗೆ ಪ್ರವೇಶ  ಇಲ್ಲದ ಕಾರಣ ,ಮೇದುಳಿನಲ್ಲಿ ಇರುವ ಹಸಿವಿನ ಕೇಂದ್ರ ನಮ್ಮನ್ನು ಹೆಚ್ಚು ಹೆಚ್ಚು  ಆಹಾರ ಸೇವಿಸಲು ಪ್ರೇರೇಪಿಸುವುದು .

ಇವಲ್ಲದೆ ಇನ್ನೂ ಕೆಲವು ರೋಗ ಲಕ್ಷಣಗಳು ಇವೆ . 

ಶರೀರ ಬಚ್ಚುವುದು ಅಥವಾ ತೂಕ ಇಳಿಕೆ . 

ಜೀವಕೋಶಗಳಿಗೆ ಗ್ಲುಕೊಸ  ಸರಬರಾಜು ಆಗದ ಕಾರಣ ಶಕ್ತಿಯ ಉರುವಲು ಆಗಿ ಅನ್ಯ ಮಾರ್ಗಗಳನ್ನು ಹುಡುಕ ಬೇಕಾಗುತ್ತದೆ .(ಈಗಿನ ಎಲ್ ಪಿ ಜಿ ಸಮಸ್ಯೆ ಯಂತೆ ). ಅದಕ್ಕಾಗಿ ಶರೀರ  ಶೇಖರಿತ ಕೊಬ್ಬು ಮತ್ತು ಮಾಂಸ ಖಂಡಗಳನ್ನು ಜೀರ್ಣಿಸಿ ಶಕ್ತಿ ಉತ್ಪಾದನೆಗೆ ಪ್ರಯತ್ನಿಸುವುದು . ಇದರಿಂದ ಮತ್ತು ಮೇಲೆ ವಿವರಿಸಿದ ನಿರ್ಜಲತೆ ಯೂ ಸೇರಿ ಶರೀರ ಬಡವಾಗುವುದು . 

ಜನನಾಂಗಗಳ ಫಂಗಸ್ ಸೋಂಕು , ಗುಣವಾಗದ ಗಾಯಗಳು (ರೋಗ ನಿರೋಧಕ ಶಕ್ತಿ ಕುಂದುವಿಕೆ ಯಿಂದ )ದೃಷ್ಟಿ ಮಂಜು ಕೂಡಾ ಮಧು ಮೇಹದ ಆರಂಭ ಸೂಚನೆ ಇರ ಬಹುದು .

 

ಶುಕ್ರವಾರ, ಮಾರ್ಚ್ 13, 2026

ಶಕ್ತಿ ಚಕ್ರ

 ಶಕ್ತಿಯ ಮೂಲ ಸೂರ್ಯ . ಅವನ  ಕಿರಣಗಳ ಮೂಲಕ ಶಕ್ತಿ  ಸಸ್ಯ ರಾಶಿಯ ಮೇಲೆ ಬಿದ್ದು ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಯುವುದು .ಈ  ಮೂಲಕ ಕಾರ್ಬನ್ ಡೈಆಕ್ಸೈಡ್ ಮತ್ತು ನೀರನ್ನು ಸೇರಿಸಿ ಶಕ್ತಿ ಸಂಚಯಿತ ಪಿಷ್ಟ ಅಥವಾ ಕಾರ್ಬೋ ಹೈಡ್ರೇಟು ಉತ್ಪಾದನೆ . 

ನಮ್ಮ ಆಹಾರದಲ್ಲಿ ಸೇವನೆ ಆದ ಪಿಷ್ಟ ಕರುಳಿನಲ್ಲಿ ಪಚನ ಗೊಂಡು ಗ್ಲುಕೋಸ್ ಆಗಿ ಮಾರ್ಪಟ್ಟು ರಕ್ತ ಸೇರುವುದು . ಗ್ಲುಕೋಸ್ ಜೀವಕೋಶಗಳ ಪ್ರವೇಶ ಮಾಡಲು ಬೀಗ ತೆಗೆದು  ಅನುವು ಮಾಡಿ ಕೊಡುವುದು ಇನ್ಸುಲಿನ್ . ಶರೀರದ ನಖ ಶಿಖಾಂತ ಜೀವ ಶ್ವಾಸ ಮೂಲಕ ಸರಬರಾಜಾದ ಆಮ್ಲಜಕವನ್ನು ಉರುವಲಾಗಲಿ ಉಪಯೋಗಿಸಿ  ಕೋಶಗಳಲ್ಲಿ ರಾಸಾಯನಿಕ ಕ್ರಿಯೆ ಮೂಲಕ ಗ್ಲುಕೋಸ್ ಒಡೆಯಲ್ಪಟ್ಟು ಕಾರ್ಬನ್ ಡೈಆಕ್ಸೈಡ್ ,ನೀರು ಮತ್ತು ಶಕ್ತಿ ಬಿಡುಗಡೆ ಆಗುವುದು . ಕಾರ್ಬನ್ ಡೈಆಕ್ಸೈಡ್ ಉಸಿರಿನ ಮೂಲಕ ,ನೀರು ಮೂತ್ರ ಮತ್ತು ಉಸಿರಿನ ಮೂಲಕ ಹೊರ ಹಾಕಲ್ಪಟ್ಟರೆ ಶಕ್ತಿ ಅಂಗೋಪಾಂಗಗಳ ಕಾರ್ಯ ನಿರ್ವಹಣೆಗೆ ವ್ಯಯ ಆಗುವುದು .

ಇದು ಶಕ್ತಿಯ ಚಕ್ರ  

 PHOTOSYNTHESIS | Photosynthesis process ...

 Cellular Respiration | PPT

ಇನ್ಸುಲಿನ್ ಮತ್ತು ಗ್ಲುಕಾಗನ್: ದೇಹದ ಶಕ್ತಿಯ ಸಮತೋಲನದ ರಕ್ಷಕರು

ಪರಿಚಯ

ನಮ್ಮ ದೇಹದಲ್ಲಿ ಶಕ್ತಿಯ ಮೂಲವಾದ ಗ್ಲೂಕೋಸ್ ಅನ್ನು ನಿಯಂತ್ರಿಸುವಲ್ಲಿ ಎರಡು ಪ್ರಮುಖ ಹಾರ್ಮೋನ್‌ಗಳು — ಇನ್ಸುಲಿನ್ ಮತ್ತು ಗ್ಲುಕಾಗನ್ — ಅತ್ಯಂತ ಮುಖ್ಯ ಪಾತ್ರ ವಹಿಸುತ್ತವೆ. ಇವು ಎರಡೂ ಮೇದೋಜೀರಕ ಗ್ರಂಥಿ (Pancreas) ಯಿಂದ ಉತ್ಪತ್ತಿಯಾಗುತ್ತವೆ ಮತ್ತು ಪರಸ್ಪರ ವಿರುದ್ಧ ಕಾರ್ಯನಿರ್ವಹಿಸುತ್ತವೆ.


ಇನ್ಸುಲಿನ್

  • ಉತ್ಪತ್ತಿ: ಮೇದೋಜೀರಕ ಗ್ರಂಥಿ ಯ (ಪ್ಯಾಂಕ್ರಿಯಾಸ್) ಬೀಟಾ ಕೋಶಗಳು (Beta cells)

  • ಮುಖ್ಯ ಕಾರ್ಯ:

    • ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾದಾಗ ಅದನ್ನು ಕಡಿಮೆ ಮಾಡುವುದು

    • ಗ್ಲೂಕೋಸ್ ಅನ್ನು ಕೋಶಗಳೊಳಗೆ ಸೇರಿಸಿ ಶಕ್ತಿಯಾಗಿ ಬಳಸಲು ಸಹಾಯ ಮಾಡುವುದು

    • ಹೆಚ್ಚುವರಿ ಗ್ಲೂಕೋಸ್ ಅನ್ನು ಗ್ಲೈಕೋಜನ್ ರೂಪದಲ್ಲಿ ಯಕೃತ್ (Liver) ಮತ್ತು ಸ್ನಾಯುಗಳಲ್ಲಿ ಸಂಗ್ರಹಿಸುವುದು

  • ಮಹತ್ವ: ಇನ್ಸುಲಿನ್ ಇಲ್ಲದೆ ದೇಹದ ಕೋಶಗಳು ಗ್ಲೂಕೋಸ್ ಅನ್ನು ಬಳಸಲು ಸಾಧ್ಯವಿಲ್ಲ. ಇದರಿಂದ ಡಯಾಬಿಟಿಸ್ ಮೆಲ್ಲಿಟಸ್ ಎಂಬ ರೋಗ ಉಂಟಾಗುತ್ತದೆ.


ಗ್ಲುಕಾಗನ್

  • ಉತ್ಪತ್ತಿ: ಮೇದೋಜೀರಕ ಗ್ರಂಥಿ ಯ (ಪ್ಯಾಂಕ್ರಿಯಾಸ್) ಆಲ್ಫಾ ಕೋಶಗಳು (Alpha cells)

  • ಮುಖ್ಯ ಕಾರ್ಯ:

    • ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾದಾಗ ಅದನ್ನು ಹೆಚ್ಚಿಸುವುದು

    • ಯಕೃತ್‌ನಲ್ಲಿ ಸಂಗ್ರಹವಾಗಿರುವ ಗ್ಲೈಕೋಜನ್ ಅನ್ನು ಪುನಃ ಗ್ಲೂಕೋಸ್ ಆಗಿ ವಿಭಜಿಸಿ ರಕ್ತಕ್ಕೆ ಬಿಡುಗಡೆ ಮಾಡುವುದು

    • ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವುದು, ವಿಶೇಷವಾಗಿ ಉಪವಾಸದ ಸಮಯದಲ್ಲಿ

  • ಮಹತ್ವ: ಗ್ಲುಕಾಗನ್ ಇಲ್ಲದೆ ದೇಹವು ಉಪವಾಸ ಅಥವಾ ಹಸಿವಿನ ಸಮಯದಲ್ಲಿ ಶಕ್ತಿಯನ್ನು ಪಡೆಯಲು ಸಾಧ್ಯವಿಲ್ಲ.


ಇನ್ಸುಲಿನ್ ಮತ್ತು ಗ್ಲುಕಾಗನ್ ನಡುವಿನ ಸಮತೋಲನ

  • ಇನ್ಸುಲಿನ್: ಗ್ಲೂಕೋಸ್ ಕಡಿಮೆ ಮಾಡುವುದು

  • ಗ್ಲುಕಾಗನ್: ಗ್ಲೂಕೋಸ್ ಹೆಚ್ಚಿಸುವುದು

  • ಇವು ಎರಡೂ ಸೇರಿ ದೇಹದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿ ಇಡುತ್ತವೆ.

  • ಈ ಸಮತೋಲನವೇ ದೇಹದ ಶಕ್ತಿಯ ನಿರ್ವಹಣೆಗೆ ಅತ್ಯಂತ ಅಗತ್ಯ.


ಸಮಾರೋಪ ನೈಜ ಪ್ರಜಾಪ್ರಭತ್ವ ದಲ್ಲಿ ಚೆಕ್ಸ್ ಅಂಡ್ ಬ್ಯಾಲೆನ್ಸ್ ಆಗಿ ನ್ಯಾಯಾಂಗ ,ಪತ್ರಿಕೆಗಳು ವಿರೋಧ ಪಕ್ಷಗಳು ಇರುವಂತೆ ಇನ್ಸುಲಿನ್ ಗೆ ಗ್ಲುಕಾಗನ್ .

ಇನ್ಸುಲಿನ್ ಮತ್ತು ಗ್ಲುಕಾಗನ್ — ಇವು ದೇಹದ ಶಕ್ತಿಯ ರಕ್ಷಕರು. ಇನ್ಸುಲಿನ್ ಗ್ಲೂಕೋಸ್ ಅನ್ನು ಕಡಿಮೆ ಮಾಡಿ ಸಂಗ್ರಹಿಸುತ್ತದೆ, ಗ್ಲುಕಾಗನ್ ಅದನ್ನು ಹೆಚ್ಚಿಸಿ ಬಿಡುಗಡೆ ಮಾಡುತ್ತದೆ. ಇವುಗಳ ಸಮತೋಲನವೇ ಆರೋಗ್ಯಕರ ಜೀವನಕ್ಕೆ ಮೂಲಭೂತ ಅಂಶ.